ಸಾಂಕೇತಿಕ ಚಿತ್ರ 
ದೇಶ

ರೈಲಿನ ಎಸಿ ಬೋಗಿಯಲ್ಲಿನ ಹೊದಿಕೆ ತೊಳೆಯುವುದು 2 ತಿಂಗಳಿಗೊಮ್ಮೆಯಂತೆ!

ಮುಂದಿನ ಸಲ ನೀವು ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣಿಸುವ ಆಲೋಚನೆಯಿದ್ದರೆ ಸ್ವಲ್ಪ ಯೋಚಿಸಿ, ನೀವು ಹೊದ್ದು ಮಲಗುವ ಹೊದಿಕೆಗಳನ್ನು...

ನವದೆಹಲಿ: ಮುಂದಿನ ಸಲ ನೀವು ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣಿಸುವ ಆಲೋಚನೆಯಿದ್ದರೆ ಸ್ವಲ್ಪ ಯೋಚಿಸಿ, ನೀವು ಹೊದ್ದು ಮಲಗುವ ಹೊದಿಕೆಗಳನ್ನು ಎರಡು ತಿಂಗಳಿಗೊಮ್ಮೆ ತೊಳೆಯುವುದಂತೆ.

ಮೊನ್ನೆ ಗುರುವಾರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಮಂಡಿಸಿದ ರೈಲ್ವೆ ಬಜೆಟ್ ನಲ್ಲಿ ಸ್ವಚ್ಛತೆ ಕುರಿತು ಆದ್ಯತೆ ನೀಡಿದ್ದರು. ಆದರೆ ಮರುದಿನ ರೈಲ್ವೆ ಖಾತೆ ಸಹಾಯಕ ಸಚಿವ ಮನೋಜ್ ಸಿನ್ಹಾ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡುತ್ತಾ, ಎಸಿ ಬೋಗಿಗಳ ಬೆಡ್ ಶೀಟ್, ಬೆಡ್ ರೋಲ್ ಮತ್ತು ತಲೆದಿಂಬು ಕವರ್ ಗಳನ್ನು ಪ್ರತಿದಿನ ತೊಳೆಯಲಾಗುತ್ತದೆ, ಹೊದಿಕೆಗಳನ್ನು ಪ್ರತಿ ಎರಡು ತಿಂಗಳಿಗೊಮ್ಮೆ ತೊಳೆಯಲಾಗುತ್ತದೆ ಎಂದು ಹೇಳಿದ್ದರು. 

ರೈಲ್ವೆಗಳಲ್ಲಿ ಎಸಿ ಬೋಗಿಗಳಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ, ರಗ್ಗುಗಳ ಸ್ವಚ್ಛತೆ ಕಾಪಾಡುವಿಕೆ ಬಗ್ಗೆ ಅನೇಕ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಮೇಲಿನಂತೆ ವಿವರ ನೀಡಿದರು.

ಇದಕ್ಕೆ ರಾಜ್ಯಸಭಾ ಅಧ್ಯಕ್ಷ ಹಮೀದ್ ಅನ್ಸಾರಿ ಕೂಡ ಕುಹಕವಾಡಿದರು. ಈ ಹಿಂದೆ ಎಸಿ ಬೋಗಿಯ ಪ್ರಯಾಣಿಕರು ಅವರೇ ಬೆಡ್ ಶೀಟ್, ತಲೆದಿಂಬು ಕವರ್, ಹೊದಿಕೆ ತರಬೇಕೆಂಬ ವ್ಯವಸ್ಥೆಯೇ ಚೆನ್ನಾಗಿತ್ತು ಅನ್ನಿಸುತ್ತದೆ ಎಂದರು, ಅದಕ್ಕೆ ಕಾಂಗ್ರೆಸ್ ಸಂಸದರೊಬ್ಬರು ಹಳೆ ವ್ಯವಸ್ಥೆಯನ್ನು ಮತ್ತೆ ತರಬಾರದೇಕೆ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಸಚಿವ ಸಿನ್ಹಾ, ಇದು ಒಳ್ಳೆಯ ಸಲಹಯೇ. ಪ್ರಯಾಣಿಕರು ಮಲಗಲು ತಾವೇ ರಗ್ಗು, ಹೊದಿಕೆ ತಂದರೆ ಉತ್ತಮವೇ. ಇಲಾಖೆಯದ್ದೇನೂ ಸಮಸ್ಯೆಯಿಲ್ಲ ಎಂದು ಹೇಳಿದರು.

ಪ್ರಸ್ತುತ ರೈಲ್ವೆ ಇಲಾಖೆಯಡಿ 41 ಯಾಂತ್ರೀಕೃತ ಲಾಂಡ್ರಿಗಳಿದ್ದು, ಮುಂದಿನ ಎರಡು ವರ್ಷಗಳಲ್ಲಿ ಮತ್ತೆ 25 ಲಾಂಡ್ರಿಗಳಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಸ್ವಚ್ಛತೆಯನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT