ನರೇಂದ್ರ ಮೋದಿ, ರಾಹುಲ್ ಗಾಂಧಿ 
ದೇಶ

ಮೋದಿ ಬರೀ ಸೆಲ್ಫೀ ಮತ್ತು ಭರವಸೆ ಕೊಡುವ ಯಂತ್ರ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರು ಬರೀ ಸೆಲ್ಫೀ ಮತ್ತು ಭರವಸೆ ನೀಡುವ ಯಂತ್ರ. ಅಚ್ಛೇ ದಿನ ಭರವಸೆ ಬಡವರಿಗಲ್ಲ, ಮೋದಿ ಅವರ ಕೈಗಾರಿಕೋದ್ಯಮಿ ಸ್ನೇಹಿತರಿಗೆ ಎಂದು ಕಾಂಗ್ರೆಸ್...

ಒರಯ್(ಉತ್ತರಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರು ಬರೀ ಸೆಲ್ಫೀ ಮತ್ತು ಭರವಸೆ ನೀಡುವ ಯಂತ್ರ. ಅಚ್ಛೇ ದಿನ ಭರವಸೆ ಬಡವರಿಗಲ್ಲ, ಮೋದಿ ಅವರ ಕೈಗಾರಿಕೋದ್ಯಮಿ ಸ್ನೇಹಿತರಿಗೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

ಉತ್ತರಪ್ರದೇಶದಲ್ಲಿ ಚುನಾವಣಾ ರ್ಯಾಲಿ ಡಿಯೋರಿಯದಿಂದ ದಿಲ್ಲಿ ಕಿಸಾನ್ ಯಾತ್ರೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ಹಲವಾರು ಭರವಸೆಗಳನ್ನು ನೀಡಿದ್ದರು. ಈ ಪೈಕಿ ಸ್ವಿಸ್ ಬ್ಯಾಂಕಿನಲ್ಲಿರುವ ಹಣವನ್ನು ಭಾರತಕ್ಕೆ ವಾಪಸ್ ತಂದು ಪ್ರತಿಯೊಬ್ಬ ಭಾರತೀಯನ ಖಾತೆಗೆ 15 ಲಕ್ಷ ಜಮಾ ಮಾಡುವುದು. ರೈತರಿಗೆ ನ್ಯಾಯಬೆಲೆ, 2 ಕೋಟಿ ಉದ್ಯೋಗ ಸೃಷ್ಠಿ ಹೀಗೆ ಹಲವಾರು ಭರವಸೆಗಳನ್ನು ಚುನಾವಣೆ ಪೂರ್ವ ಹಾಗೂ ಪ್ರಧಾನಿಯಾದ ಬಳಿಕ ನೀಡಿದ್ದು ಅವುಗಳನ್ನು ಪೂರೈಸಲು ಆಗಿಲ್ಲ ಎಂದು ಆರೋಪಿಸಿದ್ದಾರೆ.

ಮೋದಿ ಅವರು ಕೋಮುಗಲಭೆಗಳಿಲ್ಲ ರಾಜ್ಯಗಳಲ್ಲಿ ಕೋಮುವಾದವನ್ನು ಹರಡುತ್ತಿದ್ದಾರೆ. ಹಿಂದು, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ರಿರುವ ಶಾಂತಿಯುತ ದೇಶದಲ್ಲಿ ಕೋಮುವಾದವನ್ನು ಸೃಷ್ಠಿಸುವುದು ಮೋದಿ ಅವರ ಗುರಿಯಾಗಿದೆ ಎಂದು ರಾಹುಲ್ ಆರೋಪಿಸಿದ್ದಾರೆ.

ಈ ಯಾತ್ರೆ ಮಾಡುತ್ತಿರುವ ಸಂದರ್ಭದಲ್ಲಿ ಮಂದಿರ-ಮಸೀದಿಗಳು ಎದುರು ಬದುರಿದ್ದು, ಇಲ್ಲಿ ಜನರು ಒಟ್ಟಾಗಿ ಬಾಳುತ್ತಿದ್ದಾರೆ. ಆದರೆ ಮೋದಿ ಬಂದ ಬಳಿಕ ಹಿಂದೂಗಳು ಮುಸ್ಲಿಂರೊಟ್ಟಿಗೆ ಜಗಳ ಮಾಡುವಂತಾಗಿದೆ ಎಂದರು. ಇನ್ನು ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ 10 ವರ್ಷಗಳ ಕಾಲ ಅಧಿಕಾರ ನಡೆಸಿತ್ತು. ಈ ವೇಳೆ ಜಾಟ್ ಹಾಗೂ ಜಾಟ್ ಅಲ್ಲದ ಸಮುದಾಯದವರಲ್ಲಿ ಯಾವುದೇ ಗಲಭೆಗಳು ಇರಲಿಲ್ಲ. ಆದರೆ ಇದೀಗ ಹರಿಯಾಣ ಗಲಭೆ ಪೀಡಿತವಾಗಿದೆ ಎಂದರು.

ಭಾರತಕ್ಕೆ ಅಚ್ಛೇ ದಿನ್ ಬಂದಿದೆ ಆದರೆ ಅದು ಪ್ರಧಾನಿ ನರೇಂದ್ರ ಮೋದಿ ಅವರು 12 ರಿಂದ 15 ಕೈಗಾರಿಕೋಧ್ಯಮ ಸ್ನೇಹಿತರಿಗೆ ಮಾತ್ರ. ಆದರೆ ಬಡವರು ಮತ್ತು ದುರ್ಬಲರು ಗಲಭೆಗಳಿಂದ ನಲುಗುತ್ತಿದ್ದಾರೆ ಎಂದು ರಾಹುಲ್ ಮೋದಿ ವಿರುದ್ಧ ಗುಡುಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

SCROLL FOR NEXT