ರೂ.5 ಲಕ್ಷ ಪಡೆದು 65 ವರ್ಷದ ಮುದುಕನನ್ನು ವಿವಾಹವಾದ 16 ಹುಡುಗಿ! 
ದೇಶ

ರೂ.5 ಲಕ್ಷ ಪಡೆದು 65 ವರ್ಷದ ಮುದುಕನನ್ನು ವಿವಾಹವಾದ 16 ವರ್ಷದ ಹುಡುಗಿ!

ರೂ.5 ಲಕ್ಷ ಹಣ ಪಡೆದುಕೊಂಡು 65 ವರ್ಷದ ಒಮಾನ್ ವೃದ್ಧನೊಂದಿಗೆ 16 ವರ್ಷದ ಹುಡುಗಿಯೊಬ್ಬಳು ವಿವಾಹವಾಗಿರುವ ಆಘಾತಕಾರಿ ಘಟನೆ ವರದಿಯಾಗಿದೆ...

ಹೈದರಾಬಾದ್: ರೂ.5 ಲಕ್ಷ ಹಣ ಪಡೆದುಕೊಂಡು 65 ವರ್ಷದ ಒಮಾನ್ ವೃದ್ಧನೊಂದಿಗೆ 16 ವರ್ಷದ ಹುಡುಗಿಯೊಬ್ಬಳು ವಿವಾಹವಾಗಿರುವ ಆಘಾತಕಾರಿ ಘಟನೆ ವರದಿಯಾಗಿದೆ. 
ಹೈದರಾಬಾದ್ ನ ನವಾಬ್ ಸಾಹೇಬ್ ಕುಂಟಾ ಪ್ರದೇಶದ ನಿವಾಸಿಯಾಗಿರುವ ಹುಡುಗಿಯ ತಾಯಿ ಸಯೀದಾ ಉನ್ನೀಸಾ ಎಂಬುವವರು ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನನ್ನ ಪತಿ ಹಾಗೂ ಅತ್ತಿಗೆ ಹಣ ಪಡೆದು ಪುತ್ರಿಯ ವಿವಾಹ ಮಾಡಿದ್ದಾರೆ. ಮಗಳು ಮಸ್ಕತ್ ನಿಂದ ಕರೆ ಮಾಡಿದ್ದಳು. ಈ ವೇಳೆ ನನ್ನನ್ನು ಇಲ್ಲಿಂದ ರಕ್ಷಿಸಿ ಕರೆದುಕೊಂಡು ಹೋಗದಿದ್ದರೆ, ಸತ್ತು ಹೋಗುತ್ತೇನೆಂದು ಹೇಳಿದಳು. ಬಾಲಕಿಯನ್ನು ಹಿಂದಕ್ಕೆ ಕರೆಸಿ ಕುಟುಂಬಕ್ಕೆ ಒಪ್ಪಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. 
ಮೂರು ತಿಂಗಳ ಹಿಂದೆ ಮಗಳ ವಿವಾಹ ನಡೆದಿದ್ದು, ರೂ.5 ಲಕ್ಷ ಕೊಟ್ಟಿರುವ 65 ವರ್ಷದ ಒಮನ್ ಪ್ರಜೆ ಮಸ್ಕತ್ ನಲ್ಲಿ ನೆಲೆಯೂರಿದ್ದಾರೆ. ನಮ್ಮ ಗಮನಕ್ಕೆ ಬರದಂತೆ ಹೋಟೆಲ್ ಒಂದರಲ್ಲಿ ವಿವಾಹ ನಡೆಸಲಾಗಿದೆ. ಒಮನ್ ಗೆ ತೆರಳಿದ ಬಳಿಕ ಆತ ವೀಸಾ ಕಳುಹಿಸಿ ಮಗಳನ್ನು ಕರೆಸಿಕೊಂಡಿದ್ದಾರೆ. ಇದೀಗ ನನ್ನ ಮಗಳು ಕಷ್ಟ ಅನುಭವಿಸುತ್ತಿದ್ದಾಳೆ. ಮಗಳನ್ನು ಹೈದಾರಾಬಾದ್ ಕಳುಹಿಸುವಂತೆ ಆತನಿಗೆ ಮನವಿ ಮಾಡಿದ್ದೆ. ಹಣ ಕೊಟ್ಟು ನಿಮ್ಮ ಮಗಳನ್ನು ಕೊಂಡುಕೊಂಡಿದ್ದೇನೆ. ಕೊಟ್ಟ ಹಣವನ್ನು ವಾಪಸ್ ನೀಡಿದರೆ, ಆಕೆಯನ್ನು ಕಳುಹಿಸುವುದಾಗಿ ಆತ ಹೇಳುತ್ತಿದ್ದಾನೆಂದು ತಾಯಿ ದೂರಿನಲ್ಲಿ ಹೇಳಿಕೊಂಡಿದ್ದಾರೆ. 
ಹುಡುಗಿಯ ತಾಯಿ ಹೇಳುವ ಪ್ರಕಾರ, ಆಕೆಯ ಪತಿಯ ಸಹೋದರಿ ಗೌಸಿಯಾ ಹಾಗೂ ಅಕೆಯ ಪತಿ ಸಿಕಂದರ್ ಇಬ್ಬರೂ ಸೇರಿ ಪುತ್ರಿಯ ವಿವಾಹ ಮಾಡಿದ್ದಾರೆ. ಹೈದರಾಬಾದ್ ಗೆ ಬಂದಿದ್ದ ಒಮಾನ್ ಶೇಖ್ ಅಹ್ಮದ್ ಗೆ ಮದುವೆ ಮಾಡಿದ್ದಾರೆ. 
ಮೊದಲಿಗೆ ಸಂಬಂಧ ಬಂದಾಗ ನಾನು ಮದುವೆಗೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದೆ. ಆದರೆ, ಸಿಕಂದರ್ ಬರ್ಕಾಸ್ ನ ಹೋಟೆಲ್ ನಲ್ಲಿ ಖಾಜಿಯ ಮೂಲಕ ಬಲವಂತವಾಗಿ ಮದುವೆ ಮಾಡಿದ್ದಾನೆ. ಇದೀಗ ಮಗಳು ಮಸ್ಕತ್ ನಲ್ಲಿದ್ದು, ಕೆಲ ದಿನಗಳ ಹಿಂದಷ್ಟೇ ಕರೆ ಮಾಡಿದ್ದಳು. ನನ್ನ ರಕ್ಷಿಸುವಂತೆ ತಿಳಿಸಿದಳು. ಬಳಿಕ ವಿವಾಹ ವ್ಯಕ್ತಿಯನ್ನು ಸಂಪರ್ಕಿಸಿದರೆ, ಮದುವೆಗಾಗಿ ನಾನು ರೂ.5 ಲಕ್ಷ ನೀಡಿದ್ದೆ, ಅದನ್ನು ಹಿಂತಿರುಗಿಸಿದರೆ ಹುಡುಗಿಯನ್ನು ಭಾರತಕ್ಕೆ ವಾಪಸ್ ಕಳುಹಿಸುತ್ತೇನೆಂದು ಹೇಳುತ್ತಿದ್ದಾರೆ. 
ಒಮಾನ್ ನಲ್ಲಿ ಶೇಖ್ ಐಷಾರಾಮಿ ಜೀವನ ನಡೆಸುತ್ತಿದ್ದು, ಮದುವೆಯಾದ ಬಳಿಕ ಉತ್ತಮ ಭವಿಷ್ಯವಿದೆ ಎಂದು ಹುಡುಗಿಯನ್ನು ನಂಬಿಸಲಾಗಿದೆ ಎಂದು ಸಯೀದಾ ಉನ್ನೀಸಾ ಹೇಳಿಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT