ದೇಶ

ನನ್ನ ಹೋರಾಟ ಬಡತನದ ವಿರುದ್ಧವೇ ಹೊರತು, ಸಿಎಂ ಗೊಗೊಯ್ ವಿರುದ್ಧ ಅಲ್ಲ: ಮೋದಿ

Srinivas Rao BV

ಅಸ್ಸಾಂ: ವಿಧಾನಸಭಾ ಚುನಾವಣೆ ಹಿನ್ನೆಲೆ ಅಸ್ಸಾಂ ನ ತಿನ್ಸುಕಿಯಾದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ನನ್ನ ಹೋರಾಟ ಬಡತನದ ವಿರುದ್ಧವೇ ಹೊರತು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ವಿರುದ್ಧ ಅಲ್ಲ ಎಂದು ಹೇಳಿದ್ದಾರೆ.

ಅಸ್ಸಾಂ ಗೆ ಈ ವಿಧಾನಸಭಾ ಚುನಾವಣೆ ನಿರ್ಣಾಯಕವಾಗಿದೆ. ಅಸ್ಸಾಂ ಗಾಗಿ ಉತ್ತಮ ಸೇವೆ ಸೇವೆ ಸಲ್ಲಿಸಲು ಸಮರ್ಥ ಕೇಂದ್ರ ಸಚಿವರೊಬ್ಬರು ನಮ್ಮೊಂದಿಗಿದ್ದಾರೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.   
ಇಂದು ತಿನ್ಸುಕಿಯಾದ ಮೂಲಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಸ್ಸಾಂ ನಲ್ಲಿ ಸರಣಿ ರ್ಯಾಲಿಗಳು ನಿಗದಿಯಾಗಿದ್ದು, ಮಾ.27 ರಂದು ಎರಡು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ.  

SCROLL FOR NEXT