ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (ಸಂಗ್ರಹ ಚಿತ್ರ) 
ದೇಶ

ನಿರಾಶದಾಯಕ ರೈಲ್ವೆ ಬಜೆಟ್: ನಿತೀಶ್ ಕುಮಾರ್

ಸ್ವಚ್ಛತೆ, ಭದ್ರತೆ ಹಾಗೂ ಸಮಯ ನಿರ್ವಹಣೆಯನ್ನು ಬಿಟ್ಟರೆ ಈ ಬಾರಿಯ ಬಜೆಟ್ ನಿರಾಶೆಯನ್ನುಂಟು ಮಾಡಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದಾರೆ...

ಪಾಟ್ನಾ: ಸ್ವಚ್ಛತೆ, ಭದ್ರತೆ ಹಾಗೂ ಸಮಯ ನಿರ್ವಹಣೆಯನ್ನು ಬಿಟ್ಟರೆ ಈ ಬಾರಿಯ ಬಜೆಟ್ ನಿರಾಶೆಯನ್ನುಂಟು ಮಾಡಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗುರುವಾರ ಹೇಳಿದ್ದಾರೆ.

ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಇಂದು ಮಂಡಿಸಿದ 2016-17ನೇ ಸಾಲಿನ ರೈಲ್ವೆ ಬಜೆಟ್ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, "ಸುರೇಶ್ ಪ್ರಭು ಅವರು ನನಗೆ ವೈಯಕ್ತಿಕವಾಗಿ ಗೆಳೆಯರಾಗಿದ್ದು, ಅವರಿಗೆ ಶುಭವನ್ನು ಹಾರೈಸುತ್ತೇನೆ. ಆದರೆ, ಈ ಬಾರಿಯ ರೈಲ್ವೆ ಬಜೆಟ್ ನಲ್ಲಿ ಹೊಸದೆಂಬುದು ಯಾವುದು ಇರಲಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಕೆ ಕಂಡಿದ್ದು, ಇದನ್ನು ಗಮನಿಸಿದರೆ ಈ ಬಾರಿ ಪ್ರಯಾಣದ ದರ ಕಡಿಮೆಯಾಗಬೇಕಿತ್ತು. ಆದರೆ, ದರ ಕಡಿಮೆ ಮಾಡದೇ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ".

"ಮೀಸಲು ನಿಧಿಯಲ್ಲು ಶೇ.40 ರಷ್ಟು ಆದಾಯ ಕಡಿಮೆಯಾದಂತಿದೆ. ಭದ್ರತೆ ವಿಚಾರದಲ್ಲಿ ಆಕರ್ಷಿತವಾದ ಯಾವುದೇ ಯೋಜನೆಗಳನ್ನು ಕೈಗೊಳ್ಳಲಾಗಿಲ್ಲ. ಮಾಜಿ ಪ್ರಧಾನಮಂತ್ರಿ ವಾಜಪೇಯಿ ಅವರ ಅಧಿಕಾರಾವಧಿಯಲ್ಲಿ ನಾನು ರೈಲ್ವೆ ಸಚಿವನಾಗಿದ್ದಾಗ ಭದ್ರತೆಗಾಗಿ ರು.17 ಸಾವಿರ ಕೋಟಿಯನ್ನು ಮೀಸಲಿರಿಸಲಾಗಿತ್ತು".

"ಈ ಬಾರಿಯ ರೈಲ್ವೆ ಬಜೆಟ್'ನಲ್ಲಿ ಹಿಂದುಳಿದ ಪ್ರದೇಶಗಳನ್ನು ದೂರ ಮಾಡಲಾಗಿದ್ದು, ಬಿಹಾರ ಜನತೆ ಇಂದಿನ ಬಜೆಟ್'ನ್ನು ತಿರಸ್ಕರಿಸುತ್ತದೆ. ನನ್ನ ಅವಧಿಯಲ್ಲಿ ಜನ ಕ್ರಾಂತಿ ಹೊರತರಲಾಗಿತ್ತು. ಇದೀಗ ಪ್ರಭು ಕೂಡ ಅದೇ ಯೋಜನೆಯನ್ನು ಹೊರತಂದಿದ್ದು, ಅಂತ್ಯೋದಯ ಎಕ್ಸ್ ಪ್ರೆಸ್ ಎಂದು ಹೊಸ ಹೆಸರನ್ನು ನೀಡಿದ್ದಾರೆ ಎಂದು ನಿತೀಶ್ ಹೇಳಿದರು.

ಇದೇ ವೇಳೆ ಬಿಜೆಪಿ ಸರ್ಕಾರವನ್ನು ಟೀಕಿಸಿರುವ ನಿತೀಶ್ ಕುಮಾರ್ ಅವರು, ಬಿಜೆಪಿ ಸರ್ಕಾರವು ರೈಲ್ವೆಯಲ್ಲಿ ಖಾಸಗೀಕರಣವನ್ನು ಪ್ರೋತ್ಸಾಹಿಸುವ ಸಲುವಾಗಿ ಮಾರುಕಟ್ಟೆ ಸಾಲ ಮತ್ತು ರೈಲ್ವೆ ಯೋಜನೆಗಳಲ್ಲಿ ಬಂಡವಾಳ ಹೂಡಿಕೆಗಳ ಬಗ್ಗೆ ಮಾತನಾಡುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಲಯಾಳಂ ನಟಿ ಮೇಲೆ ಹತ್ಯಾಚಾರ ಪ್ರಕರಣ: ನಟ ದಿಲೀಪ್ ಖುಲಾಸೆ; ಪಲ್ಸರ್ ಸುನಿ ಸೇರಿ ಆರು ಮಂದಿ ತಪ್ಪಿತಸ್ಥರು

ಡಿಕೆಶಿ ಅವಕಾಶ ಕೇಳಿದ್ರು, ಆದ್ರೆ CM ಬದಲಾವಣೆಗೆ ಹೈಕಮಾಂಡ್ ಸಮ್ಮತಿಸಿಲ್ಲ: ಯತೀಂದ್ರ ಸ್ಫೋಟಕ ಹೇಳಿಕೆ

ಬೆಳಗಾವಿ ಅಧಿವೇಶನ: ವಿಧಾಸಭೆ ಕಲಾಪ ಆರಂಭ; ಸಾಲುಮರದ ತಿಮ್ಮಕ್ಕ ಸೇರಿ ಇತ್ತೀಚಿಗೆ ನಿಧನರಾದ ಗಣ್ಯರಿಗೆ ಸಂತಾಪ

7ನೇ ದಿನಕ್ಕೆ ಕಾಲಿಟ್ಟ ಇಂಡಿಗೋ ಬಿಕ್ಕಟ್ಟು; ಬೆಂಗಳೂರಿನಲ್ಲಿ 127 ವಿಮಾನ ರದ್ದು; ಮುಂಬೈ, ದೆಹಲಿಯಲ್ಲೂ ಇದೆ ಕಥೆ!

ವಂದೇ ಮಾತರಂ 150ನೇ ವಾರ್ಷಿಕೋತ್ಸವ: ಲೋಕಸಭೆಯಲ್ಲಿಂದು ಚರ್ಚೆ, ಎಲ್ಲರ ಚಿತ್ತ ಪ್ರಧಾನಿ ಮೋದಿಯತ್ತ

SCROLL FOR NEXT