ಒತ್ತಡಕ್ಕೆ ಸಿಲುಕಿದ ಪಾಕ್: ಪತ್ರಕರ್ತ ಸಿರಿಲ್ ಅಲ್ಮೈದಾಗೆ ವಿಧಿಸಿದ್ದ "ದಿಗ್ಭಂಧನ" ಹಿಂಪಡೆಯುವ ಸೂಚನೆ 
ದೇಶ

ಒತ್ತಡಕ್ಕೆ ಸಿಲುಕಿದ ಪಾಕ್: ಪತ್ರಕರ್ತ ಸಿರಿಲ್ ಅಲ್ಮೈದಾಗೆ ವಿಧಿಸಿದ್ದ "ದಿಗ್ಭಂಧನ" ಹಿಂಪಡೆಯುವ ಸೂಚನೆ

ಸೇನೆ-ಪಾಕ್ ಸರ್ಕಾರದ ನಡುವಿನ ಬಿರುಕಿನ ಕುರಿತು ವರದಿ ಮಾಡಿದ್ದ ಪತ್ರಕರ್ತನಿಗೆ "ದಿಗ್ಭಂಧನ" ವಿಧಿಸಿದ್ದಕ್ಕೆ ತೀವ್ರ ಟೀಕೆ ಎದುರಿಸಿದ್ದ ಪಾಕಿಸ್ತಾನ ಈಗ ಎಚ್ಚೆತ್ತುಕೊಂಡಂತಿದೆ.

ನವದೆಹಲಿ: ಸೇನೆ-ಪಾಕ್ ಸರ್ಕಾರದ ನಡುವಿನ ಬಿರುಕಿನ ಕುರಿತು ವರದಿ ಮಾಡಿದ್ದ ಪತ್ರಕರ್ತನಿಗೆ "ದಿಗ್ಭಂಧನ" ವಿಧಿಸಿದ್ದಕ್ಕೆ ತೀವ್ರ ಟೀಕೆ ಎದುರಿಸಿದ್ದ ಪಾಕಿಸ್ತಾನ ಈಗ ಎಚ್ಚೆತ್ತುಕೊಂಡಂತಿದ್ದು, ಪತ್ರಕರ್ತನ ವಿರುದ್ಧ ಜರುಗಿಸಲಾಗಿದ್ದ ಕ್ರಮವನ್ನು ಹಿಂಪಡೆಯುವ ಸೂಚನೆ ನೀಡಿದೆ.

ಪಾಕಿಸ್ತಾನದ ಆಂತರಿಕ ಸಚಿವ ಚೌದರಿ ನಿಸಾರ್ ಈ ಬಗ್ಗೆ ಹೇಳಿಕೆ ನೀಡಿದ್ದು, ದಿಗ್ಬಂಧನ ವಿಧಿಸುವ ಪಟ್ಟಿಯಲ್ಲಿ ಡಾನ್ ಪತ್ರಿಕೆಯ ಪತ್ರಕರ್ತ, ಅಂಕಣಕಾರ ಸಿರಿಲ್ ಅಲ್ಮೈದಾ ಹೆಸರು ಹೇಗೆ ಬಂತೆಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

3-4 ದಿನಗಳಲ್ಲಿ ತನಿಖೆ ಪೂರ್ಣಗೊಳ್ಳಲಿದ್ದು ತನಿಖೆ ಪೂರ್ಣಗೊಂಡ ನಂತರ ದಿಗ್ಬಂಧನದ ಆದೇಶವನ್ನು ವಾಪಸ್ ಪಡೆಯಲಾಗುವುದೆಂದು ಸಚಿವರು ಹೇಳಿದ್ದಾರೆ. ಪತ್ರಕರ್ತನಿಗೆ ದಿಗ್ಬಂಧನ ವಿಧಿಸಲಾಗಿರುವ ವರದಿಯನ್ನು ಭಾರತದ ಮಾಧ್ಯಮಗಳು ಪಾಕಿಸ್ತಾನ ತನ್ನ ನೆಲದವರಲ್ಲದ ಭಯೋತ್ಪಾದಕರ ವಿಷಯದಲ್ಲಿ ಹೇಗೆ ನಡೆದುಕೊಳ್ಳುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಬಳಸಿಕೊಂಡಿತ್ತು ಎಂದು ಸಚಿವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT