ನಿತ್ಯಾನಂದ 
ದೇಶ

4 ಮಠಗಳ ಮಠಾಧಿಪತಿಯಾಗಿ ನಿತ್ಯಾನಂದ ಮುಂದುವರಿಕೆಗೆ ಹೈಕೋರ್ಟ್ ತಡೆ

ಬಿಡದಿ ಆಶ್ರಮದ ಸ್ವಯಂ ಘೋಷಿತ ದೇವಮಾನವ ಎಂದೇ ಖ್ಯಾತರಾದ, ಬಿಡದಿ ಆಶ್ರಮದ ನಿತ್ಯಾನಂದ, ತಮಿಳುನಾಡಿನ ತಿರುವರೂರ್...

ಚೆನ್ನೈ: ಬಿಡದಿ ಆಶ್ರಮದ ಸ್ವಯಂ ಘೋಷಿತ ದೇವಮಾನವ ಎಂದೇ ಖ್ಯಾತರಾದ, ಬಿಡದಿ ಆಶ್ರಮದ ನಿತ್ಯಾನಂದ, ತಮಿಳುನಾಡಿನ ತಿರುವರೂರ್ ಮತ್ತು ಅಸುಪಾಸಿನ ನಾಲ್ಕು ಮಠಗಳ ಮುಖ್ಯಸ್ಥರಾಗಿ ಮುಂದುವರಿಯುವುದಕ್ಕೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ. 
ತಿರುವರೂರ್ ನ ಸ್ವಾಮಿನಾಥ ಸ್ವಾಮಿ ದೇವಸ್ಥಾನ ಮತ್ತು ಮಠ, ಪಾಲಸ್ವಾಮಿ ಮತ್ತು ಶಂಕರಸ್ವಾಮಿ ಮಠ, ವೇದಾರಣ್ಯಂನ ಪೊ.ಕಾ.ಸಾಧುಗಳ್ ಮಠ, ಅರುಣಾಚಲ ಜ್ಞಾನದೇಸಿಕಾರ್ ಸ್ವಾಮಿಗಳ್ ಮಠಗಳ ಮಠಾಧಿಪತಿಯಾಗಿ ಮುಂದುವರಿಯದಂತೆ ಮದ್ರಾಸ್ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.
ನಾಲ್ಕು ಮಠಗಳ ಮುಖ್ಯಸ್ಥರಾಗಿ ನಿತ್ಯಾನಂದ ಅವರು ಮುಂದುವರಿಯದಂತೆ ನಿರ್ಬಂಧಿಸಲು ಮದ್ರಾಸ್ ಹೈಕೋರ್ಟ್ ನಲ್ಲಿ ನಾಲ್ಕು ಮಠಗಳ ಟ್ರಸ್ಟಿಯಾಗಿರುವ ಸ್ವಾಮಿ ಆತ್ಮಾನಂದ ಮತ್ತು ಸೇಲಂ ಮೂಲದ ಶಾರದಾನಿಕೇತನ್ ಸಮತಿ ಟ್ರಸ್ಟ್ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್ ಶಿವಕುಮಾರ್ ಅವರು, ನಾಲ್ಕು ಮಠಗಳ ಮುಖ್ಯಸ್ಥರಾಗಿ ನಿತ್ಯಾನಂದ ಮುಂದವರಿಕೆಗೆ ತಡೆಯಾಜ್ಞೆ ನೀಡಿದ್ದಾರೆ. 
ಇದೇ ವೇಳೆ, ಈ ನಾಲ್ಕೂ ಮಠಗಳ ಆಸ್ತಿ ಕುರಿತಂತೆ ನಿತ್ಯಾನಂದ ಅವರು ನಾಗಪಟ್ಟಣಂ ಉಪಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೂ ತಡೆ ನೀಡಲಾಗಿದೆ. ನಿತ್ಯಾನಂದಗೆ ನೋಟೀಸ್ ಜಾರಿ ಮಾಡಿದ್ದು, ಮಾರ್ಚ್ 14ರೊಳಗೆ ನೋಟೀಸ್ ಉತ್ತರಿಸಬೇಕು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT