ದೇಶ

ಬಿಜೆಪಿ ಕಾರ್ಯಕರ್ತೆಯರಿಂದ ದೆಹಲಿ ಸಿಎಂ ಕೇಜ್ರಿವಾಲ್‍ಗೆ ಮುತ್ತಿಗೆ

Lingaraj Badiger

ನವದೆಹಲಿ: ಪಂಜಾಬ್‍ಗೆ ಹೊರಟಿದ್ದ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರಿಗೆ ಗುರುವಾರ ದೆಹಲಿಯ ರೇಲ್ವೆ ನಿಲ್ದಾಣದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರು ಮುತ್ತಿಗೆ ಹಾಕಿದ್ದ ಘಟನೆ ಗುರುವಾರ ನಡೆಯಿತು.

ಆಮ್ ಆದ್ಮಿ ಪಕ್ಷದ ಉಚ್ಚಾಟಿತ ಶಾಸಕ ಸಂದೀಪ್ ಕುಮಾರ್ ಅವರ ಬಗ್ಗೆ ಕೇಜ್ರಿವಾಲ್ ಅವರ ಮೌನವನ್ನು ಪ್ರಶ್ನಿಸಿ ದೆಹಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕಮಲಜೀತ್ ಸೆಹ್ರಾವತ್ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತೆಯರು ದೆಹಲಿ ಸಿಎಂ ವಿರುದ್ಧ ಇಂದು ಪ್ರತಿಭಟಿಸಿದರು. ಆದರೆ ಪೊಲೀಸರ ಭದ್ರತಾ ಲೋಪದಿಂದಾಗಿ ಮಹಿಳಾ ಕಾರ್ಯಕರ್ತರು ಕೇಜ್ರಿವಾಲ್ ಅವರನ್ನು ಸುತ್ತುವರಿದು, ಮುತ್ತಿಗೆ ಹಾಕಿದರು.

ಬಿಜೆಪಿ ಕಾರ್ಯಕರ್ತೆಯರು ಕೇಜ್ರಿವಾಲ್ ಅವರನ್ನು ಮುತ್ತಿಗೆ ಹಾಕಿ ಬೈಯುತ್ತಿರುವಾಗ ದೆಹಲಿ ಪೊಲೀಸರು ಅಸಹಾಯಕರಾಗಿ ನಿಂತಿದ್ದರು,  ದೆಹಲಿ ಪೊಲೀಸರ ಕರ್ತವ್ಯ ಲೋಪದ ಬಗ್ಗೆ ಕಿಡಿ ಕಾರಿದ ಆಪ್ ನಾಯಕ ಸಂಜಯ್ ಸಿಂಗ್  ಇದೇ ಕಾರ್ಯಕರ್ತೆಯರು ಮಾಜಿ ಕೇಂದ್ರ ಸಚಿವ ನಿಹಾಲ್ ಚಂದ್ ಮತ್ತು ಬಾಬು ಲಾಲ್ ಅವರನ್ನು ಯಾಕೆ ಪ್ರಶ್ನಿಸಿಲ್ಲ ಎಂದು ಟ್ವೀಟ್ ಮಾಡಿದ್ದಾರೆ .

SCROLL FOR NEXT