ಮನೋಹರ್ ಪರಿಕ್ಕರ್ 
ದೇಶ

ಅನಾರೋಗ್ಯಕ್ಕೊಳಗಾದ ಮಗಳಿಗಾಗಿ ಸಹಾಯ ಕೋರಿದ ನೌಕಾ ಪಡೆ ಮಾಜಿ ಅಧಿಕಾರಿ: ನೆರವಿಗೆ ಧಾವಿಸಿದ ಪರಿಕ್ಕರ್!

ಕೇಂದ್ರ ಸಚಿವರ ಸಂವೇದನಾಶೀಲತೆಯುಳ್ಳ ಕಾರ್ಯವೈಖರಿ ಮತ್ತೊಮ್ಮೆ ಸಾಬೀತಾಗಿದ್ದು, ನೌಕಾಪಡೆಯ ಮಾಜಿ ಅಧಿಕಾರಿ ರವಿಕಾಂತ್ ಸೋನಿ ನೆರವಿಗೆ ಮನೋಹರ್ ಪರಿಕ್ಕರ್ ಧಾವಿಸಿದ್ದಾರೆ.

ನವದೆಹಲಿ: ಕೇಂದ್ರ ಸಚಿವರ ಸಂವೇದನಾಶೀಲತೆಯುಳ್ಳ ಕಾರ್ಯವೈಖರಿ ಮತ್ತೊಮ್ಮೆ ಸಾಬೀತಾಗಿದ್ದು, ಮಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಸಹಾಯ ಕೋರಿದ ನೌಕಾಪಡೆಯ ಮಾಜಿ ಅಧಿಕಾರಿ ರವಿಕಾಂತ್ ಸೋನಿ ಅವರ ನೆರವಿಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಧಾವಿಸಿದ್ದಾರೆ.

ವೆಂಟಿಲೇಟರ್ ನಲ್ಲಿದ್ದ ರವಿಕಾಂತ್ ಸೋನಿ ಅವರ ಪುತ್ರಿಯನ್ನು ದಾಖಲಿಸಿದ್ದ ಆಸ್ಪತ್ರೆಯಲ್ಲಿ  ಸೂಕ್ತ ಚಿಕಿತ್ಸಾ ಸೌಲಭ್ಯಗಳು ಇಲ್ಲದ ಕಾರಣ ಅವರನ್ನು ಹೆಲಿಕಾಫ್ಟರ್ ಮೂಲಕ ದೆಹಲಿಯ ಆರ್ಮಿ ರಿಸರ್ಚ್ ಹಾಗು ರೆಫರಲ್ ಆಸ್ಪತ್ರೆಗೆ ಸ್ಥಳಾಂತರಿಸುವುದು ಅಗತ್ಯವಾಗಿತ್ತು. ಆದರೆ ಕೆಲವು ಕಾರಣಗಳಿಂದಾಗಿ ಹೆಲಿಕಾಫ್ಟರ್ ನೀಡಲು ವಾಯು ಪಡೆಯಿಂದ ಸಕಾರಾತ್ಮಕ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ರವಿಕಾಂತ್ ಸೋನಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಗೆ ಟ್ವೀಟ್ ಮಾಡಿದ್ದಾರೆ.

" ನನ್ನ ಮಗಳು ಅನಾರೋಗ್ಯಕ್ಕೊಳಗಾಗಿದ್ದು ವೆಂಟಿಲೇಟರ್ ನಲ್ಲಿದ್ದಾಳೆ, ಆಕೆಯನ್ನು ಹೆಲಿಕಾಫ್ಟರ್ ಮೂಲಕ ದೆಹಲಿಯ ಆರ್ಮಿ ರಿಸರ್ಚ್ ಹಾಗು ರೆಫರಲ್ ಆಸ್ಪತ್ರೆಗೆ ಸ್ಥಳಾಂತರಿಸುವುದು ಅಗತ್ಯವಾಗಿದೆ, ಆದರೆ ಸಾಮಾನ್ಯ ಹೆಲಿಕಾಫ್ಟರ್ ಅಂಬಿಲೆನ್ಸ್ ಮೂಲಕ ಸ್ಥಳಾಂತರಿಸುವುದಕ್ಕೆ ಹವಾಮಾನ ವೈಪರಿತ್ಯ ಅಡ್ಡಿಯಾಗಿದೆ. ಅಷ್ಟೇ ಅಲ್ಲದೆ 1800 ಗಂಟೆಗಳಲ್ಲಿ ದೆಹಲಿಯಲ್ಲಿ ನಾಗರಿಕ ವಿಮಾನ ಅಂಬುಲೆನ್ಸ್ ಗಳು ಕಾರ್ಯನಿರ್ವಹಿಸುವುದಕ್ಕೆ ಅವಕಾಶ ಇರುವುದಿಲ್ಲ,  ನಮಗೆ ಕಡಿಮೆ ಸಮಯ ಇದೆ, ಆದರೂ ನೀವು ನಮಗೆ ಸಹಾಯ ಮಾಡಬಹುದು ಎಂದು ಟ್ವೀಟ್ ಮಾಡಿದ್ದಾರೆ.  ನಿಮ್ಮ ಸಹಾಯ ರಕ್ಷಣಾ ಇಲಾಖೆಯಲ್ಲಿರುವಮ್ ನಿವೃತ್ತರಾಗಿರುವ ಲಕ್ಷಾಂತರ ಜನರ ನಂಬಿಕೆಯನ್ನು ಉಳಿಸುತ್ತದೆ ಎಂದು ರವಿಕಾಂತ್ ಸೋನಿ ಸರಣಿ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.  
ಟ್ವೀಟ್ ಗಳನ್ನು ನೋಡುತ್ತಿದ್ದಂತೆಯೇ ಕಾರ್ಯನಿರತರಾದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಚತ್ತೀಸ್ ಗಢದಿಂದ ದೆಹಲಿಗೆ ರೋಗಿಯನ್ನು  ಆರ್ಮಿ ರಿಸರ್ಚ್ ಹಾಗೂ ರೆಫರಲ್ ಆಸ್ಪತ್ರೆಗೆ ವಾಯುಸೇನೆ ಹೆಲಿಕಾಫ್ಟರ್ ಆಂಬುಲೆನ್ಸ್ ಮೂಲಕ ಕರೆತರಲು ರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಂತರ ರಕ್ಷಣಾ ಸಚಿವರಿಗೆ ನೌಕಾ ಪಡೆಯ ಮಾಜಿ ಅಧಿಕಾರಿ ರವಿಕಾಂತ್ ಸೋನಿ ಟ್ವೀಟ್ ಮಾಡಿದ್ದು ಧನ್ಯವಾದ ತಿಳಿಸಿದ್ದು ಈ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ, ಭಾರತೀಯ ಸೇನಾಪಡೆ ಭಾಗವಾಗಿದ್ದಿದ್ದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

SCROLL FOR NEXT