ಸೀಸರ್ ಶ್ವಾನ (ಸಂಗ್ರಹ ಚಿತ್ರ) 
ದೇಶ

ಮುಂಬೈ ಉಗ್ರ ದಾಳಿ "ಹೀರೋ ಸೀಸರ್" ವಿಧಿವಶ

26/11 ಮುಂಬೈ ದಾಳಿ ವೇಳೆ ಉಗ್ರದಾಳಿಯನ್ನು ಪತ್ತೆ ಮಾಡಿ ನೂರಾರು ನಾಗರಿಕರ ಸಾವನ್ನು ತಪ್ಪಿಸಿದ್ದ ಮುಂಬೈ ಪೊಲೀಸ್ ಶ್ವಾನ ಸೀಸರ್ ಗುರುವಾರ ರಾತ್ರಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

ನವದೆಹಲಿ: 26/11 ಮುಂಬೈ ದಾಳಿ ವೇಳೆ ಉಗ್ರದಾಳಿಯನ್ನು ಪತ್ತೆ ಮಾಡಿ ನೂರಾರು ನಾಗರಿಕರ ಸಾವನ್ನು ತಪ್ಪಿಸಿದ್ದ ಮುಂಬೈ ಪೊಲೀಸ್ ಶ್ವಾನ ಸೀಸರ್ ಗುರುವಾರ ರಾತ್ರಿ ಸಾವನ್ನಪ್ಪಿದೆ  ಎಂದು ತಿಳಿದುಬಂದಿದೆ.

ಹನ್ನೊಂದು ವರ್ಷ ವಯಸ್ಸಿನ ಸೀಸರ್ ಇತ್ತೀಚೆಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿತ್ತು. ಕಳೆದ ಕೆಲ ದಿನಗಳಿಂದ ಹಿಂದೆ ನಾಯಿ ಆರೋಗ್ಯ ತೀರಾ ಹದಗೆಟ್ಟು ನಡೆಯಲೂ  ಆಗದ ಸ್ಥಿತಿಯಲ್ಲಿತ್ತು ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ. ಸೀಸರ್ ಆರೋಗ್ಯದಲ್ಲಿ ಕಳೆದೊಂದು ವಾರದಲ್ಲಿ ತಕ್ಕ ಮಟ್ಟಿನ ಚೇತರಿಕೆ ಕಂಡಿತ್ತು. ಇದರಿಂದ ಸೀಸರ್ ಮೊದಲಿನಂತೆ ಓಡಾಡಬಹುದು  ಎಂಬ ಆಶಾಭಾವ ಹೊಂದಿದ್ದೇವು. ಆದರೆ ಅದು ಹುಸಿಯಾಗಿದ್ದು, ನಿನ್ನೆ ತಡರಾತ್ರಿಯಲ್ಲಿ ಸೀಸರ್ ಸಾವನ್ನಪ್ಪಿದೆ.

ಮುಂಬೈ ಉಗ್ರ ದಾಳಿ ವೇಳೆ ತಾಜ್ ಹೊಟೆಲ್ ನಲ್ಲಿ ಅಡಗಿದ್ದ ಉಗ್ರರ ಜಾಡು ಹಿಡಿಯುವಲ್ಲಿ ಸೀಸರ್ ಪ್ರಮುಖ ಪಾತ್ರ ವಹಿಸಿತ್ತು. ಸೀಸರ್ ನೊಂದಿಗೆ ಇಲಾಖೆಯ ಇತರೆ ಶ್ವಾನಗಳಾದ ಮ್ಯಾಕ್ಸ್,  ಸುಲ್ತಾನ್ ಮತ್ತು ಟೈಗರ್ ಎಂಬ ನಾಯಿಗಳು ಸಹಾಯ ಮಾಡಿದ್ದವು. ಈ ನಾಲ್ಕು ಪೊಲೀಸ್ ನಾಯಿಗಳಲ್ಲಿ ಮ್ಯಾಕ್ಸ್ ಮತ್ತು ಸುಲ್ತಾನ್ ನಾಯಿಗಳು ಈ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ  ಸಾವನ್ನಪ್ಪಿದ್ದವು. ಇತ್ತೀಚೆಗಷ್ಟೇ ಟೈಗರ್ ಎಂಬ ನಾಯಿ ಕೂಡ ಸಾವನ್ನಪ್ಪುವುದರೊಂದಿಗೆ ಸೀಸರ್ ಒಂಟಿಯಾಗಿತ್ತು. ಫಿಜಾ ಶಾ ಎಂಬ ವ್ಯಕ್ತಿ ಈ ನಾಯಿಯನ್ನು ಪೋಷಿಸುತ್ತಿದ್ದರು.

ಇದೀಗ ಸೀಸರ್ ಕೂಡ ತನ್ನ ಸ್ನೇಹಿತರಂತೆ ಇಹಲೋಕ ತ್ಯಜಿಸಿದೆ. ಸೀಸರ್ ಸಾವಿಗೆ ಮುಂಬೈ ಪೊಲೀಸ್ ಇಲಾಖೆ ಕಂಬನಿ ಮಿಡಿದಿದ್ದು, ಇಲಾಖೆಯ ವತಿಯಿಂದ ಶೋಕಾಚರಣೆಗೆ ಆದೇಶ  ನೀಡಲಾಗಿದೆ. ಅಂತೆಯೇ ಸಕಲ ಸರ್ಕಾರಿ ಗೌರವಗಳೊಂದಿಗೆ ಸೀಸರ್ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT