'ಶನಿಶಿಂಗಣಾಪುರ ಟ್ರಸ್ಟ್'ಗೆ ಮಹಿಳಾ ಸಾರಥ್ಯ 
ದೇಶ

'ಶನಿಶಿಂಗಣಾಪುರ ಟ್ರಸ್ಟ್'ಗೆ ಮಹಿಳಾ ಸಾರಥ್ಯ

ಗರ್ಭಗುಡಿ ವ್ಯಾಪ್ತಿಯೊಳಗೆ ಮಹಿಳೆಯೊಬ್ಬರು ಪ್ರವೇಶಿಸಿದ ಹಿನ್ನೆಲೆಯಲ್ಲಿ ವಿವಾದಕ್ಕೆ ಕಾರಣವಾಗಿದ್ದ ಶಿರಡಿ ಸಮೀಪದ ಶನಿಶಿಂಗಣಾಪುರ ದೇವಸ್ಥಾನದ ಟ್ರಸ್ಟ್, ಮಹಿಳೆಯೊಬ್ಬರಿಗೆ ತನ್ನ ಆಡಳಿತದ ಚುಕ್ಕಾಣಿ ನೀಡುವ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟಿದೆ...

ಅಹಮದ್‍ನಗರ: ಗರ್ಭಗುಡಿ ವ್ಯಾಪ್ತಿಯೊಳಗೆ ಮಹಿಳೆಯೊಬ್ಬರು ಪ್ರವೇಶಿಸಿದ ಹಿನ್ನೆಲೆಯಲ್ಲಿ ವಿವಾದಕ್ಕೆ ಕಾರಣವಾಗಿದ್ದ ಶಿರಡಿ ಸಮೀಪದ ಶನಿಶಿಂಗಣಾಪುರ ದೇವಸ್ಥಾನದ ಟ್ರಸ್ಟ್, ಮಹಿಳೆಯೊಬ್ಬರಿಗೆ ತನ್ನ ಆಡಳಿತದ ಚುಕ್ಕಾಣಿ ನೀಡುವ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟಿದೆ.

ಪುರುಷರೇ ದೇವಾಲಯದ ಆಡಳಿತ ನಿರ್ವಹಣೆ ಮಾಡುವ ತನ್ನ ಗತ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟಿರುವ ಟ್ರಸ್ಟ್, ಜ.7ರಂದು ಅನಿತಾ ಶಿತೆ ಎಂಬುವರನ್ನು ಟ್ರಸ್ಟ್ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಾಗಿ ಘೋಷಿಸಿದೆ. ಅನಿತಾ ಶಿತೆ ಅವರನ್ನು ಕಳೆದ ವಾರವಷ್ಟೇ ಆಡಳಿತ ಮಂಡಳಿಯ ನಿರ್ದೇಶಕರನ್ನಾಗಿ ಮಾಡಲಾಗಿತ್ತು.

ಇದೇ ವೇಳೆ 11 ಸದಸ್ಯರ ಆಡಳಿತ ಮಂಡಳಿಗೆ ಶಾಲಿನಿ ಲಾಂಡೆ ಎಂಬ ಮತ್ತೊಬ್ಬ ಮಹಿಳೆಗೂ ಅವಕಾಶ ನೀಡಲಾಗಿದೆ. ಆದರೆ, ಟ್ರಸ್ಟ್ ನೂತನ ಅಧ್ಯಕ್ಷೆ ಅನಿತಾ ಶಿತೆ ಕೂಡ, ಮಹಿಳೆಯರಿಗೆ ಗರ್ಭಗುಡಿ ಪ್ರವೇಶ ನಿರ್ಬಂಧ ಸೇರಿದಂತೆ ದೇವಾಲಯದ ಎಲ್ಲಾ ಸಂಪ್ರದಾಯಗಳ ಬಗ್ಗೆ ತಮಗೆ ಅತ್ಯಂತ ನಂಬಿಕೆ ಹಾಗೂ ಗೌರವವಿದ್ದು, ಹಿಂದಿನ ಎಲ್ಲ ರೀತಿರಿವಾಜುಗಳನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಹೇಳಿದ್ದಾರೆ. ಹಾಗಾಗಿ ಮಹಿಳೆಯೊಬ್ಬರು ಟ್ರಸ್ಟ್ ಹೊಣೆ ಹೊತ್ತುಕೊಂಡಿರುವುದರಿಂದಾಗಿ ದೇವಾಲಯದ ಮಹಿಳಾ ಸಮಾನತೆ ವಿರುದ್ಧದ ಆಚರಣೆಗಳಲ್ಲಿ ಬದಲಾವಣೆ ನಿರೀಕ್ಷಿಸಲಾಗದು ಎನ್ನಲಾಗಿದೆ.

ಕಳೆದ ನವೆಂಬರ್‍ನಲ್ಲಿ ಮಹಿಳೆಯೊಬ್ಬರು ದೇವಾಲಯದ ಗರ್ಭಗುಡಿ ಪ್ರವೇಶಿಸಿ ದೇವರ ಪೂಜೆಗೆ ಯತ್ನಿಸಿದ್ದರು. ಮಹಿಳೆ ಪ್ರವೇಶಿಸಿದ್ದರಿಂದ ದೇವಾಲಯ ಅಪವಿತ್ರವಾಗಿದೆ
ಎಂದು ಟ್ರಸ್ಟ್ ಶುದ್ಧೀಕರಣ ನಡೆಸಿತ್ತು. ಈ ವಿಷಯ ದೇಶಾದ್ಯಂತ ಮಹಿಳಾ ಸಮಾನತೆ ಮತ್ತು ಧಾರ್ಮಿಕ ಮೌಢ್ಯದ ಬಗೆಗಿನ ವ್ಯಾಪಕ ಚರ್ಚೆ, ಹೋರಾಟಗಳಿಗೂ ಕಾರಣವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT