ಚಕ್ರವರ್ತಿ ಅಶೋಕ (ಸಂಗ್ರಹ ಚಿತ್ರ) 
ದೇಶ

ಚಕ್ರವರ್ತಿ ಅಶೋಕ ಜನ್ಮ, ಮರಣ ದಿನಾಂಕ ಕುರಿತು ಆರ್ ಟಿಐ; ಉತ್ತರಕ್ಕಾಗಿ ಪರದಾಡಿದ ನಾಲ್ಕು ಸಚಿವಾಲಯ!

ಅಖಂಡ ಭಾರತ ದೇಶವನ್ನು ಆಳಿದ ಮಹಾನ್ ಚಕ್ರವರ್ತಿ ಅಶೋಕನ ಜನ್ಮ ದಿನ ಹಾಗೂ ಮರಣ ದಿನ ಯಾವುದು? ಎಂಬ ಈ ಮಾಹಿತಿ ಹಕ್ಕು ಪ್ರಶ್ನೆಗೆ ಸರಿಯಾದ ಉತ್ತರ ಹುಡುಕಲು ಕೇಂದ್ರದ ನಾಲ್ಕು ಸಚಿವಾಲಯಗಳು ಪರದಾಡಿದ ಘಟನೆ ನಡೆದಿದೆ.

ನವದೆಹಲಿ: ಅಖಂಡ ಭಾರತ ದೇಶವನ್ನು ಆಳಿದ ಮಹಾನ್ ಚಕ್ರವರ್ತಿ ಅಶೋಕನ ಜನ್ಮ ದಿನ ಹಾಗೂ ಮರಣ ದಿನ ಯಾವುದು? ಎಂಬ ಈ ಮಾಹಿತಿ ಹಕ್ಕು ಪ್ರಶ್ನೆಗೆ ಸರಿಯಾದ ಉತ್ತರ  ಹುಡುಕಲು ಕೇಂದ್ರದ ನಾಲ್ಕು ಸಚಿವಾಲಯಗಳು ಪರದಾಡಿದ ಘಟನೆ ನಡೆದಿದೆ.

ಅರುಣ್ ಕುಮಾರ್ ಎಂಬ ಆರ್ ಟಿಐ ಅರ್ಜಿದಾರ ಚಕ್ರವರ್ತಿ ಅಶೋಕನ ಜನ್ಮ ದಿನಾಚರಣೆ ಕುರಿತು ಕೇಂದ್ರ ಸರ್ಕಾರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಹಿನ್ನಲೆಯಲ್ಲಿ ರಾಜ  ಅಶೋಕನ ಜನ್ಮ ದಿನ ಹಾಗೂ ಮರಣ ದಿನದ ಸರಿಯಾದ ದಿನಾಂಕ ನೀಡುವಂತೆ ಪ್ರಧಾನಿ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿಯನ್ನು ಪ್ರಧಾನಿ ಕಾರ್ಯಾಲಯದ ಮಾಹಿತಿ ಹಕ್ಕು  ಅಧಿಕಾರಿ ಸ್ವೀಕರಿಸಿದ್ದು, ಬಳಿಕ ಅದನ್ನು ಪರಿಶೀಲಿಸಿ ಕೇಂದ್ರ ಸಂಸ್ಕೃತಿ ಇಲಾಖೆಯನ್ನು ಅರ್ಜಿಯನ್ನು ವರ್ಗಾಯಿಸಲಾಗಿದೆ.

ಅರ್ಜಿ ಸ್ವೀಕರಿಸಿದ ಸಂಸ್ಕೃತಿ ಇಲಾಖೆ ದಾಖಲೆಗಳನ್ನು ಪರಿಶೀಲಿಸಿದಾಗ ರಕ್ಷಣೆಸ ವಿತ್ತ ಹಾಗೂ ಗೃಹಇಲಾಖೆಗಳ ವತಿಯಿಂದ ಎರಡು ವಿಭಿನ್ನ ದಿನಾಂಕಗಳಲ್ಲಿ ಆಶೋಕ ಕುರಿತ ಕಾರ್ಯಕ್ರಮ  ಆಯೋಜನೆಯಾಗಿರುವ ವಿಚಾರ ತಿಳಿದಿದೆ. ಹೀಗಾಗಿ ಎರಡೂ ಇಲಾಖೆಗಳಿಗೆ ಅರ್ಜಿಯನ್ನು ಸಂಸ್ಕೃತಿ ಇಲಾಖೆ ವರ್ಗಾಯಿಸಿದೆ. ಆದರೆ ಈ ಎರಡೂ ಇಲಾಖೆಯ ದಾಖಲೆಗಳಲ್ಲೂ ಅಶೋಕನ  ಜನ್ಮ ಹಾಗೂ ಮರಣ ಹೊಂದಿದ ದಿನದ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ.

ಅಂತಿಮವಾಗಿ ಅರ್ಜಿದಾರ ಅರುಣ್ ಕುಮಾರ್ ಗೆ ಮಾಹಿತಿ ನೀಡಿರುವ ಕೇಂದ್ರ ಮಾಹಿತಿ ಆಯೋಗ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಅಶೋಕ ಕ್ರಿ.ಪೂ 304 ರಲ್ಲಿ ಜನಿಸಿ ಕ್ರಿ ಪೂ 232ರಲ್ಲಿ  ಸಾವನ್ನಪ್ಪಿದ್ದ ಎಂದು ಮಾಹಿತಿ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT