ದೇಶ

ಪುದುಚೆರಿ ಮುಖ್ಯಮಂತ್ರಿಯಾಗಿ ವಿ. ನಾರಾಯಣಸ್ವಾಮಿ ಪ್ರಮಾಣ ವಚನ

Shilpa D

ಪುದುಚೆರಿ: ಮಾಜಿ ಕೇಂದ್ರ ಸಚಿವ ವಿ. ನಾರಾಯಣಸ್ವಾಮಿ ಪುದುಚೆರಿ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.

ನಾರಾಯಣಸ್ವಾಮಿ ಅವರ ಜೊತೆ ಐವರು ಕಾಂಗ್ರೆಸ್ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. ಲೆಪ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಆರು ಮಂದಿ ತಂಡಕ್ಕೆ ಪ್ರಮಾಣ ವಚನ ಬೋಧಿಸಿದರು. 30 ಸದಸ್ಯ ಬಲದ ಪುದುಚೆರಿ ವಿಧಾನ ಸಭೆಯಲ್ಲಿ ಕಾಂಗ್ರೆಸ್ -ಡಿಎಂಕೆ ಮೈತ್ರಿಕೂಟವು 17 ಸದಸ್ಯರನ್ನು ಹೊಂದಿದೆ.

ಪುದುಚೆರಿಯ ಬೀಚ್ ರೋಡ್ ನಲ್ಲಿರುವ ಐತಿಹಾಸಿಕ ಗಾಂಧಿ ಭವನದಲ್ಲಿ ಮಧ್ಯಾಹ್ನ ನಡೆದ ಪದಗ್ರಹಣ ಕಾರ್ಯಕ್ರಮ ಜರುಗಿತು. ಎರಡನೇ ಯುಪಿಎ ಸರ್ಕಾರದಲ್ಲಿ ನಾರಾಯಣ ಸ್ವಾಮಿ ಕೇಂದ್ರ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.

SCROLL FOR NEXT