ದೇಶ

ಅಣೆಕಟ್ಟೆ ನೀರು ಆವಿಯಾಗುವುದನ್ನು ತಡೆಗಟ್ಟಲು ತಮಿಳುನಾಡು ಸಚಿವರ ಸಖತ್ ಐಡಿಯಾ!

ತಮಿಳುನಾಡು ಸರ್ಕಾರದ ಸಹಕಾರ ಸಚಿವ ಸೆಲ್ಲೂರ್ ಕೆ ರಾಜು ಥರ್ಮಾಕೋಲ್‌ ನ್ನು ಬಳಕೆ ಮಾಡಿ ನೀರು ಆವಿಯಾಗುವ ಸಮಸ್ಯೆಯನ್ನು ತಡೆಯುವ ವಿಧಾನವನ್ನು ಕಂಡುಕೊಂಡಿದ್ದಾರೆ.

ಮಧುರೈ: ನೀರಿಗೆ ಹಾಹಾಕಾರ ಎದುರಾಗುತ್ತಿದ್ದು, ಜೀವ ಜಲದ ರಕ್ಷಣೆಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಆದರೆ ಕೆರೆ ನೀರು ಆವಿಯಾಗುವುದನ್ನು ತಡೆಗಟ್ಟಲು ತಮಿಳುನಾಡಿನ ಈ ಸಚಿವನಿಗೆ ಹೊಳೆದಷ್ಟು ಅದ್ಭುತವಾದ ಐಡಿಯಾ ಬಹುಶಃ ವಿಶ್ವವಿಖ್ಯಾತ ವಿಜ್ಞಾನಿಗಳಿಂದ ಶಾಲೆ ವಿದ್ಯಾರ್ಥಿಗಳವರೆಗೂ ಯಾರಿಗೂ ಹೊಳೆದಿರಲು ಸಾಧ್ಯವಿಲ್ಲ! 
ತಮಿಳುನಾಡು ಸರ್ಕಾರದ ಸಹಕಾರ ಸಚಿವ ಸೆಲ್ಲೂರ್ ಕೆ ರಾಜು ಥರ್ಮಾಕೋಲ್‌ ನ್ನು ಬಳಕೆ ಮಾಡಿ ನೀರು ಆವಿಯಾಗುವ ಸಮಸ್ಯೆಯನ್ನು ತಡೆಯುವ ವಿಧಾನವನ್ನು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲದೇ, ವೈಗೈ ಅಣೆಕಟ್ಟೆಯಲ್ಲಿ ಥರ್ಮಾಕೋಲ್ ನ್ನು ಒಂದಕ್ಕೆ ಒಂದನ್ನು ಅಂಟಿಸಿ ನೀರಿನ ಮೇಲ್ಮೈನಲ್ಲಿರಿಸುವ ಸಚಿವರ ವಿನೂತನ ಐಡಿಯಾ ಪ್ರಾಯೋಗಿಕವಾಗಿ ನಡೆದಿದ್ದನ್ನು ರಾಜ್ಯದ ಪ್ರಮುಖ ಮಾಧ್ಯಮಗಳ ವರದಿಗಾರರೂ ಸಹ ಕಣ್ತುಂಬಿಕೊಂಡಿದ್ದಾರೆ. 
ತಮ್ಮ ಸಂಶೋಧನೆಯನ್ನು ತೋರಿಸಲೆಂದೇ ಸಚಿವರು ವರದಿಗಾರರನ್ನು ಮಧುರೈ ನಿಂದ 67 ಕಿಮೀ ದೂರ ಕರೆದುಕೊಂಡು ಹೋಗಿದ್ದರು. ಎರಡು ಥರ್ಮಾಕೋಲ್ ನ್ನು ಅಂಟಿಸಿ ಅದನ್ನು ನೀರಿನ ಮೇಲಿಟ್ಟ ತಕ್ಷಣವೇ ಗಾಳಿಗೆ ತೂರಿ ಹೋಗುತ್ತಿತ್ತು. ಇನ್ನೂ ಕೆಲವು ಮುರಿದು ಹೋಗುತ್ತಿದ್ದವು. ಕೊನೆಗೆ ಏನೆಂದರೂ ಸಹ ಥರ್ಮಾಕೋಲ್ ಪ್ರಯೋಗ ಯಶಸ್ವಿಯಾಗಲಿಲ್ಲ. 
ಅಚ್ಚರಿಯೆಂದರೆ ತಮಿಳುನಾಡು ಸರ್ಕಾರದ ಸಹಕಾರ ಸಚಿವ ಸೆಲ್ಲೂರ್ ಕೆ ರಾಜು ಅವರೇ ಹೇಳುವ ಪ್ರಕಾರ ನೀರು ಆವಿಯಾಗುವುದನ್ನು ತಡೆಗಟ್ಟುವ ಪ್ರಯೋಗಾತ್ಮಕ ವಿಧಾನಗಳಿಗಾಗಿಯೇ ತಮಿಳುನಾಡು ಸರ್ಕಾರ 10 ಲಕ್ಷ ರೂಪಾಯಿ ಅನುದಾನ ನೀಡಿದೆಯಂತೆ. ಸರ್ಕಾರದ ಅನುದಾನದಲ್ಲಿ ಯೋಜನೆ ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದರಂತೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT