ಆಧಾರ್ ಕಾರ್ಡ್ (ಸಂಗ್ರಹ ಚಿತ್ರ) 
ದೇಶ

ಭಾರತದ ಆಧಾರ್ ಕಾರ್ಡ್ ಗೆ ವಿಶ್ವಬ್ಯಾಂಕ್ ಶ್ಲಾಘನೆ

ಭಾರತದ ಆಧಾರ್ ಯೋಜನೆಯನ್ನು ವಿಶ್ವಬ್ಯಾಂಕ್ ಶ್ಲಾಘಿಸಿದೆ. ಇದರಿಂದ ಭಾರತಕ್ಕೆ ವಾರ್ಷಿಕ ರು.6,500 ಉಳಿತಾಯವಾಗಲಿದೆ ಎಂದು ಹೇಳಿದೆ...

ವಾಷಿಂಗ್ಟನ್: ಭಾರತದ ಆಧಾರ್ ಯೋಜನೆಯನ್ನು ವಿಶ್ವಬ್ಯಾಂಕ್ ಶ್ಲಾಘಿಸಿದೆ. ಇದರಿಂದ ಭಾರತಕ್ಕೆ ವಾರ್ಷಿಕ ರು.6,500 ಉಳಿತಾಯವಾಗಲಿದೆ ಎಂದು ಹೇಳಿದೆ.

ಸರ್ಕಾರದ ವಿವಿಧ ಸಹಾಯಧನ ಯೋಜನೆಗಳಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಿದ್ದರಿಂದ ಹಣ ಸೋರಿಕೆಗೆ ತಡೆಬಿದ್ದಿದೆ. ಇದರಿಂದ  ವಾರ್ಷಿಕ 65೦೦ ಕೋಟಿ ರೂ. ಉಳಿತಾಯವಾಗಿದೆ  ಮತ್ತು ಡಿಜಿಟಲೀಕರಣದಿಂದ ಭ್ರಷ್ಟಾಚಾರ ನಿಯಂತ್ರಣ, ಒಳಗೊಳ್ಳುವಿಕೆ, ಫಲಶೃತಿ ಹೆಚ್ಚಲಿದೆ ಎಂದು ವಿಶ್ವಬ್ಯಾಂಕ್‌ನ ಡಿಜಿಟಲ್ ಡಿವಿಡೆಂಡ್ಸ್ ವರದಿಯಲ್ಲಿ ಹೇಳಲಾಗಿದೆ.

ಪ್ರಸ್ತುತ 100 ಕೋಟಿ ಜನರಿಗೆ ಆಧಾರ್‌ಕಾರ್ಡ್ ವಿತರಿಸಲಾಗಿದೆ. ಶೀಘ್ರದಲ್ಲೇ ದೇಶದ 120 ಕೋಟಿ ಜನರಿಗೂ ಆಧಾರ್ ಕಾರ್ಡ್ ತಲುಪಿಸಲಾಗುತ್ತಿದೆ. ಇದರಿಂದ ಸರ್ಕಾರಿ ಸೇವೆಗಳಿಂದ  ದೂರ ಉಳಿದ ಕುಟುಂಬಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ನೆರವಾಗಲಿದೆ ಎಂದು ವಿಶ್ವ ಬ್ಯಾಂಕ್ ತಯಾರಿಸಿದ ಡಿಜಿಟಲ್ ಡಿವಿಡೆಂಡ್ಸ್ ವರದಿ ಬಿಡುಗಡೆ ವೇಳೆ ವಿಶ್ವಬ್ಯಾಂಕ್‌ನ ಮುಖ್ಯ  ಹಣಕಾಸು ತಜ್ಞ ಕೌಶಿಕ್ ಬಸು ಹೇಳಿದ್ದಾರೆ.

ಇತರ ದೇಶಗಳಿಗೂ ಆಧಾರ್ ಮಾದರಿ: ಈ ಯೋಜನೆ ಇತರ ದೇಶಗಳಿಗೂ ಮಾದರಿಯಾಗಿದೆ. 5 ವರ್ಷಗಳಲ್ಲಿ 1೦೦ ಕೋಟಿ ಜನರಿಗೆ ಭಾರತವು ಆಧಾರ್ ಕಾರ್ಡನ್ನು ನೀಡುವ ಮೂಲಕ  ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಸಾಧ್ಯವಾದರೆ ಯಾಕೆ ಇತರ ದೇಶಗಳೂ ಇದನ್ನು ಅನುಸರಿಸಬಾರದು ಎಂದು ವಿಶ್ವಬ್ಯಾಂಕ್‌ನ ಡಿಜಿಟಲ್ ಡಿವಿಡೆಂಡ್ಸ್ ವರದಿಯಲ್ಲಿ ಪ್ರಶ್ನಿಸಲಾಗಿದೆ.

ಅಲ್ಲದೆ ಪಶ್ಚಿಮ ಆಫ್ರಿಕಾದ ಶೇ.4೦ರಷ್ಟು ಜನರು ಬಿಲ್ ಪಾವತಿಗಳನ್ನು ಮೊಬೈಲ್ ಮೂಲಕ ಮಾಡುತ್ತಾರೆ. ಹಾಗೆಯೇ 8೦ ಲಕ್ಷ ಸಣ್ಣ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಮಾರಲು  ಇ-ಕಾಮರ್ಸ್ ವೇದಿಕೆ ಯನ್ನು ಬಳಸಿಕೊಳ್ಳುತ್ತಿದ್ದಾರೆ. 12೦ ದೇಶಗಳಿಗೆ ಅವರು ಉತ್ಪನ್ನಗಳನ್ನು ರಫ ಮಾಡುತ್ತಿದ್ದಾರೆ. ಇಂಥವುಗಳನ್ನು ವಿಶ್ವದ ಇತರ ರಾಷ್ಟ್ರಗಳೂ ಜಾರಿಗೆ ತರಬೇಕು ಎಂದು  ವರದಿಯಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT