ದೇಶ

ಜಾಟ್ ಪ್ರತಿಭಟನೆ: ರೈಲು ಟಿಕೆಟ್ ನ್ನು ಕಾದಿರಿಸಿದ್ದವರಿಗೆ ಹಣ ಮರುಪಾವತಿ

Srinivas Rao BV

ಚಂಡೀಗಢ: ಹರ್ಯಾಣದಲ್ಲಿ ಜಾಟ್ ಸಮುದಾಯದವರ ಪ್ರತಿಭಟನೆ ಪರಿಣಾಮ ರೈಲುಗಳು ಸಂಚಾರ ರದ್ದುಗೊಂದಿದ್ದ ಹಿನ್ನೆಲೆಯಲ್ಲಿ ರೈಲು ಟಿಕೆಟ್ ನ್ನು ಕಾದಿರಿಸಿದ್ದ ಪ್ರಯಾಣಿಕರಿಗೆ ಪೂರ್ಣ ಮೊತ್ತವನ್ನು ಮರುಪಾವತಿ ಮಾಡುವುದಾಗಿ ರೈಲ್ವೆ ಇಲಾಖೆ ಹೇಳಿದೆ.
ರೈಲು ಟಿಕೆಟ್ ಕಾದಿರಿಸಿದ್ದವರಿಗೆ ರೈಲ್ವೆ ಇಲಾಖೆ ಹಣ ಕಡಿತ ಇಲ್ಲದೇ ಸಂಪೂರ್ಣ ಹಣವನ್ನು ವಾಪಸ್ ನೀಡಲಿದೆ ಎಂದು ರೈಲ್ವೆ ಇಲಾಖೆ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆನ್ ಲೈನ್ ಮೂಲಕ ಟಿಕೆಟ್ ಕಾದಿರಿಸಿದ್ದವರ ಖಾತೆಗೆ ವಾಪಸ್ ಹಣ ಬರಲಿದೆ. ಪೇಪರ್ ಟಿಕೆಟ್ ಖರೀದಿಸಿದ್ದವರು, ರಿಸರ್ವೇಶನ್ ಕೇಂದ್ರದಿಂದಲೇ ಹಣ ವಾಪಸ್ ಪಡೆಯಬೇಕು ಎಂದು ರೈಲ್ವೆ ಇಲಾಖೆ ತಿಳಿಸಿದೆ.    
ಜಾಟ್ ಸಮುದಾಯದ ಪ್ರತಿಭಟನೆ ಹಿನ್ನೆಲೆಯಲ್ಲಿ  ದೆಹಲಿ ಅಂಬಾಲ- ಚಂಡೀಗಢ ರೈಲು ರದ್ದುಗೊಂಡಿದ್ದ  ಹಿನ್ನೆಲೆಯಲ್ಲಿ ಫೆ.22 ರಂದು ಸಂಜೆ ಚಂಡೀಗಢದಿಂದ ದೆಹಲಿಗೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ.

SCROLL FOR NEXT