ಸಾಂಕೇತಿಕ ಚಿತ್ರ 
ದೇಶ

ರೈಲಿನ ಎಸಿ ಬೋಗಿಯಲ್ಲಿನ ಹೊದಿಕೆ ತೊಳೆಯುವುದು 2 ತಿಂಗಳಿಗೊಮ್ಮೆಯಂತೆ!

ಮುಂದಿನ ಸಲ ನೀವು ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣಿಸುವ ಆಲೋಚನೆಯಿದ್ದರೆ ಸ್ವಲ್ಪ ಯೋಚಿಸಿ, ನೀವು ಹೊದ್ದು ಮಲಗುವ ಹೊದಿಕೆಗಳನ್ನು...

ನವದೆಹಲಿ: ಮುಂದಿನ ಸಲ ನೀವು ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣಿಸುವ ಆಲೋಚನೆಯಿದ್ದರೆ ಸ್ವಲ್ಪ ಯೋಚಿಸಿ, ನೀವು ಹೊದ್ದು ಮಲಗುವ ಹೊದಿಕೆಗಳನ್ನು ಎರಡು ತಿಂಗಳಿಗೊಮ್ಮೆ ತೊಳೆಯುವುದಂತೆ.

ಮೊನ್ನೆ ಗುರುವಾರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಮಂಡಿಸಿದ ರೈಲ್ವೆ ಬಜೆಟ್ ನಲ್ಲಿ ಸ್ವಚ್ಛತೆ ಕುರಿತು ಆದ್ಯತೆ ನೀಡಿದ್ದರು. ಆದರೆ ಮರುದಿನ ರೈಲ್ವೆ ಖಾತೆ ಸಹಾಯಕ ಸಚಿವ ಮನೋಜ್ ಸಿನ್ಹಾ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡುತ್ತಾ, ಎಸಿ ಬೋಗಿಗಳ ಬೆಡ್ ಶೀಟ್, ಬೆಡ್ ರೋಲ್ ಮತ್ತು ತಲೆದಿಂಬು ಕವರ್ ಗಳನ್ನು ಪ್ರತಿದಿನ ತೊಳೆಯಲಾಗುತ್ತದೆ, ಹೊದಿಕೆಗಳನ್ನು ಪ್ರತಿ ಎರಡು ತಿಂಗಳಿಗೊಮ್ಮೆ ತೊಳೆಯಲಾಗುತ್ತದೆ ಎಂದು ಹೇಳಿದ್ದರು. 

ರೈಲ್ವೆಗಳಲ್ಲಿ ಎಸಿ ಬೋಗಿಗಳಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ, ರಗ್ಗುಗಳ ಸ್ವಚ್ಛತೆ ಕಾಪಾಡುವಿಕೆ ಬಗ್ಗೆ ಅನೇಕ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಮೇಲಿನಂತೆ ವಿವರ ನೀಡಿದರು.

ಇದಕ್ಕೆ ರಾಜ್ಯಸಭಾ ಅಧ್ಯಕ್ಷ ಹಮೀದ್ ಅನ್ಸಾರಿ ಕೂಡ ಕುಹಕವಾಡಿದರು. ಈ ಹಿಂದೆ ಎಸಿ ಬೋಗಿಯ ಪ್ರಯಾಣಿಕರು ಅವರೇ ಬೆಡ್ ಶೀಟ್, ತಲೆದಿಂಬು ಕವರ್, ಹೊದಿಕೆ ತರಬೇಕೆಂಬ ವ್ಯವಸ್ಥೆಯೇ ಚೆನ್ನಾಗಿತ್ತು ಅನ್ನಿಸುತ್ತದೆ ಎಂದರು, ಅದಕ್ಕೆ ಕಾಂಗ್ರೆಸ್ ಸಂಸದರೊಬ್ಬರು ಹಳೆ ವ್ಯವಸ್ಥೆಯನ್ನು ಮತ್ತೆ ತರಬಾರದೇಕೆ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಸಚಿವ ಸಿನ್ಹಾ, ಇದು ಒಳ್ಳೆಯ ಸಲಹಯೇ. ಪ್ರಯಾಣಿಕರು ಮಲಗಲು ತಾವೇ ರಗ್ಗು, ಹೊದಿಕೆ ತಂದರೆ ಉತ್ತಮವೇ. ಇಲಾಖೆಯದ್ದೇನೂ ಸಮಸ್ಯೆಯಿಲ್ಲ ಎಂದು ಹೇಳಿದರು.

ಪ್ರಸ್ತುತ ರೈಲ್ವೆ ಇಲಾಖೆಯಡಿ 41 ಯಾಂತ್ರೀಕೃತ ಲಾಂಡ್ರಿಗಳಿದ್ದು, ಮುಂದಿನ ಎರಡು ವರ್ಷಗಳಲ್ಲಿ ಮತ್ತೆ 25 ಲಾಂಡ್ರಿಗಳಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಸ್ವಚ್ಛತೆಯನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT