ಸಾಂದರ್ಭಿಕ ಚಿತ್ರ 
ದೇಶ

ರೂರ್ಖೀ ಮದರಾಸದಲ್ಲಿ ಮೊಬೈಲ್ ಫೋನ್, ಸಾಮಾಜಿಕ ತಾಣಗಳ ಬಳಕೆ ನಿಷೇಧ

ಹರಿದ್ವಾರದಲ್ಲಿ ನಾಲ್ವರು ಶಂಕಿತ ಉಗ್ರರನ್ನು ಬಂಧಿಸಿದ ಹಿನ್ನೆಲೆಯಲ್ಲಿ ರೂರ್ಖೀಯಲ್ಲಿರುವ ಮದರಸಾವೊಂದು ಸಾಮಾಜಿಕ ತಾಣ ಮತ್ತು ಮೊಬೈಲ್...

ರೂರ್ಖೀ: ಹರಿದ್ವಾರದಲ್ಲಿ ನಾಲ್ವರು ಶಂಕಿತ ಉಗ್ರರನ್ನು ಬಂಧಿಸಿದ ಹಿನ್ನೆಲೆಯಲ್ಲಿ ರೂರ್ಖೀಯಲ್ಲಿರುವ ಮದರಸಾವೊಂದು ಸಾಮಾಜಿಕ ತಾಣ ಮತ್ತು ಮೊಬೈಲ್ ಫೋನ್  ಬಳಕೆಗೆ ನಿಷೇಧ ಹೇರಿದೆ.
ಇಮಾಮ್‌ದುಲ್ ಇಸ್ಲಾಂ ಎಂಬ ಮದರಸಾ, ತಮ್ಮ ಆವರಣದಲ್ಲಿ ಇಂಟರ್‌ನೆಟ್ ಬಳಸಬಾರದೆಂದು ಆಜ್ಞೆ ಹೊರಡಿಸಿ ಮದರಸಾದ ಗೋಡೆಯಲ್ಲಿ ಭಿತ್ತಿ ಪತ್ರವನ್ನು ಅಂಟಿಸಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಇಮಾಮ್‌ದುಲ್ ಇಸ್ಲಾಂನ ಮುಖ್ಯಸ್ಥ, ಮದರಸಾದ ಆವರಣದಲ್ಲಿ ಯಾರೊಬ್ಬರೂ ಮೊಬೈಲ್ ಫೋನ್, ಸಾಮಾಜಿಕ ತಾಣಗಳನ್ನು ಬಳಸಬಾರದು ಎಂದು ಆದೇಶಿಸಲಾಗಿದೆ. ಅದೇ ವೇಳೆ ಹೆತ್ತವರು ಮಕ್ಕಳ ಅಂತರ್ಜಾಲದಲ್ಲಿ ಏನು ಮಾಡುತ್ತಿದ್ದಾರೆ ಎಂದು ನಿಗಾವಹಿಸಬೇಕಾಗಿದೆ. ಮಕ್ಕಳು ಉಗ್ರವಾದಿಗಳ ಮಾತಿಗೆ ಮರುಳಾಗಿ ದಾರಿ ತಪ್ಪುವುದು ಬೇಡ ಎಂಬ ಕಾರಣದಿಂದಲೇ ಈ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮದರಸಾಗಳಲ್ಲಿ ಭಯೋತ್ಪಾದನಾ ಕೃತ್ಯಗಳಿಗೆ ಕುಮ್ಮಕ್ಕು ನೀಡಲಾಗುತ್ತಿದೆ ಎಂಬ ಆರೋಪದಿಂದ ಮುಕ್ತವಾಗುವ ಸಲುವಾಗಿ ಈ ಮದರಸಾ ಪ್ರಸ್ತುತ ಕ್ರಮ ಕೈಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT