ದೇಶ

ಗೋಹತ್ಯೆ ಕುರಿತ ಭಾಗವತ್ ಹೇಳಿಕೆ ಆರ್'ಎಸ್ಎಸ್, ಬಿಜೆಪಿಯ ಕಪಟತನವನ್ನು ತೋರಿಸುತ್ತದೆ: ಓವೈಸಿ

Manjula VN
ನವದೆಹಲಿ: ಗೋಹತ್ಯೆ ಕುರಿತ ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಇಕೆ ಬಿಜೆಪಿ ಹಾಗೂ ಆರ್'ಎಸ್ಎಸ್ ಸಂಘಟನೆಯ ಕಪತನವನ್ನು ಬಹಿರಂಗಪಡಿಸುತ್ತದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಸೋಮವಾರ ಹೇಳಿದ್ದಾರೆ. 
ಈಶಾನ್ಯ ರಾಜ್ಯಗಳಲ್ಲಿ ಗೋ ಹತ್ಯೆ ಕಾಯ್ದೆಯನ್ನು ಜಾರಿಗೆ ತರುವುದಿಲ್ಲ ಎಂದು ಬಿಜೆಪಿ ಹೇಳಿತ್ತು. ಇದೀಗ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ನೋಡಿದರೆ, ಬಿಜೆಪಿ ಹಾಗೂ ಆರ್'ಎಸ್ಎಸ್ ಕಪತನವನ್ನು ಬಹಿರಂಗಪಡಿಸುತ್ತದೆ. ಅವರನ್ನು ಎಂದಿಗು ನಂಬಬಾರದು ಎಂದು ಹೇಳಿದ್ದಾರೆ. 
ಇದೇ ವೇಳೆ ರಾಜಸ್ತಾನದ ಅಲ್ವಾರ್ ನಲ್ಲಿ ಗೋರಕ್ಷಕರು ನಡೆಸಿದ ಹಲ್ಲೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಗೋರಕ್ಷಕರು ನಡೆಸಿದ ಹಲ್ಲೆ ನಿಜಕ್ಕೂ ಭಯಾನಕವಾಗಿದೆ. ಎಫ್ಐಆರ್ ದಾಖಲಾಗಿರುವ ಬಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಆರ್'ಎಸ್ಎಸ್ ಜೊತೆಗೆ ನಂಟು ಹೊಂದಿದ್ದಾರೆ. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಇದನ್ನು ನೋಡಿದರೆ ಅವರು ಎಷ್ಟರ ಮಟ್ಟಿಗೆ ನಕಲಿ ಹಾಗೂ ನಿಷ್ಪಕ್ಷಪಾತವಾಗಿದ್ದಾರೆಂಬುದನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ. 
SCROLL FOR NEXT