ದೇಶ

ಜಯಲಲಿತಾ ಬಳಿಯಿದ್ದ ಹೆಚ್ಚುವರಿ ಖಾತೆಗಳ ಹೊಣೆ ಪನ್ನೀರ್ ಸೆಲ್ವಂ ಹೆಗಲಿಗೆ

Shilpa D

ಚೆನ್ನೈ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ತಮಿಳುನಾಡು ಸಿಎಂ ಜಯಲಲಿತಾ ಅವರ ಆದೇಶದ ಮೇರೆಗೆ ತಮ್ಮ ಬಳಿಯಿದ್ದ ಹೆಚ್ಚುವರಿ ಖಾತೆಗಳನ್ನು ಹಣಕಾಸು ಸಚಿವ ಒ.ಪನ್ನೀರ್ ಸೆಲ್ವಂ ಅವರಿಗೆ ವಹಿಸಲಾಗಿದೆ.

ರಾಜ್ಯಪಾಲ ವಿದ್ಯಾಸಾಗರ್ ರಾವ್ ಪನ್ನೀರ್ ಸೆಲ್ವಂ ಗೆ ಖಾತೆಗಳನ್ನು ವಹಿಸಿಕೊಟ್ಟಿದ್ದು, ಜಯಲಲಿತಾ ಅವರೇ ಮುಖ್ಯಮಂತ್ರಿಯಾಗಿ ಮುಂದುವರರಿಯಲಿದ್ದಾರೆ.

ಸಿಎಂ ಜಯಲಲಿತಾ ಅವರ ಸಲಹೆ ಮೇರೆಗೆ ಈ ಏರ್ಪಾಡು ನಡೆದಿದ್ದು, ಪನ್ನೀರ್ ಸೆಲ್ವಂ ಅವರೇ ಸಚಿವ ಸಂಪುಟ ಸಭೆ ನಡೆಸಲಿದ್ದಾರೆ. ಜಯಲಲಿತಾ ಬಳಿ ಗೃಹ ಇಲಾಖೆ ಮತ್ತು ಸಾಮಾನ್ಯ ಆಡಳಿತ ಖಾತೆಗಳಿದ್ದವು.

ತಮಿಳುನಾಡು ಸಿಎಂ ಜಯಲಲಿತಾ ಅನಾರೋಗ್ಯ ಕಾರಣ ಸೆಪ್ಟಂಬರ್ 22 ರಿಂದ ಅಪೊಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

SCROLL FOR NEXT