ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಪತ್ನಿ ಸಲ್ಮಾ ಅನ್ಸಾರಿ 
ದೇಶ

ತ್ರಿವಳಿ ತಲಾಖ್ ವಿವಾದ: ಮೌಲ್ವಿಗಳ ವಿರುದ್ದ ಸಲ್ಮಾ ಅನ್ಸಾರಿ ವಾಗ್ದಾಳಿ

ಕುರಾನ್ ನಲ್ಲಿ ತ್ರಿವಳಿ ತಲಾಖ್ ಎಂಬ ಯಾವುದೇ ನಿಯಮಗಳಿಲ್ಲ. ಮೌಲಾನಾಗಳು, ಮೌಲ್ವಿಗಳ ಮಾತುಗಳನ್ನು ಕೇಳುವ ಬದಲು ಮುಸ್ಲಿಂ ಮಹಿಳೆಯರು ಸ್ವತಃ ಕುರಾನ್ ನ್ನು ಓದಿ ತಿಳಿದುಕೊಳ್ಳಬೇಕೆಂದು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿಯವರ ಪತ್ನಿ ಸಲ್ಮಾ ಅನ್ಸಾರಿಯವರು...

ಅಲೀಗಢ: ಕುರಾನ್ ನಲ್ಲಿ ತ್ರಿವಳಿ ತಲಾಖ್ ಎಂಬ ಯಾವುದೇ ನಿಯಮಗಳಿಲ್ಲ. ಮೌಲಾನಾಗಳು, ಮೌಲ್ವಿಗಳ ಮಾತುಗಳನ್ನು ಕೇಳುವ ಬದಲು ಮುಸ್ಲಿಂ ಮಹಿಳೆಯರು ಸ್ವತಃ ಕುರಾನ್ ನ್ನು ಓದಿ ತಿಳಿದುಕೊಳ್ಳಬೇಕೆಂದು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿಯವರ ಪತ್ನಿ ಸಲ್ಮಾ ಅನ್ಸಾರಿಯವರು ಭಾನುವಾರ ಹೇಳಿದ್ದಾರೆ. 
ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ತ್ರಿವಳಿ ತಲಾಖ್ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಮೌಲಾನಾಗಳು ಮೌಲ್ವಿಗಳು ಹೇಳಿದ್ದನ್ನೆಲ್ಲಾ ಕೇಳಬಾರದು. ಕುರಾತನ್ ನಲ್ಲಿ ತ್ರಿವಳಿ ತಲಾಖ್ ಎಂಬ ಯಾವುದೇ ನಿಯಮವಿಲ್ಲ. 
ರಾಷ್ಟ್ರಾದ್ಯಂತ ತ್ರಿವಳಿ ತಲಾಖ್, ನಿಖಾ ಹಲಾಲ್ ಮತ್ತು ಬಹುಪತ್ನಿತ್ವ ಸಂಪ್ರದಾಯದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಯುತ್ತಿದ್ದು, ಮೌಲಾನಾ, ಮೌಲ್ವಿಗಳು ಹೇಳುವ ಮಾತುಗಳನ್ನು ಕೇಳುವ ಬದಲು ಎಲ್ಲಾ ಮುಸ್ಲಿಂ ಮಹಿಳೆಯರೂ ಸ್ವತಃ ಕುರಾನ್ ಓದಿ ತಿಳಿದುಕೊಳ್ಳಬೇಕು. ಆಗ ಸಮಸ್ಯೆಗೆ ಪರಿಹಾರಗಳು ಸಿಗುತ್ತದೆ. ಭಾಷಾಂತರಗೊಂಡ ಕುರಾನ್ ನ್ನು ಓದಬಾರದು. ಅರೇಬಿಕ್ ನಲ್ಲಿರುವ ಕುರಾನ್ ನ್ನು ಓದಬೇಕು. ಆಗ ಮಾತ್ರ ಕುರಾನ್ ನಲ್ಲಿ ಅಂತಹ ನಿಯಮಗಳಾವುದೂ ಇಲ್ಲ ಎಂಬುದು ಅರ್ಥವಾಗುತ್ತದೆ ಎಂದು ತಿಳಿಸಿದ್ದಾರೆ. 
ತ್ರಿವಳಿ ತಲಾಖ್ ಎಂಬುದು ವಿಚಾರವೇ ಅಲ್ಲ. ಯಾರೋ ತಲಾಖ್...ತಲಾಖ್...ತಲಾಖ್... ಎಂದು ಹೇಳಿದಾಕ್ಷಣ ವಿಚ್ಛೇದನವಾಗುವುದಿಲ್ಲ. ಕುರಾನ್ ಓದಿದ್ದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕುರಾನ್ ನಲ್ಲಿ ಅಂತಹ ಯಾವುದೇ ನಿಯಮಗಳಿಲ್ಲ. ಕೆಲವರು ಅಂತಹ ನಿಯಮಗಳನ್ನು ಹುಟ್ಟುಹಾಕುತ್ತಿದ್ದಾರೆ. ಕುರಾನ್ ಓದದ ಮಹಿಳೆಯರು ಇಂತಹ ನಿಯಮಗಳನ್ನು ಕಣ್ಣುಮುಚ್ಚಿಕೊಂಡು ನಂಬುತ್ತಾರೆ. ಹೀಗಾಗಿ ಮಹಿಳೆಯರು ಕುರಾನ್ ಓದುವ ಧೈರ್ಯವನ್ನು ಮಾಡಬೇಕು. ನಂತರ ಅದರಲ್ಲಿರುವ ಸತ್ಯಾಸತ್ಯತೆಗಳನ್ನು ತಿಳಿದುಕೊಂಡು ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT