ಸಂಗ್ರಹ ಚಿತ್ರ 
ದೇಶ

ಮದುವೆ ಹೆಸರಲ್ಲಿ ವಂಚಿಸುತ್ತಿದ್ದ ಮಹಿಳೆ ಬಂಧನ; 11 ಮದುವೆಯಾದ 26ರ ಯುವತಿ!

ಮದುವೆ ಹೆಸರಲ್ಲಿ ಬರೊಬ್ಬರಿ 11 ಪುರುಷರಿಗೆ ಮೊಸ ಮಾಡಿದ ಕುಖ್ಯಾತ ಮಹಿಳೆಯನ್ನು ಭಾನುವಾರ ನೋಯ್ಡಾದಲ್ಲಿ ಬಂಧಿಸಲಾಗಿದೆ.

ನೋಯ್ಡಾ: ಮದುವೆ ಹೆಸರಲ್ಲಿ ಬರೊಬ್ಬರಿ 11 ಪುರುಷರಿಗೆ ಮೊಸ ಮಾಡಿದ ಕುಖ್ಯಾತ ಮಹಿಳೆಯನ್ನು ಭಾನುವಾರ ನೋಯ್ಡಾದಲ್ಲಿ ಬಂಧಿಸಲಾಗಿದೆ.

ಮಧ್ಯಪ್ರದೇಶದ ಇಂದೋರ್ ಮೂಲದ ಮೇಘ ಭಾರ್ಗವ್ ಬಂಧಿತ ಮಹಿಳೆಯಾಗಿದ್ದು, ಈಕೆಯೊಂದಿಗೆ ಆಕೆಯ ಅಕ್ಕ ಹಾಗೂ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಸೇರಿಕೊಂಡು ವಧು ಬೇಕಾಗಿದ್ದಾರೆ  ಎಂದು ಜಾಹಿರಾತು ನೀಡುವ ಶ್ರೀಮಂತರನ್ನು ಹುಡುಕಿ ಅವರೊಂದಿಗೆ ಮೇಘಾಳನ್ನು ಮದುವೆ ಮಾಡಿಕೊಡುತ್ತಾರೆ. ಬಳಿಕ ಒಂದಷ್ಟು ದಿನಗಳ ಕಾಲ ಸಂಸಾರ ಮಾಡಿ ಬಳಿಕ ಸಮಯ ನೋಡಿ ಮನೆಯಲ್ಲಿರುವ ಬೆಲೆ ಬಾಳುವ  ಚಿನ್ನಾಭರಣ ಹಾಗೂ ಹಣವನ್ನು ಹೊತ್ತು ಪರಾರಿಯಾಗುತ್ತಿದ್ದರು.

ಈ ಕುಖ್ಯಾತ ಜೋಡಿ ಈ ವರೆಗೂ ಸುಮಾರು 11 ಮಂದಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದ್ದು, ಇವರ ಮೋಸಕ್ಕೆ ಬಲಿಯಾದವರ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಇತ್ತೀಚೆಗೆ ಕೇರಳದ ಕೊಚ್ಚಿ ಮೂಲದ ಜಸ್ಟಿನ್ ಎಂಬ ವ್ಯಕ್ತಿ ಕಳೆದ ಅಕ್ಟೋಬರ್ ನಲ್ಲಿ ತನ್ನ ಹೆಂಡತಿ ಮೇಘ ಕಾಣಿಸುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದರು. ಮೇಘಳೊಂದಿಗೆ 15 ಲಕ್ಷ ನಗದು, ಚಿನ್ನಾಭರಣ ಕಾಣೆಯಾಗಿವೆ  ಎಂದು ದೂರಿನಲ್ಲಿ ತಿಳಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕೇರಳ ಪೊಲೀಸರು ಸತತ 2 ತಿಂಗಳ ತನಿಖೆ ಬಳಿಕ ಮೇಘಾ ಮತ್ತು ಆಕೆಯ ತಂಡವನ್ನು ಉತ್ತರ ಪ್ರದೇಶದ ನೋಯ್ಡಾದಲ್ಲಿರುವುದನ್ನು ಪತ್ತೆ ಮಾಡಿದ್ದರು. ಅಂತೆಯೇ  ಕಾರ್ಯಾಚರಣೆ ನಡೆಸಿದ ಪೊಲೀಸರು ನೋಯ್ಡಾ ಪೊಲೀಸರ ನೆರವಿನೊಂದಿಗೆ ಮೇಘಾ, ಸಹೋದರಿ ಪ್ರಾಚಿ ಹಾಗೂ ಆಕೆಯ ಗಂಡ ದೇವೆಂದ್ರ ಶರ್ಮಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಮೇಘಾ, ಜಸ್ಟಿನ್ ಗೂ ಮೊದಲು ಕೇರಳದ ಮೂವರನ್ನು ಮದುವೆಯಾಗಿದ್ದಳು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಮೇಘ ಮ್ಯಾಟ್ರಿಮನಿ ವೆಬ್ ತಾಣಗಳ ಮೂಲಕ ವಿಚ್ಛೇದನ ಪಡೆದುಕೊಂಡ, ಒಬ್ಬರೇ ಇರುವ  ಧನವಂತರನ್ನು ಹುಡುಕಿ ಮದುವೆ ಮಾಡಿಕೊಂಡು ಕೆಲವು ತಿಂಗಳ ನಂತರ ಸಮಯ ನೋಡಿಕೊಂಡು ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು, ಹಣವನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದಳು ಎಂದು ಪೊಲೀಸರು  ತಿಳಿಸಿದ್ದಾರೆ.

ಒಟ್ಟಾರೆ ಮದುವೆ ಹೆಸರಲ್ಲಿ ವಂಚಿಸುತ್ತಿದ್ದ ವಂಚಕರ ಗ್ಯಾಂಗ್ ವೊಂದನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ಪ್ರವಾಹದ ರೌದ್ರಾವತಾರ: ಮತ್ತೊಂದು ಜಲಪ್ರಳಯದ ಭೀತಿ; ರಕ್ಷಣಾ ಕಾರ್ಯಾಚರಣೆ ಸ್ಥಗಿತಕ್ಕೆ ಆದೇಶ, ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೈನಿಕರಿಗೆ ಸೂಚನೆ..!

'ಹನೂರು ಎನ್‌ಕೌಂಟರ್'ಗೆ ಬಿಗ್ ಟ್ವಿಸ್ಟ್: ತನಿಖೆಯಲ್ಲಿ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಪ್ಯಾಂಗೋಲಿನ್ ಕಳ್ಳಸಾಗಣೆ ಜಾಲ ಪತ್ತೆ!

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ; ಮೂರೂ ವಿಭಾಗಗಳಲ್ಲಿ ಆಯ್ಕೆಯಾದ ಏಕೈಕ ವ್ಯಕ್ತಿ!

ನೂರಾರು ಪುರುಷರ ಮುಂದೆ ಒಳ ಉಡುಪಿನಲ್ಲಿ ಡ್ಯಾನ್ಸ್: ಶೂಟಿಂಗ್ ವೇಳೆ ಅನುಭವಿಸಿದ ಮುಜುಗರವನ್ನು ಹಂಚಿಕೊಂಡ ಬಾಲಿವುಡ್ ನಟಿ ದಿಯಾ ಮಿರ್ಜಾ!

2019- 2023 ರವರೆಗೆ MUDA ದಲ್ಲಿ ಹಂಚಿಕೆಯಾದ ಎಲ್ಲಾ 50:50 ಸೈಟುಗಳು ರದ್ದು: ನಿವೇಶನ ಪಡೆದವರಿಗೆ ಯತೀಂದ್ರ ಸಿದ್ದರಾಮಯ್ಯ ಶಾಕ್!