ಸಾಂದರ್ಭಿಕ ಚಿತ್ರ 
ದೇಶ

ಉರಿ ಅಟ್ಯಾಕ್: ಭಾರತ ಗಡಿಯ ವಿದ್ಯುತ್ ಬೇಲಿ ದಾಟಲು ಉಗ್ರರು ಮಾಡಿದ ಉಪಾಯವೇನು ಗೊತ್ತೆ?

ಸೆಪ್ಬಂಬರ್ 18 ರಂದು ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ 19 ಯೋಧರನ್ನು ಕೊಂದ ನಾಲ್ವರು ಪಾಕಿಸ್ತಾನಿ ಉಗ್ರರು ಗಡಿ ನಿಯಂತ್ರಣ ರೇಖೆ ಯಲ್ಲಿನ ...

ಶ್ರೀನಗರ: ಸೆಪ್ಬಂಬರ್ 18 ರಂದು ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ 19 ಯೋಧರನ್ನು ಕೊಂದ ನಾಲ್ವರು ಪಾಕಿಸ್ತಾನಿ ಉಗ್ರರು ಗಡಿ ನಿಯಂತ್ರಣ ರೇಖೆ ಯಲ್ಲಿನ ವಿದ್ಯುತ್ ಬೇಲಿ ದಾಟಲು ಏಣಿ ಬಳಸಿ, ದೇಶಕ್ಕೆ ನುಸುಳಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ಉಗ್ರರು ಯಾವ ದಾರಿಯ ಮೂಲಕ ದೇಶದೊಳಕ್ಕೆ ನುಸುಳಿದ್ದಾರೆ ಎಂಬ ಬಗ್ಗೆ ಸೇನೆ ತನಿಖೆ ಆರಂಭಿಸಿದೆ. ಸಲಾಮಾಬಾದ್ ನಾಲೆಯ ಸಮೀಪ ಉಗ್ರರು ನುಸುಳಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ನಾಲ್ವರು ಭಯೋತ್ಪಾದಕರಲ್ಲಿ ಓರ್ವ ಉಗ್ರ ಸಲಾಮಾಬಾದ್‌‌ ಎಂಬ ಗಡಿ ಪ್ರದೇಶದಲ್ಲಿದ್ದ ಸಣ್ಣ ಜಾಗದಿಂದ ಭಾರತದ ಗಡಿ ಪ್ರದೇಶದೊಳಗೆ ನುಗ್ಗಿದ್ದಾನೆ. ನಂತರ ಪಾಕ್ ಆಕ್ರಮಿತ ಕಾಶ್ಮೀರದ ಕಡೆಯಿಂದ ಮೂವರು ಉಗ್ರರು ಏಣಿಯ ಸಹಾಯದಿಂದ ಗಡಿ ದಾಟಿ ಭಾರತದೊಳಗೆ ನುಸುಳಿದ್ದಾರೆ. ಇದಕ್ಕಾಗಿ ಅವರು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ.

ಅವರು ಗಡಿ ದಾಡುವುದಕ್ಕೂ ಮೊದಲು ಉರಿ ಸೇನಾ ನೆಲೆಯ ಕುರಿತು ಬಹಳಷ್ಟು ಮಾಹಿತಿ ಪಡೆದುಕೊಂಡಿದ್ದರು. ಅದರ ಪ್ರಕಾರ ಅವರು ಸೇನಾ ನೆಲೆ ಮೇಲೆ ದಾಳಿ ನಡೆಸಿದ್ದರು ಎಂದು ಮಾಹಿತಿ ತಿಳಿದು ಬಂದಿದೆ. ಏಣಿ ಬಳಸಿ ಒಳ ಬಂದಿದ್ದಾರೆ ಎಂಬ ಸುಳಿವು ಸಿಗಬಾರದು ಎನ್ನುವ ಕಾರಣದಿಂದ ಏಣಿಯನ್ನು ಜೊತೆಗೆ ಕೊಂಡೊಯ್ದಿದ್ದಾರೆ.

ಘಟನೆ ಬಗ್ಗೆ ಸೇನೆಯು ಆಂತರಿಕ ತನಿಖೆಯನ್ನು ಆರಂಭಿಸಿದೆ. ಉರಿ ಶಿಬಿರದ ಬ್ರಿಗೇಡ್ ಕಮಾಂಡರ್ ಸೋಮಾ ಶೇಖರ್  ಅವರನ್ನು ವರ್ಗಾವಣೆ ಮಾಡಲಾಗಿದೆ.

ಉಗ್ಗರು ಏಣಿಯ ಮೂಲಕ ಗಡಿ ನುಸುಳಿರುವುದು ಇದೇ ಮೊದಲಲ್ಲ. ಈ ವರ್ಷದ ಆರಕಂಭದಲ್ಲಿ ಉತ್ತರ ಕಾಶ್ಮೀರದ ಮುಚಿಲ್ ವಲಯದಲ್ಲಿ ಉಗ್ರರು ಏಣಿಯ ಮೂಲಕ ಒಳ ನುಸುಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

SCROLL FOR NEXT