ಲಖನೌ: ಮಾಜಿ ಕೇಂದ್ರ ಸಚಿವ ಹಾಗೂ ಎರಡು ಬಾರಿ ಲಖನೌ ಮೇಯರ್ ಆಗಿದ್ದ ಅಖಿಲೇಶ್ ದಾಸ್ ಗುಪ್ತ ಅವರು ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
56 ವರ್ಷದ ಅಖಿಲೇಶ್ ದಾಸ್ ಗುಪ್ತಾ ಅವರಿಗೆ ಇಂದು ಬೆಳಗ್ಗೆ ತೀವ್ರ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಲರಿ ಹೃದಯಶಾಸ್ತ್ರ ವಿಭಾಗಕ್ಕೆ ದಾಖಲಿಸಲಾಗಿದೆ. ಆದರೆ ದಾರಿ ಮಧ್ಯಯೇ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ದಾಸ್ ಅವರು ಪತ್ನಿ ಅಲ್ಕಾ, ಪುತ್ರ ಸಾಗರ್ ಹಾಗೂ ಪುತ್ರಿ ಸೋನಾ ಅವರನ್ನು ಅಗಲಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಹಾಗೂ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಬಾಬು ಬನರ್ಸಿ ದಾಸ್ ಅವರ ಪತ್ರರಾಗಿದ್ದ ಅಖಿಲೇಶ್ ದಾಸ್ ಗುಪ್ತ ಅವರು ಕಾಂಗ್ರೆಸ್ ನಿಂದ ರಾಜ್ಯಸಭೆಗೆ ಆಯ್ಕೆಯಾಗುವ ಮುನ್ನ ಮೇ 1993ರಿಂದ ನವೆಂಬರ್ 1996ರವರೆಗೆ ಲಖನೌ ಮೇಯರ್ ಆಗಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos