ಸಾಂದರ್ಭಿಕ ಚಿತ್ರ 
ದೇಶ

ವಾಟ್ಸಾಪ್ ನಿಂದ ಭಯೋತ್ಪಾದನೆ ಹೆಚ್ಚಳ: ಬ್ಯಾನ್ ಮಾಡುವಂತೆ ಪಿಐಎಲ್

ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆಪ್, ವೈಬರ್ ಮೆಸೇಜಿಂಗ್ ಆಪ್​ಗಳು ದೇಶದ ಭದ್ರತೆಗೆ ಅಪಾಯಕಾರಿಯಾಗಿದ್ದು, ಭಯೋತ್ಪಾದನೆಯ ..

ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆಪ್, ವೈಬರ್ ಮೆಸೇಜಿಂಗ್ ಆಪ್​ಗಳು ದೇಶದ ಭದ್ರತೆಗೆ ಅಪಾಯಕಾರಿಯಾಗಿದ್ದು, ಭಯೋತ್ಪಾದನೆಯ ಹೆಚ್ಚಳಕ್ಕೆ ಕಾರಣವಾಗಿದೆ. ಆದ್ದರಿಂದ ಭಾರದಲ್ಲಿ ಇಂತಹ ಮೆಸೇಜಿಂಗ್ ಆಪ್​ಗಳನ್ನು ನಿಷೇಧ ಮಾಡಬೇಕೆಂದು ಸುಪ್ರೀಂ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಕೋಟ್ಯಾಂತರ ಜನರನ್ನು ಆಕರ್ಷಿಸಿದ್ದ ವಾಟ್ಸ್ ಆಪ್ ಭಯೋತ್ಪಾದನಾ ಚಟುವಟಿಕೆಗಳಿಗೂ ನೆರವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಹರಿಯಾಣ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಸುಧೀರ್ ಯಾದವ್ ಸುಪ್ರೀಂ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲ್ಲಿಸಿದ್ದಾರೆ.

ವಾಟ್ಸ್ ಆಪ್​ನ ರಹಸ್ಯಲಿಪಿ ಸೌಲಭ್ಯ ಬಳೆಸಿಕೊಂಡು ಕ್ರಿಮಿನಲ್ಸ್ ಹಾಗೂ ಭಯೋತ್ಪಾದಕರು ದೇಶದ್ರೋಹಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇಬ್ಬರು ನಡೆಸಿದ ಮಾತುಕತೆ ಮೂರನೇ ವ್ಯಕ್ತಿಗೆ ದೊರೆಯುವುದಿಲ್ಲ. ಭಯೋತ್ಪಾದಕರು ಸೆರೆ ಸಿಕ್ಕರು ಕಂಪನಿಗಳು ಮಾಹಿತಿ ನೀಡಲು ನಿರಾಕರಿಸುತ್ತವೆ.

265 ಬಿಟ್ ಸಾಮರ್ಥ್ಯದ ರಹಸ್ಯ ಲಿಪಿಯನ್ನು ಭೇದಿಸಲು ಸೂಪರ್ ಕಂಪ್ಯೂಟರ್​ಗಳಿಗೆ ನೂರಾರು ವರ್ಷಗಳು ಬೇಕಾಗುತ್ತವೆ. ಇಂತಹ ಬೆಳವಣಿಗೆಗಳು ಸಂಭಾವ್ಯದಲ್ಲಿ ದೇಶದ ಭದ್ರತೆಗೆ ಅಪಾಯ ಉಂಟು ಮಾಡುವ ಸಾಧ್ಯತೆಯಿದೆ ಎಂದು ಅರ್ಜಿಯಲ್ಲಿ ದೂರಿದ್ದಾರೆ. ಈ ಸಂಬಂಧ ಜೂನ್ 29ರಂದು ನ್ಯಾಯಪೀಠ ಪ್ರಕರಣ ಅರ್ಜಿ ವಿಚಾರಣೆ ನಡೆಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT