ನಿಷೇಧಿತ ಜಿಹಾದಿ ಸಂಘಟನೆಯಿಂದ ಕಾಶ್ಮೀರದಲ್ಲಿ ನಿಧಿ ಸಂಗ್ರಹ 
ದೇಶ

ಪಾಕ್ ಮುಖವಾಡ ಬಯಲು; ನಿಷೇಧಿತ ಜಿಹಾದಿ ಸಂಘಟನೆಯಿಂದ ಕಾಶ್ಮೀರದಲ್ಲಿ ನಿಧಿ ಸಂಗ್ರಹ!

ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗ ಎಂಬ ಮಾತುಗಳನ್ನು ತಿರಸ್ಕರಿಸಿ, ತಾವು ಭಯೋತ್ಪಾದಕ ವಿರೋಧಿಗಳೆಂದು ಪಾಕಿಸ್ತಾನ ಎಷ್ಟೇ ಹೇಳಿದರೂ ಒಂದಲ್ಲ ಒಂದು ರೀತಿ ಪಾಕಿಸ್ತಾನದ...

ಕರಾಚಿ: ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗ ಎಂಬ ಮಾತುಗಳನ್ನು ತಿರಸ್ಕರಿಸಿ, ತಾವು ಭಯೋತ್ಪಾದಕ ವಿರೋಧಿಗಳೆಂದು ಪಾಕಿಸ್ತಾನ ಎಷ್ಟೇ ಹೇಳಿದರೂ ಒಂದಲ್ಲ ಒಂದು ರೀತಿ ಪಾಕಿಸ್ತಾನದ ಮುಖವಾಡ ಬಯಲಾಗುತ್ತಲೇ ಬಂದಿದೆ.

ಇದೀಗ ಇದೇ ಸಾಲಿಗೆ ಪಾಕಿಸ್ತಾನದ ಮತ್ತೊಂದು ಮುಖವಾಡ ಬಯಲಾಗಿದ್ದು, ನಿಷೇಧಿತ ಜಿಹಾದಿ ಸಂಘಟನೆಯಿಂದ ಜಿಹಾದಿಗಳಿಗಾಗಿ ಕಾಶ್ಮೀರದಲ್ಲಿ ನಿಧಿ ಸಂಗ್ರಹ ಮಾಡುತ್ತಿರುವುದು ಬಹಿರಂಗಗೊಂಡಿದೆ.

ಈ ಕುರಿತ ವಿಡಿಯೋವೊಂದು ಇದೀಗ ಬಯಲಾಗಿದೆ. ಭಯೋತ್ಪಾದಕ ಸಂಘಟನೆಯಾಗಿರುವ ಜಿಹಾದಿ ಗುಂಪನ್ನು ಪಾಕಿಸ್ತಾನದಲ್ಲಿ ನಿಷೇಧ ಹೇರಲಾಗಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಈ ಹಿಂದೆ ಘೋಷಣೆ ಮಾಡಿದ್ದರು. ಆದರೆ. ಇದೀಗ ನಿಷೇಧಿತ ಭಯೋತ್ಪಾದಕ ಸಂಘಟನೆಯ ಕಾರ್ಯಕರ್ತರು ಬಹಿರಂಗವಾಗಿಯೇ ರಮ್ಜಾನ್ ಚಾರಿಟಿ ಎಂಬ ಹೆಸರಿನಲ್ಲಿ ನಿಧಿ ಸಂಗ್ರಹ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ವಿಡಿಯೋದಲ್ಲಿರುವ ಪ್ರಕಾರ, ಇಬ್ಬರು-ಮೂವರು ಜನರಿರುವ ಗುಂಪೊಂದು ತಾವು ಜಿಹಾದಿ ಬೆಂಬಲಿಗರು ಎಂದು ಹೇಳಿಕೊಂಡಿದ್ದು, ಬಹಿರಂಗವಾಗಿಯೇ ನಿಧಿ ಸಂಗ್ರಹ ಮಾಡುತ್ತಿರುವುದು ಕಂಡು ಬಂದಿದೆ. ನಿಮ್ಮ ಅತ್ಯಮೂಲ್ಯ ಹಣವನ್ನು ದೇಣಿಗೆ ನೀಡುವ ಮೂಲಕ ಮುಜಾಹಿದ್ದೀನ್ ಸಹೋದರರಾಗಿ ಎಂದು ಹೇಳಿ ಗುಂಪೊಂದು ನಿಧಿ ಸಂಗ್ರಹಿಸುತ್ತಿದೆ. ಪ್ರತೀ ಬಾರಿಗೆ ದೇಣಿಗೆ ಕೇಳುವಾಗಲೆಲ್ಲಾ ಜಿಹಾದಿ ಹೆಸರು ಕೇಳಿಬರುತ್ತಿರುವುದು ವಿಡಿಯೋದಲ್ಲಿ ಬಹಿರಂಗಗೊಂಡಿದೆ

ಭಯೋತ್ಪಾದನೆ ವಿರುದ್ಧ ಕ್ರಮಕೈಗೊಳ್ಳುವಂತೆ ಭಾರತ ಆಗ್ರಹಿಸಿದ್ದಾಗಲೆಲ್ಲಾ ಪಾಕಿಸ್ತಾನ ಸುಳ್ಳು ಹೇಳಿ ಎಂದಿನಂತೆ ತನ್ನ ಚಟುವಟಿಕೆಗಳನ್ನು ಮುಂದುವರೆಸುತ್ತಿರುವುದು ಈ ವಿಡಿಯೋ ಮೂಲಕ ಬಹಿರಂಗಗೊಂಡಿದೆ.

ಕರಾಚಿಯಲ್ಲಿ ರಾಜಕೀಯ ಬೆಂಬಲಿತ ಸಂಘಟನೆಯಾಗಿಗಳಾಗಿರುವ ಮುತ್ತಾಹಿದಾ ಕ್ವಾಮಿ ಮೂವ್ಮೆಂಟ್, ಜೈಶ್-ಇ-ಮೊಹಮ್ಮದ್ ಮತ್ತು ಇತರೆ ಉಗ್ರರ ಸಂಘಟನೆಗಳು ಸ್ವತಂತ್ರವಾಗಿ ತನ್ನ ಚಟುವಟಿಕೆಗಳನ್ನು ನಡೆಸುತ್ತಿರುವುದಾಗಿ ಹೇಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿತ್ತು. ಈ ಬೆನ್ನಲ್ಲೇ ಇಂತಹದ್ದೊಂದು ಬೆಳವಣಿಗೆ ಕಂಡುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT