ದಲೈ ಲಾಮ 
ದೇಶ

ಡೋಕ್ಲಾಮ್ ಬಿಕ್ಕಟ್ಟಿನಿಂದ ಭಾರತ-ಚೀನಾ ನಡುವೆ ಯುದ್ಧವಾಗುವುದಿಲ್ಲ: ದಲೈ ಲಾಮ

ಡೊಕ್ಲಾಮ್ ಬಿಕ್ಕಟ್ಟಿನಿಂದ ಭಾರತ-ಚೀನಾ ನಡುವೆ ಯುದ್ಧ ಉಂಟಾಗುವುದಿಲ್ಲ ಎಂದು ಬೌದ್ಧ ಧರ್ಮ ಗುರು ದಲೈ ಲಾಮ ಅಭಿಪ್ರಾಯಪಟ್ಟಿದ್ದಾರೆ. ಚೀನಾ ಯುದ್ಧೋನ್ಮಾದದಲ್ಲಿ ಮಾತನಾಡುತ್ತಿದ್ದೆ.

ನವದೆಹಲಿ: ಡೊಕ್ಲಾಮ್ ಬಿಕ್ಕಟ್ಟಿನಿಂದ ಭಾರತ-ಚೀನಾ ನಡುವೆ ಯುದ್ಧ ಉಂಟಾಗುವುದಿಲ್ಲ ಎಂದು ಬೌದ್ಧ ಧರ್ಮ ಗುರು ದಲೈ ಲಾಮ ಅಭಿಪ್ರಾಯಪಟ್ಟಿದ್ದಾರೆ. ಚೀನಾ ಯುದ್ಧೋನ್ಮಾದದಲ್ಲಿ ಮಾತನಾಡುತ್ತಿದ್ದೆ. ಆದರೆ ಅದು ತಾತ್ಕಾಲಿಕವಷ್ಟೇ ಎಂದು ದಲೈ ಲಾಮ ಹೇಳಿದ್ದಾರೆ. 
ಚೀನಾ-ಭಾರತ ನೆರೆ ರಾಷ್ಟ್ರಗಳಾಗಿರುವುದರಿಂದ ಶಾಂತಿ ಹಾಗೂ ಸಹಬಾಳ್ವೆ ನಡೆಸುವುದು ಅಗತ್ಯವಾಗಿದೆ. ಡೊಕ್ಲಾಮ್ ಬಿಕ್ಕಟ್ಟು ತೀರಾ ಗಂಭೀರ ಸಮಸ್ಯೆ ಎಂದೆನಿಸುತ್ತಿಲ್ಲ, 1962 ರಲ್ಲಿ ಚೀನಾ ಕೊನೆಗೆ ತನ್ನ ಪಡೆಗಳನ್ನು ಹಿಂಪಡೆಯಲು ಒಪ್ಪಿತ್ತು, ಈಗಲೂ ಹಿಂದಿ-ಚೀನಿ ಭಾಯಿ ಭಾಯಿ ಒಂದೇ ಭಾರತ-ಚೀನಾ ನಡುವಿನ ಬಿಕ್ಕಟ್ಟನ್ನು ಹೋಗಲಾಡಿಸಲು ಇರುವ ಮಾರ್ಗ ಎಂದು ದಲೈ ಲಾಮ ಅಭಿಪ್ರಾಯಪಟ್ಟಿದ್ದಾರೆ. 
ಶಾಂತಿ, ಸೌಹಾರ್ದತೆಯನ್ನು ಮುಂದುವರೆಸಲು ಇರುವ ಪರಿಹಾರವೆಂದರೆ ಮಾತುಕತೆಯೊಂದೇ. ಒಬ್ಬರಿಗೆ ಗೆಲುವು ಒಬ್ಬರಿಗೆ ಸೋಲು ಎಂಬುದು ಹಳೆಯ ಚಿಂತನೆ, ನಿಮ್ಮ ನೆರೆಯವರ ವಿನಾಶವೆಂದರೆ ಅದು ನಿಮ್ಮ ನಾಶವೂ ಆಗಿರುತ್ತದೆ ಎಂದು ದಲೈ ಲಾಮ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

Encounter: ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲೀಯರ ಹತ್ಯೆ!

SCROLL FOR NEXT