ಜುನಾಗಡ್ ನಲ್ಲಿ ಸಿಂಹಗಳ ಸುತ್ತಾಟ (ವಾಟ್ಸಪ್ ಚಿತ್ರ) 
ದೇಶ

ನಗರದ ಬೀದಿಗಳಲ್ಲಿ 8 ಸಿಂಹಗಳ ಸುತ್ತಾಟ, ಬೆಚ್ಚಿ ಬಿದ್ದ ಗುಜರಾತ್ ಜನತೆ

ಗುಜರಾತ್ ನ ಅತ್ಯಂತ ಜನನಿಭಿಡ ಜುನಾಗಡ್ ನಗರದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ರಾತ್ರಿ ಬರೊಬ್ಬರಿ 8 ಸಿಂಹಗಳು ರಾಜಾರೋಷವಾಗಿ ಸುತ್ತಾಡುತ್ತಿದ್ದು, ನಗರ ವಾಸಿಗಳು ತೀವ್ರ ಪ್ರಾಣ ಆತಂಕದಲ್ಲಿದ್ದಾರೆ.

ಅಹ್ಮದಾಬಾದ್: ಗುಜರಾತ್ ನ ಅತ್ಯಂತ ಜನನಿಭಿಡ ಜುನಾಗಡ್ ನಗರದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ರಾತ್ರಿ ಬರೊಬ್ಬರಿ 8 ಸಿಂಹಗಳು ರಾಜಾರೋಷವಾಗಿ ಸುತ್ತಾಡುತ್ತಿದ್ದು, ನಗರ  ವಾಸಿಗಳು ತೀವ್ರ ಪ್ರಾಣ ಆತಂಕದಲ್ಲಿದ್ದಾರೆ.

ರಾಜಧಾನಿ ಅಹ್ಮದಾಬಾದ್ ನಿಂದ ಸುಮಾರು 300 ಕಿಮೀ ದೂರದಲ್ಲಿ ಜುನಾಗಡ್ ನಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ರಾತ್ರಿ ಸುಮಾರು 9.30 ಸುಮಾರಿನಲ್ಲಿ 2 ಮರಿಗಳು ಸೇರಿದಂತೆ ಒಟ್ಟು 8  ಸಿಂಹಗಳು ನಗರದ ಬೀದಿಯಲ್ಲಿ ಸುತ್ತಾಡಿವೆ. ಸ್ಥಳೀಯ ವ್ಯಕ್ತಿಯೊಬ್ಬರು ಸಿಂಹಗಳ ಸುತ್ತಾಟವನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು ವಾಟ್ಸಪ್ ನಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ  ಇದೀಗ ಗುಜರಾತ್ ನಾದ್ಯಂತ ವ್ಯಾಪಕವಾಗಿ ಹರಿದಾಡುತ್ತಿದ್ದು, ರಾತ್ರೋ ರಾತ್ರಿ ಸಿಂಹಗಳ ಸುತ್ತಾಟದ ವಿಡಿಯೋ ವೈರಲ್ ಆಗಿದೆ.

ಇನ್ನು ಮತ್ತೊಂದ ಪ್ರಕರಣದಲ್ಲಿ ಗಿರ್ ಸಂರಕ್ಷಿತಾರಣ್ಯ ಪ್ರದೇಶದ ಸಮೀಪವಿರುವ ಅಮ್ರೇಲಿ ಜಿಲ್ಲೆಯ ಸಮೀಪ ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿದ ಮೂರು ಸಿಂಹಗಳು ಆತನನ್ನು  ಗಂಭೀರವಾಗಿ ಗಾಯಗೊಳಿಸಿವೆ. ಸಿಂಹಗಳ ದಾಳಿಯಿಂದ ಹೇಗೋ ರಕ್ಷಿಸಿಕೊಂಡ ವ್ಯಕ್ತಿಯನ್ನು ಬಳಿಕ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂಲಗಳ ಪ್ರಕಾರ  ಕುರಿಗಳನ್ನು ಮೇಯಿಸಿಕೊಂಡು ತನ್ನ ಗ್ರಾಮಕ್ಕೆ ವಾಪಸ್ ಆಗುವ ವೇಳೆ ಸಿಂಹಗಳು ಈತನ ಮೇಲೆ ದಾಳಿ ಮಾಡಿವೆ ಎಂದು ಹೇಳಲಾಗುತ್ತಿದೆ.

ಗುಜರಾತ್ ನಲ್ಲಿ ನಿನ್ನೆ ಒಂದೇ ದಿನ ಸಿಂಹಗಳ ದಾಳಿಯಲ್ಲಿ ಮೂವರು ಗಾಯಗೊಂಡ ಕುರಿತು ವರದಿ ದಾಖಲಾಗಿದ್ದು, ಕಳೆದ ಜೂನ್ ತಿಂಗಳಲ್ಲಿ ಸಿಂಹಗಳ ದಾಳಿಯಿಂದಾಗಿ ಓರ್ವ ಮಹಿಳೆ  ಸಾವನ್ನಪ್ಪಿದ್ದಳು. ಇದೀಗ ಮತ್ತೆ ಸಿಂಹಗಳು ಸುದ್ದಿಯಲ್ಲಿದ್ದು, ಅದೂ ಕೂಡ ಜನನಿಭಿಡ ನಗರದಲ್ಲಿ ರಾಜಾರೋಷವಾಗಿ ಸುತ್ತಾಟ ನಡೆಸುವ ಮೂಲಕ ಜನರ ನಿದ್ದೆ ಕದ್ದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ