ಗೋವಿಂದ ಪಾನ್ಸರೆ- ನರೇಂದ್ರ ದಾಭೋಲ್ಕರ್- ಎಂ ಎಂ ಕಲಬುರ್ಗಿ 
ದೇಶ

ಸೌಹಾರ್ದ ಚರ್ಚೆ ಸ್ಥಾಪನೆಗೆ ಸರ್ವಭಾಷಾ ಸಂವಾದ ಶುರು

ದೇಶದಲ್ಲಿ ಸೌಹಾರ್ದಯುತ ಸಾರ್ವಜನಿಕ ಚರ್ಚೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಗುಜರಾತ್ ನ ನವಸಾರಿಯಲ್ಲಿ ಹೊಸ ವೇದಿಕೆಯೊಂದು...

ಅಹಮದಾಬಾದ್: ದೇಶದಲ್ಲಿ ಸೌಹಾರ್ದಯುತ ಸಾರ್ವಜನಿಕ ಚರ್ಚೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಗುಜರಾತ್ ನ ನವಸಾರಿಯಲ್ಲಿ ಹೊಸ ವೇದಿಕೆಯೊಂದು ಆರಂಭವಾಗಿದೆ. 
ಹುತಾತ್ಮ ದಿನದ ಹಿನ್ನೆಲೆಯಲ್ಲಿ ಶನಿವಾರ ಸುಮಾರು 500ರಷ್ಟು ಸಾಹಿತಿಗಳು, ಲೇಖಕರು ಹಾಗೂ ಕಲಾವಿದರು ಈ "ಸರ್ವಭಾಷಾ ಸಂವಾದ"ಕ್ಕೆ ಚಾಲನೆ ನೀಡಿದ್ದಾರೆ.
ವಿಶೇಷವೆಂದರೆ, ಹತ್ಯೆಗೀಡಾದ ವಿಚಾರವಾದಿಗಳಾದ ಕರ್ನಾಟಕದ ಎಂ ಎಂ ಕಲಬುರ್ಗಿ, ಮಹಾರಾಷ್ಟ್ರದ ಗೋವಿಂದ ಪಾನ್ಸರೆ, ನರೇಂದ್ರ ದಾಭೋಲ್ಕರ್ ಅವರ ಕುಟುಂಬ ಸದಸ್ಯರೂ ಇದರಲ್ಲಿ ಪಾಲ್ಗೊಂಡಿದ್ದರು.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಅಹಿಂಸಾತ್ಮಕ ಮಾರ್ಗವನ್ನು ಆರಂಭಿಸುವುದೇ ಈ ರಾಜಕೀಯೇತರ ಸಮಾವೇಶದ ಉದ್ದೇಶವಾಗಿದ್ದು, ಡಾ.ಗಣೇಶ್ ದೇವಿ ನೇತೃತ್ವದಲ್ಲಿ ಈ ಕಾರ್ಯಕ್ರಮ ಆರಂಭವಾಗಿದೆ. ಇಲ್ಲಿ ಸೇರಿದ್ದ ಸಾಹಿತಿಗಳು ದಂಡಿಯತ್ತ ಪ್ರಯಾಣ ಬೆಳೆಸುತ್ತಿದ್ದಾಗ ಪೊಲೀಸರು ತಡೆದ ಹಿನ್ನೆಲೆಯಲ್ಲಿ ಅವರು ನವಸಾರಿ ಕೃಷಿ ವಿಶ್ವವಿದ್ಯಾಲಯದ ಆಡಿಟೋರಿಯಂನಲ್ಲಿ ಸೇರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT