ಕೇರಳ ಸ್ತ್ರೀ ಶಕ್ತಿ ಲಾಟರಿ 
ದೇಶ

ಕೂಲಿ ಮಾಡುವ ಮಹಿಳೆಗೆ ಬಂಪರ್: 1 ಕೋಟಿ ರು.ಲಾಟರಿ ಬಹುಮಾನ

ತಿರುವನಂತಪುರಂ ಜಿಲ್ಲೆಯ ಕಿಲಿಮನೂರು ಗ್ರಾಮದ ರಬ್ಬರ್ ತೋಟದಲ್ಲಿ ಕೆಲಸ ಮಾಡುವ ನಬೀಸಾ ಎಂಬ ಮಹಿಳೆಯೊಬ್ಬರು 1 ಕೋಟಿ ರೂ. ಬಹುಮಾನ ಪಡೆದುಕೊಂಡಿದ್ದಾರೆ....

ತಿರುವನಂತಪುರ: ಕೇರಳ ಸರ್ಕಾರದ ಸ್ತ್ರೀಶಕ್ತಿ ಲಾಟರಿಯ 11ನೇ ಆವೃತ್ತಿಯಲ್ಲಿ ತಿರುವನಂತಪುರಂ ಜಿಲ್ಲೆಯ ಕಿಲಿಮನೂರು ಗ್ರಾಮದ ರಬ್ಬರ್ ತೋಟದಲ್ಲಿ ಕೆಲಸ ಮಾಡುವ ನಬೀಸಾ ಎಂಬ ಮಹಿಳೆಯೊಬ್ಬರು 1 ಕೋಟಿ ರೂ. ಬಹುಮಾನ ಪಡೆದುಕೊಂಡಿದ್ದಾರೆ.

ಒಮ್ಮೆಗೆ 50 ಟಿಕೇಟ್‌ ಖರೀದಿಸುವ ಹವ್ಯಾಸ ಹೊಂದಿದ್ದ ನಬೀಸಾ ಈ ಹಿಂದೆ ಲಾಟರಿಯಲ್ಲಿ ಸಾವಿರ ದಿಂದ ಐದು ಸಾವಿರದೊರೆಗಿನ ಸಣ್ಣ ಮೊತ್ತವನ್ನು ಪಡೆದಿದ್ದರು. ಎಲ್ಲಾ ತೆರಿಗೆ, ಚಲನ್‌ ಕಳೆದು 63 ಲಕ್ಷ ರೂಪಾಯಿ ಹಣ ನಬೀಸಾ ಕೈಗೆ ಸಿಗಲಿದೆ.

ಅಪಘಾತವೊಂದರಲ್ಲಿ ಒಂದು ಕಾಲು ಕಳೆದುಕೊಂಡಿರುವ ತನ್ನ ತಂಗಿ ಹಾಗೂ ರೋಗ ಪೀಡಿತ ತಾಯಿಯನ್ನು ರಬ್ಬರ್ ತೋಟದಲ್ಲಿ ಕೂಲಿ ಮಾಡಿ ಸಾಕುತ್ತಿದ್ದಾರೆ.

ಒಂದು ಕೋಟಿ ರೂ. ಬಹುಮಾನ ಬಂದಿರುವುದು ಖುಷಿ ತಂದಿದೆ. ಇದರಿಂದ ನನ್ನ ಕಷ್ಟಗಳು ದೂರವಾಗಲಿವೆ. ಲಾಟರಿ ಹಣದಲ್ಲಿ ನಾನು ಸ್ವಲ್ಪ ಜಮೀನು ಖರೀದಿಸಿ ಒಂದು ಮನೆ ಕಟ್ಟಬೇಕು. ನಂತರ ತಂಗಿಗಾಗಿ ಒಂದು ಸಣ್ಣ ಅಂಗಡಿ ಮಾಡಿಕೊಡಬೇಕು ಎಂಬ ಆಸೆ ಇದೆ ಎಂದು ನಬೀಸಾ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT