ನವದೆಹಲಿ: ಸಾಮಾಜಿಕ ಮಾಧ್ಯಮದ ಮೂಲಕ ಪಾಕಿಸ್ತಾನ, ಯುವಕರಲ್ಲಿ ತೀವ್ರಗಾಮಿತ್ವವನ್ನು ಪ್ರಚಾರ ಮಾಡುತ್ತಿದೆ ಎಂದು ಸರ್ಕಾರ ಹೇಳಿದೆ.
ರಾಜ್ಯಸಭೆ ಕಲಾಪದ ವೇಳೆ ಲಿಖಿತ ಹೇಳಿಕೆಗೆ ಉತ್ತರಿಸಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸ್ ರಾಜ್ ಅಹಿರ್, ಜಮ್ಮು-ಕಾಶ್ಮೀರದಲ್ಲಿ ಸಾರ್ವಜನಿಕರ ಪ್ರತಿರೋಧಕ್ಕೆ ಪಟ್ಟಭದ್ರ ಗುಂಪುಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕರಲ್ಲಿ ತೀವ್ರಗಾಮಿತ್ವವನ್ನು ಪ್ರಚಾರ ಮಾಡಲು ಪಾಕಿಸ್ತಾನ ಹೊಸ ತಂತ್ರ ರೂಪಿಸಿದೆ ಎಂದು ಹೇಳಿದರು.
ಈ ವರ್ಷ, ಸಾಮಾಜಿಕ ಮಾಧ್ಯಮಗಳು ಮತ್ತು ಪಟ್ಟಭದ್ರ ಗುಂಪುಗಳ ಮೂಲಕ ಪಾಕಿಸ್ತಾನ ನಾಗರಿಕ ಪ್ರತಿರೋಧಕ್ಕೆ ತೀವ್ರಗಾಮಿತ್ವವನ್ನು ಪ್ರಚಾರಮಾಡಲು ಪಾಕಿಸ್ತಾನ ತಂತ್ರ ಹೆಣೆದಿದೆ ಎಂದು ಹೇಳಿದರು.
ಉಗ್ರಗಾಮಿ ಪಡೆಗಳು ಹತಾಶರಾಗಿ ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಪ್ರಚೋದಿಸುತ್ತಿವೆ ಎಂದು ಉತ್ತರಿಸಿದರು.