ಹಳೇ ನೋಟು 
ದೇಶ

ಬ್ಯಾಂಕ್ ಗೆ 5.44 ಲಕ್ಷ ಕೋಟಿ ಮೊತ್ತದ ಹಳೇ ನೋಟುಗಳ ಜಮಾ!

500, 1000 ರೂ ನೋಟುಗಳ ಚಲಾವಣೆ ರದ್ದುಗೊಂಡಿರುವ ದಿನದಿಂದ ನ.18 ರವರೆಗೆ ವಿವಿಧ ಬ್ಯಾಂಕ್ ಗಳಲ್ಲಿ ಒಟ್ಟು 5.44 ಲಕ್ಷ ಕೋಟಿ ರೂ ಮೊತ್ತದ ನಿಷೇಧಿತ ನೋಟುಗಳು ಜಮಾ ಆಗಿದೆ.

ಮುಂಬೈ: 500, 1000 ರೂ ನೋಟುಗಳ ಚಲಾವಣೆ ರದ್ದುಗೊಂಡಿರುವ ದಿನದಿಂದ ನ.18 ರವರೆಗೆ ವಿವಿಧ ಬ್ಯಾಂಕ್ ಗಳಲ್ಲಿ ಒಟ್ಟು 5.44  ಲಕ್ಷ ಕೋಟಿ ರೂ ಮೊತ್ತದ ನಿಷೇಧಿತ ನೋಟುಗಳು ಜಮಾ ಆಗಿದೆ.
ನ.10ರಿಂದ 18 ರ ವರೆಗೆ ಬ್ಯಾಂಕ್ ಗಳು ಕೌಂಟರ್ ಹಾಗೂ ಎಟಿಎಂ ಮೂಲಕ 1,03,316 ಕೋಟಿ ರೂಪಾಯಿಯಷ್ಟು (Rs 1.03 ಟ್ರಿಲಿಯನ್) ಹಣವನ್ನು ವಿತರಣೆ ಮಾಡಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿಕೆ ನೀಡಿದೆ. ರದ್ದುಗೊಂಡಿರುವ ನೋಟುಗಳನ್ನು ಪಡೆದು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಡಲು ಹಾಗೂ ಹಳೆಯ ನೋಟುಗಳನ್ನು ಜಮಾ ಮಾಡಲು ಆರ್ ಬಿಐ ಕೌಂಟರ್ ಗಳಲ್ಲಿ, ವಾಣಿಜ್ಯ ಬ್ಯಾಂಕ್ ಗಳಲ್ಲಿ, ಪ್ರಾದೇಶಿಕ ಗ್ರಾಮೀಣ ಹಾಗೂ ನಗರ ಸಹಕಾರಿ ಬ್ಯಾಂಕ್ ಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ನ.10 ರಿಂದ ಪ್ರಾರಂಭವಾಗಿ ನ.18 ರ ವರೆಗೆ ನಡೆದಿರುವ ಹಳೆಯ ನೋಟುಗಳ ಬದಲಾವಣೆ/ ಜಮಾವಣೆ ಪ್ರಕ್ರಿಯೆಯಲ್ಲಿ ಒಟ್ಟು 5,44,571( ವಿನಿಮಯ ಮಾಡಿಕೊಳ್ಳಲು ನೀಡಿದ ಹಳೆಯ ನೋಟುಗಳ ಮೊತ್ತ: 33,006 ಕೋಟಿ, ಖಾತೆಯಲ್ಲಿ ಜಮಾವಣೆಯಾದ ಹಳೆಯ ನೋಟುಗಳ ಮೊತ್ತ:  5,11,565 ಕೋಟಿ) ಲಕ್ಷ ಕೋಟಿ ಮೊತ್ತದ ಹಳೆಯ ನೋಟುಗಳು ಜಮಾವಣೆಯಾಗಿವೆ. ಓವರ್ ಡ್ರಾಫ್ಟ್ ಹಾಗೂ ಕ್ಯಾಷ್ ಕ್ರೆಡಿಟ್ ಖಾತೆಗಳಿಂದ ವಾರಕ್ಕೆ 50 ಸಾವಿರ ರೂ ಗಳನ್ನು ವಿತ್ ಡ್ರಾ ಮಾಡಬಹುದಾಗಿದೆ ಎಂದು ಆರ್ ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.  
ಈ ಅವಧಿಯಲ್ಲಿ ಬ್ಯಾಂಕ್ ಗಳ ಕೌಂಟರ್ ಅಥವಾ ಎಟಿಎಂ ಗಳಿಂದ ಜನರು ಒಟ್ಟು  1,03,316 ಕೋಟಿ ರೂಪಾಯಿಯಷ್ಟು ಹಣವನ್ನು ವಿತ್ ಡ್ರಾ ಮಾಡಿಕೊಂಡಿದ್ದಾರೆ ಎಂದು ಆರ್ ಬಿಐ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 500, 1000 ರೂ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಲು ಕೈಗೊಳ್ಳಲಾಗಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ನ.8 ರಂದು ಪ್ರಧಾನಿ ನರೇಂದ್ರ ಮೋದಿ ಘೋಶಿಸಿದ್ದರು. ನ.10 ರಿಂದ ಬ್ಯಾಂಕ್ ಗಳಲ್ಲಿ ನೋಟುಗಳ ವಿನಿಮಯ ಜಮಾವಣೆ ಪ್ರಕ್ರಿಯೆ ಪ್ರಾರಂಭವಾಗಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT