ನವದೆಹಲಿ: ಪಾಕಿಸ್ತಾನ ಪರವಾಗಿ ಬೇಹುಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಭಾರತೀಯ ಎಂಟು ನಿವೃತ್ತ ಸೈನಿಕರನ್ನು ಬಂಧಿಸಲಾಗಿದೆ.
ಪಾಕಿಸ್ತಾನದ ಗುಪ್ತಚತರ ಇಲಾಖೆಗೆ ಕಳೆದ ಮೂರು ವರ್ಷಗಳಿಂದ ಮಾಹಿತಿ ನೀಡುತ್ತಿದ್ದ ಭಾರತೀಯ 8 ನಿವೃತ್ತ ಸೈನಿಕರನ್ನು ಬಂಧಿಸಲಾಗಿದೆ ಎಂದು ಗೃಹ ಇಲಾಖೆಯ ರಾಜ್ಯ ಸಚಿವ ಹರಿಬಾಯ್ ಚೌಧರಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಉದ್ಯೋಗಗಳು, ವಿದ್ಯಾರ್ಥಿವೇತನ, ವಿತ್ತೀಯ ಪರಿಗಣನೆ ನೆಪ ಹೇಳುತ್ತಾ, ಸೇವೆಯಲ್ಲಿರುವ ಸೈನಿಕರೊಂದಿಗೆ ಮಾಹಿತಿ ಕಲೆ ಹಾಕುತ್ತಿದ್ದ ಈ ಬಂಧಿತ ನಿವೃತ್ತ ಸೈನಿಕರು ಪಾಕಿಸ್ತಾನ ಗುಪಚರ ಇಲಾಖೆಗೆ ಮಾಹಿತಿ ನೀಡುತ್ತಿದ್ದರು.
ಸೇನೆಯಲ್ಲಿರುವ ಯೋಧರೊಂದಿಗೆ ನಿವೃತ್ತ ಸೈನಿಕರು ಸಂಪರ್ಕದಲ್ಲಿರುತ್ತಾರೆ. ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಸಲಹೆ ನೀಡುವುದು ಸಹಜ. ಆದರೆ, ಈ ಎಂಟು ಮಂದಿ ಇದನ್ನು ದುರುಪಯೋಗ ಪಡೆಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos