ಸಾಗರ್ ಥಕ್ಕರ್ 
ದೇಶ

ನಕಲಿ ಕಾಲ್ ಸೆಂಟರ್ ಹಗರಣದ ಮಾಸ್ಟರ್ ಮೈಂಡ್ ಥಕ್ಕರ್ ನ ಕಳ್ಳ ಗುರು ಪೊಲೀಸ್ ಬಲೆಗೆ

ಮುಂಬಯಿ ಕಾಲ್ ಸೆಂಟರ್ ಹಗರಣ ಸಂಬಂಧ ಪ್ರಕರಣದ ಮಾಸ್ಟರ್ ಮೈಂಡ್ ನ ಗುರು ಪೊಲೀಸರ ಬಲೆಗೆ ಬಿದ್ದಿದ್ದಾನೆ...

ಥಾಣೆ: ಮುಂಬಯಿ ಕಾಲ್ ಸೆಂಟರ್ ಹಗರಣ ಸಂಬಂಧ ಪ್ರಕರಣದ ಮಾಸ್ಟರ್ ಮೈಂಡ್ ನ ಗುರು ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮುಂಬಯಿ ಮೂಲದ ಉದ್ಯಮಿ ಸಾಗರ್ ಥಕ್ಕರ್ ಅಲಿಯಾಸ್ ಶಾಗ್ಗಿಯ  ಗುರು ಎನಿಸಿಕೊಂಡಿರುವ 33 ವರ್ಷದ ಜಗದೀಶ್ ಕಣ್ಣಾನಿಯನ್ನು ಕಳೆದ ರಾತ್ರಿ ಮುಂಬಯಿಯ ಸಬರ್ನ್ ಬೊರಿವಿಲಿಯಲ್ಲಿ ಬಂಧಿಸಿದ್ದಾರೆ.

ಕಣ್ಣಾನಿ ಬಳಿ ಥಕ್ಕರ್ ಕಳೆದ ಹಲವು ವರ್ಷಗಳಿಂದ ಮುಂಬಯಿ ಮತ್ತು ಅಹಮದಾಬಾದ್ ನಲ್ಲಿ ಕೆಲಸ ಮಾಡಿದ್ದನು, ತನ್ನ ಗುರುವಿನ ಬಳಿಯಿಂದ ಕೆಲವು ವ್ಯಾಪಾರದ ಟ್ರಿಕ್ಸ್ ಗಳನ್ನು ಪಡೆದಿದ್ದನು.

ಕಣ್ಣಾನಿ ಮೊದಲಿಗೆ ವಿದೇಶಿ ಮೂಲಗಳ ಬಿಪಿಓ ಗಳಲ್ಲಿ ಕೆಲಸ ಮಾಡುತ್ತಿದ್ದ. ಹೇಗೆ ವ್ಯಾಪಾರ ಬುದ್ದಿ ಉಪಯೋಗಿಸಿ ಬೇಗ ಹಣ ಸಂಗ್ರಹ ಮಾಡಬಹುದು ಎಂಬುದನ್ನು ಕಲಿತುಕೊಂಡ ಆತ, ನಕಲಿ ಕಾಲ್ ಸೆಂಟರ್ ಗಳಿಂದ ಅಮೆರಿಕ ಜನರಿಂದ ಹಣ ಸುಲಿಗೆ ಆರಂಭಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.

ದೇಶಾದ್ಯಂತ ಇರುವ ಹಲವು ನಕಲಿ ಕಾಲ್ ಸೆಂಟರ್ ಗಳ ಹಿಂದಿನ ರೂವಾರಿ ಈತನೇ ಆಗಿದ್ದಾನೆ. ಈ ತಿಂಗಳ ಮೊದಲ ವಾರದಲ್ಲಿ ಮಿರಾ ರೋಡ್ ನಲ್ಲಿರುವ ಒಂದು ನಕಲಿ ಕಾಲ್ ಸೆಂಟರ್ ಅನ್ನು ಪೊಲೀಸರು ಸೀಜ್ ಮಾಡಿದ್ದರು. ಈತನೇ ಥಕ್ಕರ್ ಗೆ ನಕಲಿ ಕಾಲ್ ಸೆಂಟರ್ ವ್ಯವಹಾರ ಮಾಡಲು ಸಹಾಯ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದರು.ಈಗ ಈತನ್ನು ಬಂಧಿಸಿದ್ದೇವೆ. ಈತನನ್ನು ವಿಚಾರಣೆಗೊಳಪಡಿಸಿ ಥಕ್ಕರ್ ಮತ್ತು ಉಳಿದ ಆತನ ಸಹಚರರು ಎಲ್ಲಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

ಭಾರತದ ಟೆಲಿಕಾಲರ್ ಗಳ ಮೂಲಕ ತಾವು ಅಮೆರಿಕದ ತೆರಿಗೆ ಅಧಿಕಾರಿಗಳು ಎಂದು ಹೇಳಿಕೊಂಡು ಅಮೆರಿಕದ ಪ್ರಜೆಗಳಿಗೆ ಮಿಲಿಯಾಂತರ ಡಾಲರ್‌ ಪಂಗನಾಮ ಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್: ದೆಹಲಿ ಪೊಲೀಸರಿಂದ FIR ದಾಖಲು, ಸಾಮಾಜಿಕ ಜಾಲತಾಣ Xಗೆ ನೋಟಿಸ್ ಜಾರಿ..!

Video: 'POK ಪ್ರತಿಭಟನಾಕಾರರೂ ಭಾರತದಷ್ಟೇ ಶತ್ರುಗಳು'; 32 ಮಂದಿ ಹತ್ಯೆ ಸಮರ್ಥಿಸಿಕೊಂಡ ಪಾಕ್ ರಕ್ಷಣಾ ಸಚಿವ Khawaja Asif

ಐಫೋನ್‌ಗಳ ಅಬ್ಬರ: ಭಾರತದ ಸ್ಮಾರ್ಟ್‌ಫೋನ್ ರಫ್ತು 10 ಬಿಲಿಯನ್ ಗೇರಿಕೆ, 'ಮೇಕ್ ಇನ್ ಇಂಡಿಯಾ'ಗೆ ಜಾಗತಿಕ ಮನ್ನಣೆ

ಇರಾಕ್‌ನಲ್ಲಿ ಅಮೆರಿಕ-ಸೌದಿ ಜಂಟಿ ವಾಯುದಾಳಿ: ಇರಾನ್ ಬೆಂಬಲಿತ ಉಗ್ರ ನೆಲೆಗಳು ಧ್ವಂಸ, ಮಧ್ಯಪ್ರಾಚ್ಯ ಮತ್ತೆ ಉದ್ವಿಗ್ನ..!

ರಾಜ್ಯ ಸಚಿವ ಸಂಪುಟ ವಿಸ್ತರಣೆ: ಇಂದೇ ರಾಹುಲ್ ಗಾಂಧಿ ಒಪ್ಪಿಗೆ ಸಾಧ್ಯತೆ, ನಾಳೆ ಸಂಜೆ ನೂತನ ಸಚಿವರ ಪಟ್ಟಾಭಿಷೇಕ..?