ಗುರುದೀಪ್ ಸಿಂಗ್ 
ದೇಶ

ಇಂಡೋನೇಷ್ಯಾ: ಕೊನೆ ಕ್ಷಣದಲ್ಲಿ ಮರಣದಂಡನೆಯಿಂದ ಬಚಾವಾದ ಭಾರತೀಯ

ಮಾದಕ ದ್ರವ್ಯ ಕಳ್ಳಸಾಗಣೆ ಮಾಡಿ ಇಂಡೋನೇಷ್ಯಾದಲ್ಲಿ ಸಿಕ್ಕಿಬಿದ್ದಿದ್ದ ಭಾರತದ ಪಂಜಾಬ್ ಮೂಲದ ಗುರುದೀಪ್ ಸಿಂಗ್ ಕೊನೆ ಕ್ಷಣದಲ್ಲಿ ಮರಣದಂಡನೆಯಿಂದ...

ನವದೆಹಲಿ: ಮಾದಕ ದ್ರವ್ಯ ಕಳ್ಳಸಾಗಣೆ ಮಾಡಿ ಇಂಡೋನೇಷ್ಯಾದಲ್ಲಿ ಸಿಕ್ಕಿಬಿದ್ದಿದ್ದ ಭಾರತದ ಪಂಜಾಬ್ ಮೂಲದ ಗುರುದೀಪ್ ಸಿಂಗ್ ಕೊನೆ ಕ್ಷಣದಲ್ಲಿ ಮರಣದಂಡನೆಯಿಂದ ಪಾರಾಗಿದ್ದಾರೆ.

ಜಕಾರ್ತಾದ ಸಿಲಾಕಾಪ್ ದ್ವೀಪದಲ್ಲಿ ಶುಕ್ರವಾರ ಬೆಳಗ್ಗೆ ಗುರುದೀಪ್ ಸಿಂಗ್ ಸೇರಿದಂತೆ ಒಟ್ಟು 14 ಅಪರಾಧಿಗಳನ್ನು ಗುಂಡು ಹೊಡೆದು ಹತ್ಯೆಗೈಯಲು ನಿರ್ಧರಿಸಲಾಗಿತ್ತು. ಆದರೆ ಓರ್ವ ಇಂಡೋನೇಷ್ಯಾ ಹಾಗೂ 3 ನೈಜೀರಿಯಾ ಅಪಾಧಿಗಳಿಗಳನ್ನು ಮಾತ್ರ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು ಉಳಿದ 10 ಅಪರಾಧಿಗಳನ್ನು ಜೈಲಿನಲ್ಲೇ ಇಡಲಾಗಿದೆ.

ಗುರುದೀಪ್ ಸಿಂಗ್ ಮರಣದಂಡನೆಯಿಂದ ಪಾರಾಗಲು ಭಾರತದ ವಿದೇಶಾಂಗ ವ್ಯವಹಾಗಳ ಸಚಿವಾಲಯವೇ ಕಾರಣ. ಈ ಬಗ್ಗೆ ಮಾಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದು, ಗುರುದೀಪ್ ಗೆ ಮರಣದಂಡನೆ ಜಾರಿಗೊಳಿಸಿಲ್ಲ ಎಂದು ಇಂಡೋನೇಷ್ಯಾದಲ್ಲಿನ ಭಾರತೀಯ ರಾಯಭಾರಿಯಿಂದ ಮಾಹಿತಿ ಸಿಕ್ಕಿದೆ ಎಂದು ಹೇಳಿದ್ದಾರೆ.

ಮಾದಕ ದ್ರವ್ಯ ಕಳ್ಳಸಾಗಣೆ ಪ್ರಕರಣದಲ್ಲಿ 2005ರಲ್ಲಿ ಗುರುದೀಪ್ ಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಆದರೆ ಈಗಾಗಲೇ ದಶಕಕ್ಕೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದು, ಮರಣದಂಡನೆಯಿಂದ ವಿನಾಯಿತಿ ನೀಡಬೇಕು ಎಂದು ಮಾನವ ಹಕ್ಕು ಹೋರಾಟ ಸಂಘಟನೆಗಳು ಮನವಿ ಮಾಡಿಕೊಂಡಿದ್ದವು.

ಇನ್ನು ಗುರುದೀಪ್ ಸಿಂಗ್ ನ ಶಿಕ್ಷೆಯನ್ನು ಇಂಡೋನೇಷ್ಯಾ ರದ್ದುಪಡಿಸಿಲ್ಲ. ಮರಣದಂಡನೆ ಜಾರಿ ಬಗ್ಗೆ ಶೀಘ್ರ ಮರುನಿರ್ಧಾರ ಮಾಡಲಾಗುವುದು ಎಂದು ಅಲ್ಲಿನ ಅಟಾರ್ನಿ ಜನರಲ್ ಮುಹಮದ್ ಪ್ಯಾಸ್ಯೆಟೊ ಹೇಳಿದ್ದಾರೆ.

ಗುರುದೀಪ್ ಸಿಂಗ್ ಮರಣದಂಡನೆಯಿಂದ ಪಾರಾಗಿರುವ ಸುದ್ಧಿ ಕುಟುಂಬವರ್ಗದಲ್ಲಿ ಹರ್ಷ ಮೂಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!