ಮಮ್ಮೂಟಿ 
ದೇಶ

ಮಮ್ಮೂಟಿ ಜಾಹೀರಾತಿನ ಸೋಪಿನಿಂದ ಬಾರದ ಶ್ವೇತವರ್ಣ; ಕೇರಳ ವ್ಯಕ್ತಿಗೆ ರೂ. 30 ಸಾವಿರ ಪರಿಹಾರ

ಇಂದುಲೇಖ ಬಿಳಿ ಸೋಪಿನ ರಾಯಭಾರಿ ಮಮ್ಮೂಟಿ ಹಾಗೂ ಇಂದುಲೇಖ ಕಾಸ್ಮೆಟಿಕ್ ಕಂಪನಿ ವಿರುದ್ಧ ಸಮರ ಸಾರಿದ್ದ ಕೇರಳದ ವಯನಾಡ್ ಜಿಲ್ಲೆಯ ಚಾತು ಎಂಬುವರ...

ಇಂದುಲೇಖ ಬಿಳಿ ಸೋಪಿನ ರಾಯಭಾರಿ ಮಮ್ಮೂಟಿ ಹಾಗೂ ಇಂದುಲೇಖ ಕಾಸ್ಮೆಟಿಕ್ ಕಂಪನಿ ವಿರುದ್ಧ ಸಮರ ಸಾರಿದ್ದ ಕೇರಳದ ವಯನಾಡ್ ಜಿಲ್ಲೆಯ ಚಾತು ಎಂಬುವರ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ಚಾತು ಅವರಿಗೆ 30 ಸಾವಿರ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ಕೋರ್ಟ್ ಆದೇಶಿಸಿದೆ.

ಇಂದೂಲೇಖ ಬಿಳಿ ಸೋಪ್ ಬಳಿಸಿದರೆ “ಸೌಂದರ್ಯಂ ನಿಂಗಳೆ ಥೇಡಿ ವರೂಂ”(ಸೌಂದರ್ಯ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ) ಎಂಬ ಮಾತಿನೊಂದಿಗೆ ಮಲಯಾಳಂನ ಸೂಪರ್ ಸ್ಟಾರ್ ಮಮ್ಮೂಟಿ  ಜಾಹಿರಾತಿನಲ್ಲಿ ಹೇಳುತ್ತಾರೆ. ಅವರ ಮಾತನ್ನು ನಂಬಿ ಕಳೆದ ಒಂದು ವರ್ಷದಿಂದ ಸೋಪ್ ಬಳಸುತ್ತಿದ್ದು, ತಾವು ಎಷ್ಟು ತಿಕ್ಕಿದರೂ ಬೆಳ್ಳಗಾಗಿಲ್ಲ, ಸುಂದರನಾಗಿಲ್ಲ ಅಂತಾ ಚಾತು ಅವರು ವಯನಾಡ್ ಜಿಲ್ಲಾ ಗ್ರಾಹಕರ ಕೋರ್ಟ್ ಗೆ ದೂರು ನೀಡಿದ್ದರು.

ಮಮ್ಮೂಟ್ಟಿ ಮತ್ತು ಇಂದುಲೇಖ ಕಾಸ್ಮೆಟಿಕ್ ಕಂಪನಿಯಿಂದ ತಮಗೆ ವಂಚನೆ ಆಗಿದೆ . ಹೀಗಾಗಿ 50 ಸಾವಿರ ರೂ ನಷ್ಟ ಪರಿಹಾರ ಕಾನೂನು ಹೋರಾಟದ ಖರ್ಚು ವೆಚ್ಚಗಳನ್ನು ಕೊಡಿಸಬೇಕೆಂದು ಚಾತು ಗ್ರಾಹಕರ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಇಂದುಲೇಖ ಕಾಸ್ಮೆಟಿಕ್ ಕಂಪನಿಗೆ ಚಾತು ಅವರಿಗೆ ಪರಿಹಾರವಾಗಿ 30 ಸಾವಿರ ರುಪಾಯಿ ನೀಡುವಂತೆ ಆದೇಶಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚಾತು ಅವರು, ಆಕರ್ಷಕ ಉತ್ಪನ್ನಗಳು ಎಂದು ಹೇಳಿಕೊಂಡು ಕೆಲ ಕಂಪನಿಗಳು ಗ್ರಾಹಕರನ್ನು ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಇಂದುಲೇಖ. ಇಂತರ ಸಂಸ್ಥೆಗಳು ಸಾಕಷ್ಟಿದ್ದು, ಅವುಗಳ ವಿರುದ್ಧ ಗ್ರಾಹಕರು ಧ್ವನಿ ಎತ್ತಬೇಕಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT