ರಾಜನಾಥ್ ಸಿಂಗ್ 
ದೇಶ

ಪಾಕ್ ಗುಂಡು ಹಾರಿಸಿದ್ರೆ, ನಾವು ಹಾರಿಸುವ ಗುಂಡುಗಳಿಗೆ ಲೆಕ್ಕವಿಡಲು ಅಸಾಧ್ಯ

ಪಾಕಿಸ್ತಾನ ಅಪ್ರಚೋದಿತ ದಾಳಿ ಕುರಿತಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನದಿಂದ ಯಾವಾಗ ಭಾರತದತ್ತ ಗುಂಡಿನ ದಾಳಿ ಆರಂಭವಾಗುತ್ತದೆಯೋ...

ಡೆಹ್ರಾಡೂನ್: ಪಾಕಿಸ್ತಾನ ಅಪ್ರಚೋದಿತ ದಾಳಿ ಕುರಿತಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನದಿಂದ ಯಾವಾಗ ಭಾರತದತ್ತ ಗುಂಡಿನ ದಾಳಿ ಆರಂಭವಾಗುತ್ತದೆಯೋ, ಆಗ ನಾವು ಹಾರಿಸುವ ಗುಂಡಿನ ಲೆಕ್ಕವಿಡಲೂ ನಿಮಗೆ ಅಸಾಧ್ಯ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಉತ್ತರಖಂಡ್ ನ ಖಾಟಿಮಾದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಭಾರತದ ಕಡೆಯಿಂದ ಪಾಕಿಸ್ತಾನದತ್ತ ಯಾವತ್ತೂ ಮೊದಲು ಗುಂಡಿನ ದಾಳಿ ನಡೆಯಲ್ಲ. ಒಂದು ವೇಳೆ ಪಾಕಿಸ್ತಾನ ನಮ್ಮ ಮೇಲೆ ಗುಂಡಿನ ದಾಳಿ ಆರಂಭಿಸಿದರೆ, ನಮ್ಮ ಕಡೆಯಿಂದ ಹಾರುವ ಗುಂಡಿನ ಲೆಕ್ಕವಿಡಲು ನಿಮಗೆ(ಪಾಕಿಸ್ತಾನ) ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಜೆಎನ್ ಯು ವಿವಾದ ಕುರಿತಂತೆ ಕಾರ್ಯಕರ್ತರ ಮುಂದೆ ಹೇರಿದ ಧ್ವನಿಯಲ್ಲಿ ಮಾತನಾಡಿದ ಅವರು, ನಾವು ಎಲ್ಲವನ್ನು ಸಹಿಸಿಕೊಳ್ಳಬಲ್ಲೆವು ಆದರೆ ದೇಶವಿರೋಧಿ ಘೋಷಣೆಯನ್ನು ಯಾವತ್ತೂ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT