ದೇಶ

ರಾಹುಲ್ ಪ್ರಧಾನಿಯಾಗುತ್ತಾರೆ ಎಂದು ಸೋನಿಯಾ ಕನಸು, ದೇಶದ ಜನ ಮೂರ್ಖರಲ್ಲ: ಓಂಪುರಿ

Shilpa D

ನವದೆಹಲಿ: ತಮ್ಮ ಪುತ್ರ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕನಸು ಕಾಣುತ್ತಿದ್ದಾರೆ, ಆದರೆ ದೇಶದ ಜನ ಮೂರ್ಖರಲ್ಲ ಎಂದು ಬಾಲಿವುಡ್ ಹಿರಿಯ ನಟ ಓಂಪುರಿ ಟೀಕಿಸುವ ಮೂಲಕ ಬಿಜೆಪಿ ಸೇರುವ ಮುನ್ಸೂಚನೆ ನೀಡಿದ್ದಾರೆ.

ತಮ್ಮ ಮುಂದಿನ ಚಿತ್ರ ಮರಾಠವಾಡ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು 15ವರ್ಷಗಳ ಕಾಲ ಸೋನಿಯಾ ಅವರು ತಮ್ಮ ಕೈಗೊಂಬೆಯನ್ನಾಗಿ ಮಾಡಿಕೊಂಡು ದಬ್ಬಾಳಿಕೆ ನಡೆಸಿದರು. ಒಮ್ಮೆ ಕೂಡ ಸಾಮಾನ್ಯ ಜನರ ನಾಡಿ ಮಿಡಿತವನ್ನು ಅರಿತು ಕೊಂಡಿಲ್ಲ. ಈ ವಿಷಯದಲ್ಲಿ ಮೋದಿ ಅವರ ನಡೆ ಶ್ಲಾಘನೀಯವಾಗಿದೆ ಎಂದು ಹೇಳಿದರು.

ರಾಹುಲ್ ಗಾಂಧಿಯ ವಯಸ್ಸೇನು, ಅವರ ಅನುಭವವೇನು? ಎಂದು ಪ್ರಶ್ನಿಸಿದ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಯಕ್ತಿಕವಾಗಿ ಒಬ್ಬ ಉತ್ತಮ ವ್ಯಕ್ತಿ. ಜತೆಗೆ ರಾಜಕಾರಣದಲ್ಲೂ ಅಪಾರ ಅನುಭವ ಪಡೆದಿದ್ದಾರೆ. ಅಂತವರನ್ನು ಪ್ರಧಾನಿಯನ್ನಾಗಿ ಮಾಡದೆ ಕಾಂಗ್ರೆಸ್ ಅಧ್ಯಕ್ಷರು ತಮ್ಮ ಪುತ್ರನನ್ನೇ ಮಾಡಲು ಹೊರಟಿರುವುದು ವಿಪರ್ಯಾಸ ಎಂದು ಪುರಿ ಟೀಕಿಸಿದ್ದಾರೆ.

SCROLL FOR NEXT