ಸಾಂದರ್ಭಿಕ ಚಿತ್ರ 
ದೇಶ

ಕರ್ನಾಟಕ-ತಮಿಳು ನಾಡು ಮಧ್ಯೆ ವಾಹನ ಸಂಚಾರ ಮತ್ತೆ ಆರಂಭ

ಕಾವೇರಿ ಜಲ ವಿವಾದಕ್ಕೆ ಸಂಬಂಧಪಟ್ಟಂತೆ ಭಾರೀ ಪ್ರತಿಭಟನೆಯಿಂದಾಗಿ ಸ್ಥಗಿತಗೊಂಡಿದ್ದ ಕರ್ನಾಟಕ-ತಮಿಳು ನಾಡು ಮಧ್ಯೆ ವಾಹನ ಸಂಚಾರ ಬುಧವಾರ ಮತ್ತೆ...

ಹೊಸೂರು: ಕಾವೇರಿ ಜಲ ವಿವಾದಕ್ಕೆ ಸಂಬಂಧಪಟ್ಟಂತೆ ಭಾರೀ ಪ್ರತಿಭಟನೆಯಿಂದಾಗಿ ಸ್ಥಗಿತಗೊಂಡಿದ್ದ ಕರ್ನಾಟಕ-ತಮಿಳು ನಾಡು ಮಧ್ಯೆ ವಾಹನ ಸಂಚಾರ ಬುಧವಾರ ಮತ್ತೆ ಪುನರಾರಂಭಗೊಂಡಿದ್ದು, ಹೊಸೂರು-ಬೆಂಗಳೂರು ರಾಷ್ಟ್ರೀಯ ಹೆದ್ಜಾರಿ 7ರಲ್ಲಿ ವಾಹನ ಓಡಾಟ ಶುರುವಾಗಿದೆ. 29 ದಿನಗಳ ಕಾಲ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿತ್ತು.
ಕರ್ನಾಟಕ-ತಮಿಳು ನಾಡು ಗಡಿಯ ಹೊಸೂರು ರಸ್ತೆ ಬಳಿ ಇಂದು ಬೆಳಗ್ಗೆ 10.30ಕ್ಕೆ ಸಂಚಾರ ಆರಂಭಗೊಂಡಿತು. ಈ ಮಾರ್ಗವಾಗಿ ನೂರಾರು ಲಾರಿಗಳು, ಟ್ರಕ್ಕುಗಳು, ಬಸ್ಸುಗಳು, ಖಾಸಗಿ ವಾಹನಗಳು ಓಡಾಡುತ್ತವೆ. ಇದರಿಂದಾಗಿ ಪ್ರಯಾಣಿಕರಿಗೆ ನಿರಾಳತೆ ಸಿಕ್ಕಿದೆ.
ತಮಿಳು ನಾಡು ಕಡೆಯ ಗಡಿಯ ಝುಝವಾಡಿ ಎಂಬಲ್ಲಿ ಕೃಷ್ಣಗಿರಿ ಪೊಲೀಸ್ ಸೂಪರಿಂಟೆಂಡೆಂಟ್ ಮಗೇಶ್ ಕುಮಾರ್ ನೇತೃತ್ವದ 50 ಪೊಲೀಸ್ ಸಿಬ್ಬಂದಿಗಳು ನಿಯೋಜನೆಗೊಂಡಿದ್ದರು. ಕರ್ನಾಟಕ ದಾಖಲಾತಿ ಹೊಂದಿರುವ ವಾಹನಗಳು ನಿಧಾನವಾಗಿ ಸಂಚಾರ ಆರಂಭಿಸಿವೆ. ಕರ್ನಾಟಕ ಗಡಿ ಭಾಗದ ಕೊನೆಯ ಅತ್ತಿಬೆಲೆಯಲ್ಲಿ  ಕೂಡ ಅಷ್ಟೇ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದರು.
ಕಾವೇರಿ ಜಲ ವಿವಾದ ಇನ್ನೂ ಬಗೆಹರಿಯದಿರುವ ಸಂದರ್ಭದಲ್ಲಿ ಎರಡೂ ರಾಜ್ಯಗಳ ಅಧಿಕಾರಿಗಳು ಸಣ್ಣ ಪ್ರಾಯೋಗಿಕ ಕ್ರಮ ಕೈಗೊಳ್ಳುತ್ತಿದ್ದಾರೆ. ಕರ್ನಾಟಕ ದಾಖಲಾತಿ ಹೊಂದಿರುವ ವಾಹನಗಳಿಗೆ ರಕ್ಷಣೆ ಒದಗಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ವಾಹನಗಳ ಸಂಚಾರ, ದಟ್ಟಣೆ ಗಮನಿಸುತ್ತಿದ್ದೇವೆ ಎಂದು ಎಸ್ ಪಿ ಮಗೇಶ್ ಕುಮಾರ್ ತಿಳಿಸಿದ್ದಾರೆ. 
ಕಾವೇರಿ ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿ ಬಸ್ಸು, ಟ್ರಕ್ಕುಗಳು, ಖಾಸಗಿ ವಾಹನಗಳ ಮೇಲೆ ಕಲ್ಲು ತೂರಾಟ, ಬೆಂಕಿ ಹಚ್ಚಿದ್ದರಿಂದ ಹೊಸೂರು-ತಮಿಳು ನಾಡು ಮಧ್ಯೆ ಸೆಪ್ಟೆಂಬರ್ 6ರಿಂದ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಇಷ್ಟು ದಿನ ಬಸ್ಸುಗಳು ಆಯಾ ಗಡಿಯಲ್ಲಿ ನಿಲ್ಲುತ್ತಿದ್ದವು. ಅಲ್ಲಿಂದ ಪ್ರಯಾಣಿಕರು ನಡೆದುಕೊಂಡು ಹೋಗಿ ಇನ್ನೊಂದು ಬಸ್ಸು ಹಿಡಿಯಬೇಕಾಗುತ್ತಿತ್ತು. ಟ್ರಕ್ ಗಳಿಗೆ ಕೂಡ ಬೇರೆ ದಾರಿಯಿಲ್ಲದೆ ಗಡಿಯಲ್ಲೇ ನಿಲ್ಲಬೇಕಾಗುತ್ತಿತ್ತು.ಖಾಸಗಿ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ರೈಲುಗಳ ಮೊರೆ ಹೋಗುತ್ತಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT