ದೇವ ಮಾನವ ಪ್ರಮೋದ್ ಬಾಬಾ (ವೀಡಿಯೋದಿಂದ ತೆಗೆದ ಚಿತ್ರ) 
ದೇಶ

15 ದಿನಗಳ ನಂತರ ಸಮಾಧಿಯಿಂದ ಎದ್ದುಬಂದ ದೇವ ಮಾನವ!

ಇಲ್ಲಿನ ಮಾದೇಪುರ ಜಿಲ್ಲೆಯಲ್ಲಿ 15 ದಿನಗಳ ಹಿಂದೆ ಸಮಾಧಿಯಾಗಿದ್ದ ದೇವಮಾನವನೊಬ್ಬ ಸಮಾಧಿಯಿಂದ ಎದ್ದು ಬಂದ ಘಟನೆ ವರದಿಯಾಗಿದೆ....

ಬಿಹಾರ: ಇಲ್ಲಿನ ಮಾದೇಪುರ ಜಿಲ್ಲೆಯಲ್ಲಿ 15 ದಿನಗಳ ಹಿಂದೆ ಸಮಾಧಿಯಾಗಿದ್ದ ದೇವಮಾನವನೊಬ್ಬ ಸಮಾಧಿಯಿಂದ ಎದ್ದು ಬಂದ ಘಟನೆ ವರದಿಯಾಗಿದೆ.
ಪ್ರಮೋದ್ ಬಾಬಾ ಎಂದು ಕರೆಯಲ್ಪಡುವ ದೇವಮಾನವ ಭಾನುವಾರ ಸಮಾಧಿಯಿಂದ ಹೊರೆಗೆ ಬಂದಿದ್ದಾರೆ . ಬಾಬಾ ಅವರು ಸುರಕ್ಷಿತರಾಗಿದ್ದಾರೆ. ಸಮಾಧಿಯಿಂದ ಹೊರ ಬಂದ ನಂತರ ಅವರು ವೈದ್ಯರನ್ನು ಭೇಟಿಯಾಗಿದ್ದಾರೆ ಎಂದು ಮಾದೇಪುರ ಎಸ್ಪಿ ವಿಕಾಸ್ ಕುಮಾರ್ ಸುದ್ದಿ ಸಂಸ್ಥೆ ಪಿಟಿಐಗೆ ಹೇಳಿದ್ದಾರೆ.
ಆದಾಗ್ಯೂ, ಜಿಲ್ಲಾಡಳಿತದ ಯಾವುದೇ ಅಧಿಕಾರಿಗಳು ಈ ಬಾಬಾ ಸಮಾಧಿಯಾದುದನ್ನು ನೋಡಿಲ್ಲ ಎಂದು ವಿಕಾಸ್ ಕುಮಾರ್ ಹೇಳಿದ್ದಾರೆ.
ಇಲ್ಲಿ ಬಟ್ಗಾಮ್ ಗ್ರಾಮದಲ್ಲಿ ಫೆ. 28ರಂದು ಬಾಬಾ ಸಮಾಧಿಯಾಗಿದ್ದರು ಎಂದು ಭಕ್ತರು ಹೇಳುತ್ತಿದ್ದಾರೆ. 10 ಅಡಿ ಉದ್ದ, 10 ಅಡಿ ಅಗಲ ಮತ್ತು 15 ಅಡಿ ಆಳದ ಹೊಂಡದಲ್ಲಿ ಬಾಬಾ ಸಮಾಧಿಯಾಗಿದ್ದರು ಅಂತಾರೆ ಅವರ ಭಕ್ತರು. ಬಾಬಾ ಸಮಾಧಿಯಾಗಿರುವ ಬಗ್ಗೆ ಸುದ್ದಿ ತಿಳಿದ ಕೂಡಲೇ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು  ವೈದ್ಯರು ಸ್ಥಳಕ್ಕೆ ಧಾವಿಸಿದರೂ ಬಾಬಾ ನನ್ನು ಸಮಾಧಿಯಿಂದ ಹೊರಕ್ಕೆ ತರುವುದಕ್ಕೆ ಭಕ್ತರು ಅಡ್ಡಿಪಡಿಸಿದ್ದರು. ಆದ್ದರಿಂದ ಜಿಲ್ಲಾಡಳಿತದ ಅಧಿಕಾರಿಗಳು ಬಾಬಾ ನನ್ನು ಸಮಾಧಿಯಿಂದ ರಕ್ಷಿಸುವ ಕಾರ್ಯವನ್ನು ನಿಲ್ಲಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT