ದೇಶ

ಎಸ್'ಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಗಾಯತ್ರಿ ಪ್ರಜಾಪತಿ ನೇಮಕ

Manjula VN

ಲಖನೌ: ವಿವಾದಿತ ಉತ್ತರಪ್ರದೇಶ ಸಂಪುಟ ಸಚಿವೆ ಗಾಯತ್ರಿ ಪ್ರಜಾಪತಿಯವರನ್ನು ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೋಮವಾರ ನೇಮಕ ಮಾಡಲಾಗಿದೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಅವರು ಗಾಯತ್ರಿ ಪ್ರಜಾಪತಿಯವರು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆಂದು ಎಸ್ ಪಿ ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ.

ಭ್ರಷ್ಟಾಚಾರ ನಡೆಸಿದ್ದಾರೆಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಈ ಹಿಂದೆ ಗಾಯತ್ರಿ ಪ್ರಜಾಪತಿಯವರನ್ನು ಪಕ್ಷದಿಂದ ವಜಾಗೊಳಿಸಲಾಗಿತ್ತು. ನಂತರ ಮುಲಾಯಂ ಸಿಂಗ್ ಅವರು ಮತ್ತೆ ಗಾಯತ್ರಿ ಪ್ರಜಾಪತಿಯವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿದ್ದರು.

SCROLL FOR NEXT