ದೇಶ

ವಿವಿಐಪಿ ಕ್ಯಾಪ್ಟರ್ ಹಗರಣ: ತ್ಯಾಗಿ ಜಾಮೀನು ಪ್ರಶ್ನಿಸಿದ ಸಿಬಿಐ, ಹೈಕೋರ್ಟ್ ನಿಂದ ನೋಟಿಸ್

Lingaraj Badiger
ನವದೆಹಲಿ: ವಿವಿಐಪಿ ಅಗಸ್ಟಾ ವೆಸ್ಟ್ ಲ್ಯಾಂಡ್ ಕ್ಯಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್ ಪಿ ತ್ಯಾಗಿ ಅವರ ಜಾಮೀನು ಪ್ರಶ್ನಿಸಿ ಶುಕ್ರವಾರ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಕಳೆದ ಸೋಮವಾರ ಜಾಮೀನಿನ ಮೇಲೆ ಬಿಡುಗಡೆಯಾದ ಎಸ್ ಪಿ ತ್ಯಾಗಿ ಅವರಿಗೆ ಇಂದು ನೋಟಿಸ್ ನೀಡಿದೆ.
ಡಿಸೆಂಬರ್ 9ರಂದು ಸಿಬಿಐ ಅಧಿಕಾರಿಗಳು ಎಸ್ ಪಿ ತ್ಯಾಗಿ ಅವರನ್ನು ಬಂಧಿಸಿದ್ದರು. ಆದರೆ ಲಂಚ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳು ನೀಡದ ಹಿನ್ನಲೆಯಲ್ಲಿ ವಿಶೇಷ ಕೋರ್ಟ್ ಜಾಮೀನು ಮಂಜರೂ ಮಾಡಿತ್ತು.
72 ವರ್ಷದ ತ್ಯಾಗಿ ಅವರನ್ನು ಸಿಬಿಐ ಅಧಿಕಾರಿಗಳು ಏಳು ದಿನಗಳ ಕಾಲ ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು.
3,600 ಕೋಟಿ ರು. ಮೌಲ್ಯದ ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಎಸ್.ಪಿ.ತ್ಯಾಗಿ, ಅವರ ಸಹೋದರ ಸಂಬಂಧಿ ಸಂಜೀವ್ ತ್ಯಾಗಿ ಹಾಗೂ ಗೌತಮ್ ಖೇತನ್ ಅವರನ್ನು ಸಿಬಿಐ ದೆಹಲಿಯಲ್ಲಿ ಬಂಧಿಸಿತ್ತು.
SCROLL FOR NEXT