ಛತ್ತೀಸ್ಗಢ: ಬಿಜೆಪಿ ನಾಯಕನ ಮಾಲೀಕತ್ವದ ಗೋಶಾಲೆಯಲ್ಲಿ 150 ಹಸುಗಳ ಸಾವು 
ದೇಶ

ಛತ್ತೀಸ್ಗಢ: ಬಿಜೆಪಿ ನಾಯಕನ ಮಾಲೀಕತ್ವದ ಗೋಶಾಲೆಯಲ್ಲಿ 150 ಹಸುಗಳ ಸಾವು

ಬಿಜೆಪಿ ನಾಯಕನ ಮಾಲೀಕತ್ವದಲ್ಲಿ ನಡೆಸಲಾಗುತ್ತಿದ್ದ ಗೋಶಾಲೆಯೊಂದರಲ್ಲಿ ಸೂಕ್ತ ಆರೈಕೆ ಹಾಗೂ ಹಸಿವಿನಿಂದಾಗಿ 150 ಹಸುಗಳು ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ...

ರಾಯ್ಬುರ; ಬಿಜೆಪಿ ನಾಯಕನ ಮಾಲೀಕತ್ವದಲ್ಲಿ ನಡೆಸಲಾಗುತ್ತಿದ್ದ ಗೋಶಾಲೆಯೊಂದರಲ್ಲಿ ಸೂಕ್ತ ಆರೈಕೆ ಹಾಗೂ ಹಸಿವಿನಿಂದಾಗಿ 150 ಹಸುಗಳು ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. 
ಛತ್ತೀಸ್ಗಢ ದುರ್ಗ್ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಗೋಶಾಲೆಯಲ್ಲಿ ಒಟ್ಟು 150 ಹಸುಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ. 
ಗೋಶಾಲೆಯಲ್ಲಿ ಹಸುಗಳಉ ಸಾವನ್ನಪ್ಪುತ್ತಿರುವುದಾಗಿ ಕೆಲ ಸ್ಥಳೀಯ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಬಳಿ ದೂರು ನೀಡಿದ್ದರು. ದೂರಿನ ಅನ್ವಯ ಜಿಲ್ಲಾ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ರಾಜೇಶ್ ಪಾತ್ರೆಯವರು ಬಿಜೆಪಿ ನಾಯಕ ಹರೀಶ್ ವರ್ಮಾ ಪಾತ್ರೆ ಮಾಲೀಕತ್ವದ ಗೋಶಾಲೆಗೆ ಭೇಟಿ ನೀಡಿದ್ದರು. ಈ ವೇಳೆ ಹಸಿವು ಹಾಗೂ ಸೂಕ್ತ ಆರೈಕೆಗಳಿಲ್ಲದೆಯೇ 150 ಹಸುಗಳು ಸಾವನ್ನಪ್ಪಿವೆ ಎಂದು ದೃಢೀಕರಿಸಿದ್ದಾರೆ. 
ಪ್ರಕರಣ ಸಂಬಂಧ ತನಿಖೆಗಾಗಿ ಪ್ರಾಣಿ ಸಂಗೋಪನೆಯ ಉಪ ನಿರ್ದೇಶಕರ ನೇತೃತ್ವದಲ್ಲಿ ನಾಲ್ಕು ಸದಸ್ಯರ ತಂಡವೊಂದನ್ನು ನೇಮಿಸಲಾಗಿದೆ. ಹಸುಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಹಸುಗಳ ಮಾರಣಹೋಮಕ್ಕೆ ಕಾರಣ ತಿಳಿದುಬರಲಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT