ಪಠಾಣ್ ಕೋಟ್ ನ ಸೂಕ್ಷ್ಮ ಪ್ರದೇಶಗಳು 
ದೇಶ

ಪಠಾಣ್ ಕೋಟ್ ಗೆ ಹೊರಟ ಪಾಕ್ ತಂಡ: ಅಧಿಕಾರಿಗಳ ಭೇಟಿಗೆ ಆಪ್, ಕಾಂಗ್ರೆಸ್ ವಿರೋಧ

ಉಗ್ರಗಾಮಿಗಳ ದಾಳಿ ನಡೆದು ಏಳು ಮಂದಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದ ಪಠಾಣ್ ಕೋಟ್ ವಾಯುನೆಲೆಗೆ...

ನವದೆಹಲಿ, ಪಠಾಣ್ ಕೋಟ್: ಉಗ್ರಗಾಮಿಗಳ ದಾಳಿ ನಡೆದು ಏಳು ಮಂದಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದ ಪಠಾಣ್ ಕೋಟ್ ವಾಯುನೆಲೆಗೆ ಆಂತರಿಕ ಗುಪ್ತಚರ ಸೇವೆಯ(ಐಎಸ್ಐ) ಅಧಿಕಾರಿಗಳನ್ನೊಳಗೊಂಡ ತಂಡ ಪಾಕಿಸ್ತಾನದ ಅಮೃತಸರದಿಂದ ಬುಲ್ಲೆಟ್ ಸುರಕ್ಷಿತ ಕಾರಿನಲ್ಲಿ ಹೊರಟಿದೆ.

ಈ ಭೇಟಿಯನ್ನು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಖಂಡಿಸಿದ್ದು, ಪಾಕ್ ಅಧಿಕಾರಿಗಳ ಭೇಟಿಗೆ ತಡೆಯೊಡ್ಡುವುದಾಗಿ ಆಮ್ ಆದ್ಮಿ ಪಕ್ಷದ ಸಚಿವರು ಬೆದರಿಕೆಯೊಡ್ಡಿದ್ದಾರೆ.

ಕಳೆದ ಜನವರಿ 2ರಂದು ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರಗಾಮಿಗಳು ಮತ್ತು ಭದ್ರತಾ ಪಡೆ ಗುಂಡಿನ ಚಕಮಕಿಯಲ್ಲಿ ನಿರತರಾಗಿದ್ದ ಪ್ರದೇಶದಲ್ಲಿ ಪಾಕಿಸ್ತಾನ ತಂಡ ತಪಾಸಣೆ ನಡೆಸಲಿದೆ. ವಾಯುನೆಲೆಯ ಸೂಕ್ಷ್ಮ ಪ್ರದೇಶಗಳಿಗೆ ತಂಡ ಹೋಗದಂತೆ ತಡೆಹಿಡಿಯುವುದಾಗಿ ನಿನ್ನೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದರು. ಉಗ್ರರು ಯಾವ ದಾರಿಯಾಗಿ ಬಂದಿರಬಹುದು ಎಂದು ಪಾಕಿಸ್ತಾನ ತಂಡ ತಪಾಸಣೆ ನಡೆಸಲಿದೆ. ಉಗ್ರಗಾಮಿಗಳ ಶವಗಳನ್ನು ಇಟ್ಟಿರುವ ಸ್ಥಳಕ್ಕೂ ಕೂಡ ಪಾಕಿಸ್ತಾನ ಅಧಿಕಾರಿಗಳ ತಂಡ ಹೋಗುವ ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT