ನಿಷೇಧಿತ ಜಿಹಾದಿ ಸಂಘಟನೆಯಿಂದ ಕಾಶ್ಮೀರದಲ್ಲಿ ನಿಧಿ ಸಂಗ್ರಹ 
ದೇಶ

ಪಾಕ್ ಮುಖವಾಡ ಬಯಲು; ನಿಷೇಧಿತ ಜಿಹಾದಿ ಸಂಘಟನೆಯಿಂದ ಕಾಶ್ಮೀರದಲ್ಲಿ ನಿಧಿ ಸಂಗ್ರಹ!

ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗ ಎಂಬ ಮಾತುಗಳನ್ನು ತಿರಸ್ಕರಿಸಿ, ತಾವು ಭಯೋತ್ಪಾದಕ ವಿರೋಧಿಗಳೆಂದು ಪಾಕಿಸ್ತಾನ ಎಷ್ಟೇ ಹೇಳಿದರೂ ಒಂದಲ್ಲ ಒಂದು ರೀತಿ ಪಾಕಿಸ್ತಾನದ...

ಕರಾಚಿ: ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗ ಎಂಬ ಮಾತುಗಳನ್ನು ತಿರಸ್ಕರಿಸಿ, ತಾವು ಭಯೋತ್ಪಾದಕ ವಿರೋಧಿಗಳೆಂದು ಪಾಕಿಸ್ತಾನ ಎಷ್ಟೇ ಹೇಳಿದರೂ ಒಂದಲ್ಲ ಒಂದು ರೀತಿ ಪಾಕಿಸ್ತಾನದ ಮುಖವಾಡ ಬಯಲಾಗುತ್ತಲೇ ಬಂದಿದೆ.

ಇದೀಗ ಇದೇ ಸಾಲಿಗೆ ಪಾಕಿಸ್ತಾನದ ಮತ್ತೊಂದು ಮುಖವಾಡ ಬಯಲಾಗಿದ್ದು, ನಿಷೇಧಿತ ಜಿಹಾದಿ ಸಂಘಟನೆಯಿಂದ ಜಿಹಾದಿಗಳಿಗಾಗಿ ಕಾಶ್ಮೀರದಲ್ಲಿ ನಿಧಿ ಸಂಗ್ರಹ ಮಾಡುತ್ತಿರುವುದು ಬಹಿರಂಗಗೊಂಡಿದೆ.

ಈ ಕುರಿತ ವಿಡಿಯೋವೊಂದು ಇದೀಗ ಬಯಲಾಗಿದೆ. ಭಯೋತ್ಪಾದಕ ಸಂಘಟನೆಯಾಗಿರುವ ಜಿಹಾದಿ ಗುಂಪನ್ನು ಪಾಕಿಸ್ತಾನದಲ್ಲಿ ನಿಷೇಧ ಹೇರಲಾಗಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಈ ಹಿಂದೆ ಘೋಷಣೆ ಮಾಡಿದ್ದರು. ಆದರೆ. ಇದೀಗ ನಿಷೇಧಿತ ಭಯೋತ್ಪಾದಕ ಸಂಘಟನೆಯ ಕಾರ್ಯಕರ್ತರು ಬಹಿರಂಗವಾಗಿಯೇ ರಮ್ಜಾನ್ ಚಾರಿಟಿ ಎಂಬ ಹೆಸರಿನಲ್ಲಿ ನಿಧಿ ಸಂಗ್ರಹ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ವಿಡಿಯೋದಲ್ಲಿರುವ ಪ್ರಕಾರ, ಇಬ್ಬರು-ಮೂವರು ಜನರಿರುವ ಗುಂಪೊಂದು ತಾವು ಜಿಹಾದಿ ಬೆಂಬಲಿಗರು ಎಂದು ಹೇಳಿಕೊಂಡಿದ್ದು, ಬಹಿರಂಗವಾಗಿಯೇ ನಿಧಿ ಸಂಗ್ರಹ ಮಾಡುತ್ತಿರುವುದು ಕಂಡು ಬಂದಿದೆ. ನಿಮ್ಮ ಅತ್ಯಮೂಲ್ಯ ಹಣವನ್ನು ದೇಣಿಗೆ ನೀಡುವ ಮೂಲಕ ಮುಜಾಹಿದ್ದೀನ್ ಸಹೋದರರಾಗಿ ಎಂದು ಹೇಳಿ ಗುಂಪೊಂದು ನಿಧಿ ಸಂಗ್ರಹಿಸುತ್ತಿದೆ. ಪ್ರತೀ ಬಾರಿಗೆ ದೇಣಿಗೆ ಕೇಳುವಾಗಲೆಲ್ಲಾ ಜಿಹಾದಿ ಹೆಸರು ಕೇಳಿಬರುತ್ತಿರುವುದು ವಿಡಿಯೋದಲ್ಲಿ ಬಹಿರಂಗಗೊಂಡಿದೆ

ಭಯೋತ್ಪಾದನೆ ವಿರುದ್ಧ ಕ್ರಮಕೈಗೊಳ್ಳುವಂತೆ ಭಾರತ ಆಗ್ರಹಿಸಿದ್ದಾಗಲೆಲ್ಲಾ ಪಾಕಿಸ್ತಾನ ಸುಳ್ಳು ಹೇಳಿ ಎಂದಿನಂತೆ ತನ್ನ ಚಟುವಟಿಕೆಗಳನ್ನು ಮುಂದುವರೆಸುತ್ತಿರುವುದು ಈ ವಿಡಿಯೋ ಮೂಲಕ ಬಹಿರಂಗಗೊಂಡಿದೆ.

ಕರಾಚಿಯಲ್ಲಿ ರಾಜಕೀಯ ಬೆಂಬಲಿತ ಸಂಘಟನೆಯಾಗಿಗಳಾಗಿರುವ ಮುತ್ತಾಹಿದಾ ಕ್ವಾಮಿ ಮೂವ್ಮೆಂಟ್, ಜೈಶ್-ಇ-ಮೊಹಮ್ಮದ್ ಮತ್ತು ಇತರೆ ಉಗ್ರರ ಸಂಘಟನೆಗಳು ಸ್ವತಂತ್ರವಾಗಿ ತನ್ನ ಚಟುವಟಿಕೆಗಳನ್ನು ನಡೆಸುತ್ತಿರುವುದಾಗಿ ಹೇಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿತ್ತು. ಈ ಬೆನ್ನಲ್ಲೇ ಇಂತಹದ್ದೊಂದು ಬೆಳವಣಿಗೆ ಕಂಡುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

SCROLL FOR NEXT