ಗುಲಾಂ ನಬಿ ಆಜಾದ್ 
ದೇಶ

ಆರ್‌ಎಸ್‌ಎಸ್'ನ್ನು ಇಸಿಸ್ ಗೆ ಹೋಲಿಸಿಲ್ಲ: ಗುಲಾಂ ನಬಿ ಆಜಾದ್

ಆರ್ ಎಸ್ಎಸ್' ಇಸಿಸ್ ಗೆ ಹೋಲಿಕೆ ಮಾಡಿದ್ದ ಗುಲಾಂ ನಬಿ ಆಜಾದ್ ಅವರ ಭಾಷಣ ಸೋಮವಾರ ನಡೆಯುತ್ತಿರುವ ಕಲಾಪದಲ್ಲಿ ಗದ್ದಲವನ್ನುಂಟು ಮಾಡಿದೆ...

ನವದೆಹಲಿ: ಆರ್ ಎಸ್ಎಸ್' ಇಸಿಸ್ ಗೆ ಹೋಲಿಕೆ ಮಾಡಿದ್ದ ಗುಲಾಂ ನಬಿ ಆಜಾದ್ ಅವರ ಭಾಷಣ ಸೋಮವಾರ ನಡೆಯುತ್ತಿರುವ ಕಲಾಪದಲ್ಲಿ ಗದ್ದಲವನ್ನುಂಟು ಮಾಡಿದೆ.
ಗುಲಾಂ ನಬಿ ಅವರ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ನಾಯಕರು, ಹೇಳಿಕೆ ಸಂಬಂಧ ಗುಲಾಂ ನಬಿ ಆಜಾದ್ ಅವರು ಕೂಡಲೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದರು.

ಇದಕ್ಕುತ್ತರಿಸಿ ಆಜಾದ್ ಅವರು, ಉತ್ತರ ಕೇಳುವ ತಾಳ್ಮೆಯನ್ನು ತೋರಿಸಿ ಎಂದು ಬಿಜೆಪಿ ನಾಯಕರಿಗೆ ಆಗ್ರಹಿಸಿದ್ದರು. ನಾನು ಆರ್'ಎಸ್ಎಸ್ ನ್ನು ಇಸಿಸ್ ಉಗ್ರ ಸಂಘಟನೆಗೆ ಹೋಲಿಕೆ ಮಾಡಿಯೇ ಇಲ್ಲ. ನನ್ನ ಭಾಷಣವನ್ನು ಮಾಧ್ಯಮಗಳಲ್ಲಿ ತಿರುಚಲಾಗಿದೆ ಎಂದು ಆರೋಪಿಸಿದರು.

ಬೇಕಿದ್ದರೆ ನನ್ನ ಭಾಷಣದ ಸಿಡಿ ಇದೆ. ಭಾಷಣದ ಪ್ರತಿ ನನ್ನ ಬಳಿಯಿದೆ. ಗದ್ದಲವುಂಟು ಮಾಡುವ ಮೊದಲು ತಾಳ್ಮೆಯಿಂದ ನನ್ನ ಭಾಷಣವನ್ನು ವೀಕ್ಷಿಸಿ. ಒಂದು ವೇಳೆ ನಾನು ತಪ್ಪು ಹೇಳಿದ್ದರೆ ಹಕ್ಕುಚ್ಯುತಿ ತನ್ನಿ ಎಂದು ಹೇಳಿದರು. ಅಲ್ಲದೆ, ತಾವು ಮಾಡಿದ್ದ ಭಾಷಣದ ಸಿಡಿ ಪ್ರತಿಯನ್ನು ಸ್ಪೀಕರ್ ಮಹಾಜನ್ ಅವರಿಗೆ ಹಸ್ತಾಂತರಿಸಿದರು.

ನಂತರ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಗುಲಾಂ ನಬಿ ಆಜಾದ್ ಅವರು ಹಿರಿಯ ಕಾಂಗ್ರೆಸ್ ನಾಯಕರಾಗಿದ್ದು, ಈ ರೀತಿಯ ಹೇಳಿಕೆ ನೀಡಿರುವುದು ತಪ್ಪು. ಮೊದಲು ಆಜಾದ್ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಿಮ್ಮ ಭಾಷಣದ ಮೂಲಕ ಇಸಿಸ್ ಗೆ ನೀವು ಗೌರವವನ್ನು ಸಲ್ಲಿಸಿದ್ದೀರಿ. ಅದನ್ನು ನಿಯಂತ್ರಿಸಬೇಕು. ಇಸಿಸ್ ಉಗ್ರ ಸಂಘಟನೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT