ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ 
ದೇಶ

ಸೆಕ್ಸ್ ಸಿಡಿ ವಿವಾದ: ರಾಜಕೀಯ ಅಂಧತ್ವದಲ್ಲಿರುವ ಆಪ್ ಅಧಿಕಾರದ ದಾಹದಲ್ಲಿದೆ- ಕಾಂಗ್ರೆಸ್

ಸೆಕ್ಸ್ ಟೇಪ್ ಹಗರಣದಿಂದ ಸಾಕಷ್ಟು ವಿವಾದಕ್ಕೀಡಾಗಿರುವ ಆಮ್ ಆದ್ಮಿ ಪಕ್ಷವು ರಾಜಕೀಯ ಅಂಧತ್ವದಲ್ಲಿದ್ದು, ಅಧಿಕಾರದ ದಾಹದಲ್ಲಿದೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ...

ನವದೆಹಲಿ: ಸೆಕ್ಸ್ ಟೇಪ್ ಹಗರಣದಿಂದ ಸಾಕಷ್ಟು ವಿವಾದಕ್ಕೀಡಾಗಿರುವ ಆಮ್ ಆದ್ಮಿ ಪಕ್ಷವು ರಾಜಕೀಯ ಅಂಧತ್ವದಲ್ಲಿದ್ದು, ಅಧಿಕಾರದ ದಾಹದಲ್ಲಿದೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರು, ಆಮ್ ಆದ್ಮಿ ಪಕ್ಷ ತಾನು ಎಳೆದ ಬಲೆಗೆ ತಾನೇ ಸಿಲುಕಿಕೊಂಡಿದೆ. ಕೇಜ್ರಿವಾಲ್ ಅವರು ನೈತಿಕತೆಯನ್ನು ಮರೆತು ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ರಾಜಕೀಯವಾಗಿ ಅಂಧತ್ವದಲ್ಲಿರುವ ವ್ಯಕ್ತಿಗಳು ಅಧಿಕಾರದ ದಾಹದಲ್ಲಿರುತ್ತಾರೆ. ಇಂತಹ ವ್ಯಕ್ತಿಗಳು ಅಧಿಕಾರಕ್ಕೆ ಬಂದಾಗ ಈ ರೀತಿಯ ಘಟನೆಗಳು ನಡೆಯುವುದು ಸಾಮಾನ್ಯವಾಗುತ್ತದೆ ಎಂದು ಹೇಳಿದ್ದಾರೆ.

ಸೆಕ್ಸ್ ಟೇಪ್ ಹಗರಣ ಸಂಬಂಧಿಸಿದಂತೆ ಮಾಜಿ ಸಚಿವ ಸಂದೀಪ್ ಕುಮಾರ್ ಅವರನ್ನು ಸಮರ್ಥಿಸಿಕೊಂಡಿದ್ದ ಆಪ್ ವಕ್ತಾರ ಅಶುತೋಷ್, ಸೆಕ್ಸ್ ಜೀವನದ ಒಂದು ಭಾಗ ವಾಗಿದೆ. ಪರಸ್ಪರ ಸಮ್ಮತಿಯಿಂದ ನಡೆದಿರುವ ಘಟನೆ ಇದಾಗಿದೆ. ಭಾರತೀಯ ಇತಿಹಾಸದಲ್ಲಿ ನಮ್ಮ ನಾಯಕರು, ಹೀರೋಗಳು ಸಾಮಾಜಿಕ ಚೌಕಟ್ಟನ್ನು ಮೀರಿ ಅವರಿಗೆ ಇಷ್ಟವಿದ್ದವರೊಂದಿಗೆ ಇದ್ದ ಉದಾಹರಣೆಗಳು ಸಾಕಷ್ಟಿವೆ.

ನೆಹರು ಹಾಗು ಎಡ್ವಿನಾ ಮೌಂಟ್ ಬ್ಯಾಟನ್ ಅವರ ಸಂಬಂಧದ ಬಗ್ಗೆ ಇಡೀ ವಿಶ್ವಕ್ಕೇ ಗೊತ್ತಿತ್ತು. ಅವರಿಬ್ಬರ ನಡುವಿನ ಪ್ರೀತಿ ನೆಹರು ಕೊನೆಯುಸಿರೆಳೆಯುವವರೆಗೂ ಇತ್ತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿವಾಹವಾಗದೆ ಇದ್ದರು ತಾವು ಬ್ರಹ್ಮಚಾರಿಯಲ್ಲ ಎಂದು ಸಂಸತ್ ನಲ್ಲಿಯೇ ಹೇಳಿದ್ದರು. ಅವರು ತಮ್ಮ ಸ್ನೇಹಿತೆಯೊಂದಿಗೆ ಜೀವಿಸಿದ್ದರು ಸಮಾಜ ಅದನ್ನು ಆಕ್ಷೇಪಿಸಲಿಲ್ಲ. ಆದ್ದರಿಂದ ಸೆಕ್ಸ್ ಜೀವನದ ಭಾಗವಾಗಿದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

SCROLL FOR NEXT