ಕಾಶ್ಮೀರ ಯುವಕರಲ್ಲಿ ದೇಶಭಕ್ತಿ ಮೂಡಿಸುವುದೇ ದೊಡ್ಡ ಸವಾಲು: ರಾಜಕೀಯ ವಿಶ್ಲೇಶಕರ ಅಭಿಪ್ರಾಯ 
ದೇಶ

ಕಾಶ್ಮೀರ ಯುವಕರಲ್ಲಿ ದೇಶಭಕ್ತಿ ಮೂಡಿಸುವುದೇ ದೊಡ್ಡ ಸವಾಲು: ರಾಜಕೀಯ ವಿಶ್ಲೇಶಕರ ಅಭಿಪ್ರಾಯ

ಕಾಶ್ಮೀರದಲ್ಲಿ ನಿರಂತರ ಗಲಭೆ ನಡೆಯುವುದರಿಂದ ಭಾರತಕ್ಕೆ ಯಾವುದೇ ಲಾಭವುಂಟಾಗುವುದಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಕೋಲ್ಕತಾ: ಕಾಶ್ಮೀರದಲ್ಲಿ ನಿರಂತರ ಗಲಭೆ ನಡೆಯುವುದರಿಂದ ಭಾರತಕ್ಕೆ ಯಾವುದೇ ಲಾಭವುಂಟಾಗುವುದಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ಕಣಿವೆಯ ಯುವಕರಿಗೆ ಕಾಶ್ಮೀರ ನಮ್ಮದು ಎಂಬ ಭಾವನೆಯನ್ನು ಉಂಟು ಮಾಡಲು ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ರಾಜಕೀಯ ವಿಶ್ಲೇಷಕರಿಂದ ಕೇಳಿಬಂದಿದೆ. 
ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರನ್ನು ಎದುರಿಸುವ ಬಿಎಸ್ಎಫ್ ಯೋಧರು ಹಾಗೂ ಸಿಆರ್ ಪಿಎಫ್ ಯೋಧರ ಸಮಸ್ಯೆ ಅರ್ಥವಾಗುತ್ತದೆ. ಆದರೆ ಸಮಸ್ಯೆಯನ್ನು ಬಗೆಹರಿಸಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತದೆ ಎಂದು ಇಂಡಿಯಾನಾ ವಿವಿಯ ಅಮೆರಿಕನ್ ಮತ್ತು ಗ್ಲೋಬಲ್ ಸೆಕ್ಯುರಿಟಿ ಕೇಂದ್ರದ ನಿರ್ದೇಶಕ ಸುಮಿತ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. 
ಕಾಶ್ಮೀರದಲ್ಲಿ ಈಗ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಹತೋಟಿಗೆ ತರಲು ಕೆಲವು ವಾರಗಳಷ್ಟೇ ಬೇಕು, ಆದರೆ ಮತ್ತೊಂದು ಬುರ್ಹಾನ್ ವನಿ ರೀತಿಯ ಪ್ರಕರಣ ನಡೆದರೆ ಮತ್ತೆ ಇಂತಹ ಗಲಭೆ ಸಂಭವಿಸುತ್ತದೆ. ಆದ್ದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ವಿಷಯದಲ್ಲಿ ಕಾಶ್ಮೀರಿ ಯುವಕರಿಗೆ ಕಾಶ್ಮೀರ  ಭಾರತದ್ದು ಹಾಗೂ ನಮ್ಮದು ಎಂಬ ಭಾವನೆ ಮೂಡುವಂತೆ ಮಾಡುವುದೇ ದೊಡ್ಡ ಸವಾಲಿನ ಸಂಗತಿ ಎಂದು ಸುಮಿತ್ ಗಂಗೂಲಿ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ರನ್‌ವೇ ಕಾಣುತ್ತಿರಲಿಲ್ಲ': ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನಕ್ಕೂ ಮುನ್ನ ಏನಾಯಿತು? ಇಲ್ಲಿದೆ ಸ್ಫೋಟಕ ಮಾಹಿತಿ

ಅಜಿತ್ ಪವಾರ್ ಸಾವು: ಇತರ ಸಂಸ್ಥೆಗಳ ಮೇಲೆ ನಂಬಿಕೆಯಿಲ್ಲ, 'ಸುಪ್ರೀಂ' ಮೇಲ್ವಿಚಾರಣೆಯಲ್ಲಿ ವಿಮಾನ ಪತನ ತನಿಖೆಗೆ ಮಮತಾ ಆಗ್ರಹ

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಅತಂತ್ರದಲ್ಲಿ NCP ಭವಿಷ್ಯ?; ರಾಜಕೀಯ ವಿಶ್ಲೇಷಕರು ಹೇಳೋದೇನು?

ಬೆಂಗಳೂರು: ಉದ್ಯಮಿ ಮನೆಯಲ್ಲಿದ್ದ 18 ಕೋಟಿ ರೂ. ಚಿನ್ನಾಭರಣ ಕದ್ದು ಮನೆಗೆಲಸದ ದಂಪತಿ ಪರಾರಿ!

ಆಗ್ರಾದಲ್ಲಿ ಪೈಶಾಚಿಕ ಕೃತ್ಯ: ಲವರ್ ನಿಂದ 'ಹೆಚ್ ಆರ್ ಮ್ಯಾನೇಜರ್' ಹತ್ಯೆ, ದೇಹವನ್ನು ತುಂಡಾಗಿಸಿ, ತಲೆಯನ್ನು ಚರಂಡಿಗೆ ಎಸೆದ ಕಟುಕ!

SCROLL FOR NEXT