ಪತಕರ್ತ ಅರ್ನಬ್ ಗೋಸ್ವಾಮಿ 
ದೇಶ

'ನೇಷನ್ ವಾಂಟ್ಸ್ ಟು ನೋ'... ಪದ ಬಳಸದಂತೆ ಅರ್ನಬ್'ಗೆ ಲೀಗಲ್ ನೋಟಿಸ್!

'ರಿಪಬ್ಲಿಕ್ ಟಿವಿ' ಇಂಗ್ಲಿಷ್ ಸುದ್ದಿವಾಹಿನಿ ಸ್ಥಾಪಿಸಹೊರಟಿರುವ ಪತಕರ್ತ ಅರ್ನಬ್ ಗೋಸ್ವಾಮಿಯವರು 'ನೇಷನ್ ವಾಂಟ್ಸ್ ಟು ನೋ' ( ದೇಶ ಕೇಳಬಯಸುತ್ತದೆ) ವಾಕ್ಯವನ್ನು ಬಳಸದಂತೆ ಮಾಧ್ಯಮ ಸಂಸ್ಥೆಯೊಂದು ಲೀಗಲ್ ನೋಟಿಸ್...

ಮುಂಬೈ: 'ರಿಪಬ್ಲಿಕ್ ಟಿವಿ' ಇಂಗ್ಲಿಷ್ ಸುದ್ದಿವಾಹಿನಿ ಸ್ಥಾಪಿಸಹೊರಟಿರುವ ಪತಕರ್ತ ಅರ್ನಬ್ ಗೋಸ್ವಾಮಿಯವರು 'ನೇಷನ್ ವಾಂಟ್ಸ್ ಟು ನೋ' ( ದೇಶ ಕೇಳಬಯಸುತ್ತದೆ) ವಾಕ್ಯವನ್ನು ಬಳಸದಂತೆ ಮಾಧ್ಯಮ ಸಂಸ್ಥೆಯೊಂದು ಲೀಗಲ್ ನೋಟಿಸ್ ಜಾರಿ ಮಾಡಿದೆ. 
'ಟೈಮ್ಸ್ ನೌ' ಸುದ್ದಿವಾಹಿನಿಯ ಮುಖ್ಯ ಸಂಪಾದಕರಾಗಿದ್ದಾಗ ಚರ್ಚೆ ಸಂದರ್ಭಗಳಲ್ಲಿ ಅರ್ನಬ್ ಗೋಸ್ವಾಮಿಯವರು 'ನೇಷನ್ ವಾಂಟ್ಸ್ ಟು ನೋ' ವಾಕ್ಯವನ್ನು ಬಳಕೆ ಮಾಡುತ್ತಿದ್ದರು. ಈ ವಾಕ್ಯ ಸಾಕಷ್ಟು ಜನಪ್ರಿಯತೆಯನ್ನುಗಳಿಸಿತ್ತು. 
ಆದರೆ, ಈಗ ಕೃತಿಸ್ವಾಮ್ಯ ಕಾನೂನಿನಡಿ ಈ ವಾಕ್ಯ ಬಳಕೆ ಮಾಡದಂತೆ ಮಾಧ್ಯಮ ಸಂಸ್ಥೆಯೊಂದು  ಲೀಗಲ್ ನೋಟಿಸ್ ಜಾರಿ ಮಾಡಿದೆ ಎಂದು ಖುದ್ದು ಗೋಸ್ವಾಮಿಯವರೇ ಹೇಳಿಕೊಂಡಿದ್ದಾರೆ. 
ಈ ಬಗ್ಗೆ ಯೂಟ್ಯೂಬ್'ನಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಅವರು, ನೇಷನ್ ವಾಂಟ್ಸ್ ಟು ನೋ ವಾಕ್ಯ ಬಳಕೆ ಮಾಡದಂತೆ ನನಗೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಕೆಲ ಮಾಧ್ಯಮಗಳು ಕೆಲ ತಿಂಗಳಿನಿಂದಲೂ ನನ್ನ ಬಗ್ಗೆ ನಡೆದುಕೊಳ್ಳುತ್ತಿರುವ ವರ್ತನೆಗಳನ್ನು ನೋಡುತ್ತಲೇ ಇದ್ದೇನೆ. ಆ ವರ್ತನೆಗಳಿಗೆ ಉಂದು ನಾನು ಪ್ರತಿಕ್ರಿಯೆ ನೀಡುತ್ತಿದ್ದೇನೆ. ಜೈಲಿಗೆ ಹಾಕುವ ಬೆದರಿಕೆಗಳು ನನ್ನನ್ನು ಹಿಮ್ಮೆಟಿಸಲು ಆಗುವುದಿಲ್ಲ. 
ನಿಮ್ಮಲ್ಲಿರುವ ದುಡ್ಡಿನ ಬ್ಯಾಗ್ ಮತ್ತು ವಕೀಲರನ್ನು ಕರೆ ತನ್ನಿ. ನೇಷನ್ ವಾಂಟ್ಸ್ ಟು ನೋ ಪದ ಬಳಕೆ ಮಾಡಿದ್ದಕ್ಕೆ ನನ್ನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ. ನಿಮ್ಮಿಂದ ಏನು ಮಾಡಲು ಸಾಧ್ಯವೋ ಅದೆನ್ನಲ್ಲಾ ಮಾಡಿ. ನಿಮ್ಮಲ್ಲಿರುವ ಎಲ್ಲಾ ಹಣವನ್ನು ಖರ್ಚು ಮಾಡಿ. ನನ್ನ ಬಂಧಿಸಿ. ನನಗೆ ಲೀಗಲ್ ನೋಟಿಸ್ ಬಂದಿದ್ದರೂ ಈ ವಾಕ್ಯವನ್ನು ಬಳಸುವುದರಿಂದ ತಡೆಯಲು ಯಾರಿಂದಲೂ ಆಗದು. ನಾನು ಸ್ಟುಡಿಯೋದಲ್ಲಿಯೇ ಇರುತ್ತೇನೆ. ಬೇಕಿದ್ದರೆ ನನ್ನನ್ನು ಬಂಧಿಸಿ ಎಂದು ಸವಾಲೆಸಿದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT