ಕೆಟಿ ರಾಮರಾವ್ 
ದೇಶ

ಐಸ್ ಕ್ರೀಂ, ಜ್ಯೂಸ್ ಮಾರಿ 7.5 ಲಕ್ಷ ಸಂಪಾದಿಸಿದ ತೆಲಂಗಾಣ ಸಿಎಂ ಪುತ್ರ

ದಿನವಿಡೀ ಐಸ್ ಕ್ರೀಂ, ಹಣ್ಣಿನ ಜ್ಯೂಸ್ ಮಾರಿದರೂ 400 ರಿಂದ 500 ರುಪಾಯಿ ಸಂಪಾದಿಸುವುದು ಕಷ್ಟ. ಅಂತಹದರಲ್ಲಿ ತೆಲಂಗಾಣ ಮುಖ್ಯಮಂತ್ರಿ...

ಹೈದರಾಬಾದ್: ದಿನವಿಡೀ ಐಸ್ ಕ್ರೀಂ, ಹಣ್ಣಿನ ಜ್ಯೂಸ್ ಮಾರಿದರೂ 400 ರಿಂದ 500 ರುಪಾಯಿ ಸಂಪಾದಿಸುವುದು ಕಷ್ಟ. ಅಂತಹದರಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರ, ಸಂಪುಟ ಸಚಿವ ಕೆ.ಟಿ ರಾಮರಾವ್ ಅವರು ಒಂದೆರಡು ಗಂಟೆಗಳಲ್ಲೇ ಬರೋಬ್ಬರಿ 7.30 ಲಕ್ಷ ರೂಪಾಯಿ ಸಂಪಾದಿಸಿದ್ದಾರೆ. 
ಇಷ್ಟು ಮೊತ್ತ ಸಂಪಾದಿಸಲು ಬಿಸಿಲ ಝಳ ಕಾರಣವಲ್ಲ. ಅದರ ಬದಲಿಗೆ ಸಿಎಂ ಪುತ್ರ ಎಂಬ ಕಾರಣಕ್ಕೆ ಟಿಆರ್ಎಸ್ ಕಾರ್ಯಕರ್ತರು ಹೆಚ್ಚಿನ ಮೊತ್ತ ನೀಡಿ ಐಸ್ ಕ್ರೀಂ ಮತ್ತು ಜ್ಯೂಸ್ ತೆಗದುಕೊಂಡರು. ತೆಲಂಗಾಣ ರಾಷ್ಟ್ರ ಸಮಿತಿಯ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲು ನಿಧಿ ಸಂಗ್ರಹಕ್ಕಾಗಿ ರಾಮರಾಮ್ ಅವರು ಒಂದು ದಿನದ ಮಟ್ಟಿಗೆ ಕೂಲಿಯಾಗಿ ಕೆಲಸ ಮಾಡಿದರು. 
ಖುತುಬುಲ್ಲಾಪುರ್ ನಲ್ಲಿ ಐಸ್ ಕ್ರೀಂ ಮತ್ತು ಹಣ್ಣಿನ ಜ್ಯೂಸ್ ಗಳನ್ನು ಮಾರಾಟ ಮಾಡಿದರು. ರಾಮರಾಮ್ ಕೂಲಿಯಾಗಿದ್ದೇ ತಡ ಗ್ರಾಹಕರು ಅಂಗಡಿಗೆ ಮುತ್ತಿಗೆ ಹಾಕಿ ಭರ್ಜರಿ ಮೊತ್ತ ನೀಡಿ ಐಸ್ ಕ್ರೀಂ ಕೊಂಡು ತಿಂದರು. ಟಿಆರ್ಎಸ್ ಸಂಸದ ಮಲ್ಲ ರೆಡ್ಡಿ ಅವರು 5 ಲಕ್ಷ ರು. ನೀಡಿ ಐಸ್ ಕ್ರೀಂ ಕೊಂಡರೆ, ಪಕ್ಷದ ಮತ್ತೊಬ್ಬ ನಾಯಕ ಶ್ರೀನಿವಾಸ್ ರೆಡ್ಡಿ 1 ಲಕ್ಷ ರುಪಾಯಿ ನೀಡಿ ಖರೀದಿಸಿದರು. ಇನ್ನು ಹಣ್ಣಿನ ಜ್ಯೂಸ್ ಅಂಗಡಿಯಲ್ಲಿ ಪಕ್ಷದ ಕಾರ್ಯಕರ್ತರೇ ಬರೋಬ್ಬರಿ 1.30 ಲಕ್ಷ ರುಪಾಯಿ ವ್ಯಾಪಾರ ಮಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT