ಆಧಾರ್ ಕಾರ್ಡ್ (ಸಂಗ್ರಹ ಚಿತ್ರ) 
ದೇಶ

ಭಾರತದ ಆಧಾರ್ ಕಾರ್ಡ್ ಗೆ ವಿಶ್ವಬ್ಯಾಂಕ್ ಶ್ಲಾಘನೆ

ಭಾರತದ ಆಧಾರ್ ಯೋಜನೆಯನ್ನು ವಿಶ್ವಬ್ಯಾಂಕ್ ಶ್ಲಾಘಿಸಿದೆ. ಇದರಿಂದ ಭಾರತಕ್ಕೆ ವಾರ್ಷಿಕ ರು.6,500 ಉಳಿತಾಯವಾಗಲಿದೆ ಎಂದು ಹೇಳಿದೆ...

ವಾಷಿಂಗ್ಟನ್: ಭಾರತದ ಆಧಾರ್ ಯೋಜನೆಯನ್ನು ವಿಶ್ವಬ್ಯಾಂಕ್ ಶ್ಲಾಘಿಸಿದೆ. ಇದರಿಂದ ಭಾರತಕ್ಕೆ ವಾರ್ಷಿಕ ರು.6,500 ಉಳಿತಾಯವಾಗಲಿದೆ ಎಂದು ಹೇಳಿದೆ.

ಸರ್ಕಾರದ ವಿವಿಧ ಸಹಾಯಧನ ಯೋಜನೆಗಳಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಿದ್ದರಿಂದ ಹಣ ಸೋರಿಕೆಗೆ ತಡೆಬಿದ್ದಿದೆ. ಇದರಿಂದ  ವಾರ್ಷಿಕ 65೦೦ ಕೋಟಿ ರೂ. ಉಳಿತಾಯವಾಗಿದೆ  ಮತ್ತು ಡಿಜಿಟಲೀಕರಣದಿಂದ ಭ್ರಷ್ಟಾಚಾರ ನಿಯಂತ್ರಣ, ಒಳಗೊಳ್ಳುವಿಕೆ, ಫಲಶೃತಿ ಹೆಚ್ಚಲಿದೆ ಎಂದು ವಿಶ್ವಬ್ಯಾಂಕ್‌ನ ಡಿಜಿಟಲ್ ಡಿವಿಡೆಂಡ್ಸ್ ವರದಿಯಲ್ಲಿ ಹೇಳಲಾಗಿದೆ.

ಪ್ರಸ್ತುತ 100 ಕೋಟಿ ಜನರಿಗೆ ಆಧಾರ್‌ಕಾರ್ಡ್ ವಿತರಿಸಲಾಗಿದೆ. ಶೀಘ್ರದಲ್ಲೇ ದೇಶದ 120 ಕೋಟಿ ಜನರಿಗೂ ಆಧಾರ್ ಕಾರ್ಡ್ ತಲುಪಿಸಲಾಗುತ್ತಿದೆ. ಇದರಿಂದ ಸರ್ಕಾರಿ ಸೇವೆಗಳಿಂದ  ದೂರ ಉಳಿದ ಕುಟುಂಬಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ನೆರವಾಗಲಿದೆ ಎಂದು ವಿಶ್ವ ಬ್ಯಾಂಕ್ ತಯಾರಿಸಿದ ಡಿಜಿಟಲ್ ಡಿವಿಡೆಂಡ್ಸ್ ವರದಿ ಬಿಡುಗಡೆ ವೇಳೆ ವಿಶ್ವಬ್ಯಾಂಕ್‌ನ ಮುಖ್ಯ  ಹಣಕಾಸು ತಜ್ಞ ಕೌಶಿಕ್ ಬಸು ಹೇಳಿದ್ದಾರೆ.

ಇತರ ದೇಶಗಳಿಗೂ ಆಧಾರ್ ಮಾದರಿ: ಈ ಯೋಜನೆ ಇತರ ದೇಶಗಳಿಗೂ ಮಾದರಿಯಾಗಿದೆ. 5 ವರ್ಷಗಳಲ್ಲಿ 1೦೦ ಕೋಟಿ ಜನರಿಗೆ ಭಾರತವು ಆಧಾರ್ ಕಾರ್ಡನ್ನು ನೀಡುವ ಮೂಲಕ  ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಸಾಧ್ಯವಾದರೆ ಯಾಕೆ ಇತರ ದೇಶಗಳೂ ಇದನ್ನು ಅನುಸರಿಸಬಾರದು ಎಂದು ವಿಶ್ವಬ್ಯಾಂಕ್‌ನ ಡಿಜಿಟಲ್ ಡಿವಿಡೆಂಡ್ಸ್ ವರದಿಯಲ್ಲಿ ಪ್ರಶ್ನಿಸಲಾಗಿದೆ.

ಅಲ್ಲದೆ ಪಶ್ಚಿಮ ಆಫ್ರಿಕಾದ ಶೇ.4೦ರಷ್ಟು ಜನರು ಬಿಲ್ ಪಾವತಿಗಳನ್ನು ಮೊಬೈಲ್ ಮೂಲಕ ಮಾಡುತ್ತಾರೆ. ಹಾಗೆಯೇ 8೦ ಲಕ್ಷ ಸಣ್ಣ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಮಾರಲು  ಇ-ಕಾಮರ್ಸ್ ವೇದಿಕೆ ಯನ್ನು ಬಳಸಿಕೊಳ್ಳುತ್ತಿದ್ದಾರೆ. 12೦ ದೇಶಗಳಿಗೆ ಅವರು ಉತ್ಪನ್ನಗಳನ್ನು ರಫ ಮಾಡುತ್ತಿದ್ದಾರೆ. ಇಂಥವುಗಳನ್ನು ವಿಶ್ವದ ಇತರ ರಾಷ್ಟ್ರಗಳೂ ಜಾರಿಗೆ ತರಬೇಕು ಎಂದು  ವರದಿಯಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

SCROLL FOR NEXT