ಗುಲಾಂ ನಬಿ ಆಜಾದ್ 
ದೇಶ

ಆರ್‌ಎಸ್‌ಎಸ್'ನ್ನು ಇಸಿಸ್ ಗೆ ಹೋಲಿಸಿಲ್ಲ: ಗುಲಾಂ ನಬಿ ಆಜಾದ್

ಆರ್ ಎಸ್ಎಸ್' ಇಸಿಸ್ ಗೆ ಹೋಲಿಕೆ ಮಾಡಿದ್ದ ಗುಲಾಂ ನಬಿ ಆಜಾದ್ ಅವರ ಭಾಷಣ ಸೋಮವಾರ ನಡೆಯುತ್ತಿರುವ ಕಲಾಪದಲ್ಲಿ ಗದ್ದಲವನ್ನುಂಟು ಮಾಡಿದೆ...

ನವದೆಹಲಿ: ಆರ್ ಎಸ್ಎಸ್' ಇಸಿಸ್ ಗೆ ಹೋಲಿಕೆ ಮಾಡಿದ್ದ ಗುಲಾಂ ನಬಿ ಆಜಾದ್ ಅವರ ಭಾಷಣ ಸೋಮವಾರ ನಡೆಯುತ್ತಿರುವ ಕಲಾಪದಲ್ಲಿ ಗದ್ದಲವನ್ನುಂಟು ಮಾಡಿದೆ.
ಗುಲಾಂ ನಬಿ ಅವರ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ನಾಯಕರು, ಹೇಳಿಕೆ ಸಂಬಂಧ ಗುಲಾಂ ನಬಿ ಆಜಾದ್ ಅವರು ಕೂಡಲೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದರು.

ಇದಕ್ಕುತ್ತರಿಸಿ ಆಜಾದ್ ಅವರು, ಉತ್ತರ ಕೇಳುವ ತಾಳ್ಮೆಯನ್ನು ತೋರಿಸಿ ಎಂದು ಬಿಜೆಪಿ ನಾಯಕರಿಗೆ ಆಗ್ರಹಿಸಿದ್ದರು. ನಾನು ಆರ್'ಎಸ್ಎಸ್ ನ್ನು ಇಸಿಸ್ ಉಗ್ರ ಸಂಘಟನೆಗೆ ಹೋಲಿಕೆ ಮಾಡಿಯೇ ಇಲ್ಲ. ನನ್ನ ಭಾಷಣವನ್ನು ಮಾಧ್ಯಮಗಳಲ್ಲಿ ತಿರುಚಲಾಗಿದೆ ಎಂದು ಆರೋಪಿಸಿದರು.

ಬೇಕಿದ್ದರೆ ನನ್ನ ಭಾಷಣದ ಸಿಡಿ ಇದೆ. ಭಾಷಣದ ಪ್ರತಿ ನನ್ನ ಬಳಿಯಿದೆ. ಗದ್ದಲವುಂಟು ಮಾಡುವ ಮೊದಲು ತಾಳ್ಮೆಯಿಂದ ನನ್ನ ಭಾಷಣವನ್ನು ವೀಕ್ಷಿಸಿ. ಒಂದು ವೇಳೆ ನಾನು ತಪ್ಪು ಹೇಳಿದ್ದರೆ ಹಕ್ಕುಚ್ಯುತಿ ತನ್ನಿ ಎಂದು ಹೇಳಿದರು. ಅಲ್ಲದೆ, ತಾವು ಮಾಡಿದ್ದ ಭಾಷಣದ ಸಿಡಿ ಪ್ರತಿಯನ್ನು ಸ್ಪೀಕರ್ ಮಹಾಜನ್ ಅವರಿಗೆ ಹಸ್ತಾಂತರಿಸಿದರು.

ನಂತರ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಗುಲಾಂ ನಬಿ ಆಜಾದ್ ಅವರು ಹಿರಿಯ ಕಾಂಗ್ರೆಸ್ ನಾಯಕರಾಗಿದ್ದು, ಈ ರೀತಿಯ ಹೇಳಿಕೆ ನೀಡಿರುವುದು ತಪ್ಪು. ಮೊದಲು ಆಜಾದ್ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಿಮ್ಮ ಭಾಷಣದ ಮೂಲಕ ಇಸಿಸ್ ಗೆ ನೀವು ಗೌರವವನ್ನು ಸಲ್ಲಿಸಿದ್ದೀರಿ. ಅದನ್ನು ನಿಯಂತ್ರಿಸಬೇಕು. ಇಸಿಸ್ ಉಗ್ರ ಸಂಘಟನೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ