ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಆನೆ ದಾಳಿ: 100ಕ್ಕೂ ಹೆಚ್ಚು ಮನೆ ನಾಶ 
ದೇಶ

ಒಂಟಿ ಸಲಗದ ರೌದ್ರಾವತಾರಕ್ಕೆ ದಿಕ್ಕಾಪಾಲಾಗಿ ಓಡಿದ ಜನ

ಪಶ್ಚಿಮ ಬಂಗಾಳದ ಸಿಲಿಗುರಿಯ ಜಲ್ಪೈಗುರಿ ವಸತಿ ಪ್ರದೇಶವೊಂದರ ಮೇಲೆ ಆನೆಯೊಂದು ದಾಳಿ ನಡೆಸಿದ್ದು, ಆನೆಯ ರೌದ್ರವತಾರಕ್ಕೆ ಅಲ್ಲಿನ ನೂರಾರು ಮನೆಗಳು ನಾಶವಾಗಿರುವ ಘಟನೆ ಮಂಗಳವಾರ ನಡೆದಿದೆ...

ಸಿಲಿಗುರಿ: ಪಶ್ಚಿಮ ಬಂಗಾಳದ ಸಿಲಿಗುರಿಯ ಜಲ್ಪೈಗುರಿ ವಸತಿ ಪ್ರದೇಶವೊಂದರ ಮೇಲೆ ಆನೆಯೊಂದು ದಾಳಿ ನಡೆಸಿದ್ದು, ಆನೆಯ ರೌದ್ರವತಾರಕ್ಕೆ ಅಲ್ಲಿನ ನೂರಾರು ಮನೆಗಳು ನಾಶವಾಗಿರುವ ಘಟನೆ ಮಂಗಳವಾರ ನಡೆದಿದೆ.

ನಿನ್ನೆ ಕಾಡಿನಿಂದ ನಾಡಿಗೆ ಬಂದ ಮದವೇರಿದ ಒಂಟಿ ಸಲಗವೊಂದು ಸಿಲಿಗುರಿಯ ವಸದಿ ಪ್ರದೇಶವೊಂದರ ಮೇಲೆ ದಾಳಿ ಮಾಡಿದೆ. ಈ ವೇಳೆ ಸಿಕ್ಕ ಸಿಕ್ಕ ಮನೆಯ ಮೇಲೆಲ್ಲಾ ದಾಳಿ ಮಾಡಿದ ಆನೆ ಜನರನ್ನು ಬೆದರಿಸಿದೆ. ಈ ವೇಳೆ ಜನರ ಕೂಗಾಟಗಳನ್ನು ಕಂಡ ಆನೆ ಮತ್ತಷ್ಟು ಕೋಪಗೊಂಡು ಸಿಕ್ಕ ಸಿಕ್ಕ ಕಡೆಗಳೆಲ್ಲಾ ಓಡಾಡಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹಾಗೂ ಆನೆಗೆ ಆರವಳಿಕೆ ನೀಡಲು ಹರಸಾಹಸ ಪಡುವಂತಾಯಿತು.

ಆನೆ ದಾಳಿಯಿಂದಾಗಿ ಭಯಭೀತರಾದ ಜನ ದಿಕ್ಕಾಪಾಲಾಗಿ ಓಡಲು ಆರಂಭಿಸಿದ್ದರು. ಇದರಿಂದಾಗಿ ಆನೆಯನ್ನು ನಿಯಂತ್ರಣಕ್ಕೆ ತರಲು ಭಾರೀ ಕಷ್ಟವಾಗಿತ್ತು. ನಂತರ ಜನರಿಗೆ ಭಯಪಡದಂತೆ ತಿಳಿಸಲಾಯಿತು. ಆನೆಗೆ ಈಗಾಗಲೇ ಅರವಳಿಕೆಯನ್ನು ನೀಡಲಾಗಿದ್ದು, ಅವಳಿಕೆ ಮದ್ದು ದೇಹದ ಪರಿಣಾಮ ಬೀರಲು ಕೆಲವು ಸಮಯವಾಗುತ್ತದೆ. ಹೀಗಾಗಿ ಯಾರೂ ಭಯಪಡದಂತೆ ತಿಳಿಸಲಾಯಿತು. ನಂತರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಪ್ರಸ್ತುತ ಆನೆ ಆಶೀಗರ್ ನಲ್ಲಿ ಇರಿಸಲಾಗಿದ್ದು, ಶೀಘ್ರದಲ್ಲೇ ಅರಣ್ಯಕ್ಕೆ ಸಾಗಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!