ಹೆಣ್ಣಾಗಿ ಹುಟ್ಟಿದ್ದ ಕೇರಳದ ಆರವ್ ಅಪ್ಪುಕುಟ್ಟನ್ (ಎಡಭಾಗ) ಹಾಗೂ ಸುಕನ್ಯ ಕೃಷ್ಣ 
ದೇಶ

ಪುರುಷನಾಗಿದ್ದ ಮಹಿಳೆಯನ್ನು ವಿವಾಹವಾಗಲಿರುವ ಮಹಿಳೆಯಾಗಿದ್ದ ಪುರುಷ!

ಹೆಡ್ಡಿಂಗ್ ನೋಡಿಯೇ ತಲೆ ಗಿರ್ ಎಂದಿರಬೇಕಲ್ವಾ? ಆದರೂ ಇದು ನಿಜ. ವಿಷಯ ಏನು ಅಂದ್ರೆ, ಹೆಣ್ಣಾಗಿ ಹುಟ್ಟಿದ್ದ ಕೇರಳದ ಆರವ್ ಅಪ್ಪುಕುಟ್ಟನ್ (46) ಪುರುಷನಾಗಿ ಹುಟ್ಟಿದ್ದ ಈಗ ಮಹಿಳೆಯಾಗಿ ಲಿಂಗ ಪರಿವರ್ತನೆ..

ಹೆಡ್ಡಿಂಗ್ ನೋಡಿಯೇ ತಲೆ ಗಿರ್ ಎಂದಿರಬೇಕಲ್ವಾ? ಆದರೂ ಇದು ನಿಜ. ವಿಷಯ ಏನು ಅಂದ್ರೆ, ಹೆಣ್ಣಾಗಿ ಹುಟ್ಟಿದ್ದ ಕೇರಳದ ಆರವ್ ಅಪ್ಪುಕುಟ್ಟನ್ (46) ಪುರುಷನಾಗಿ ಹುಟ್ಟಿದ್ದ ಈಗ ಮಹಿಳೆಯಾಗಿ ಲಿಂಗ ಪರಿವರ್ತನೆ ಹೊಂದಿರುವ ಸುಕಾನ್ಯ ಕೃಷ್ಣ (22) ನ್ನು ವಿವಾಹವಾಗಲಿದ್ದಾರೆ. 
ಸುಕನ್ಯ ಕೃಷ್ಣ ತನ್ನ ಕುಟುಂಬದವರೊಂದಿಗೆ ಫೋನ್ ನಲ್ಲಿ ಮಾತನಾಡುತ್ತಿರಬೇಕಾದರೆ ಕದ್ದಾಲಿಕೆ ಮಾಡಿದ್ದೆ. ಸಾಂದರ್ಭಿಕ ಸಂಭಾಷಣೆ ನಡೆಸುತ್ತಿರಬೇಕಾದರೆ ದೂರವಾಣಿ ಸಂಖ್ಯೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡೆವು ಎಂದು ಆರವ್ ಅಪ್ಪುಕುಟ್ಟನ್ ಹೇಳಿದ್ದಾರೆ. ಹೆಣ್ಣಾಗಿ ಹುಟ್ಟಿದ್ದ ಅಪ್ಪುಕುಟ್ಟನ್ 13 ವರ್ಷದವಳಾಗಿದ್ದಾಗ ಹೆಣ್ಣುಮಕ್ಕಳೆಡೆಗೆ ಹೆಚ್ಚು ಆಕರ್ಷಿತರಾಗಿದ್ದರಂತೆ, ಈ ವಿಲಕ್ಷಣ ಸ್ಥಿತಿಯನ್ನು ಗಮನಿಸಿದ್ದ ಆಕೆಯ ತಾಯಿ ವೈದ್ಯರ ಬಳಿಗೆ ಕರೆದೊಯ್ದಾಗ ಪ್ರೌಢವಸ್ಥೆ ತಲುಪುವಾಗ ಹಾರ್ಮೋನ್ ಗಳ ಅಸಮತೋಲನದಿಂದ ಈ ರೀತಿಯಾಗುತ್ತದೆ, ಕೆಲವು ವರ್ಷಗಳ ನಂತರವೂ ಇದೇ ರೀತಿ ಇದ್ದರೆ ಚಿಕಿತ್ಸೆ ಪಡೆಯಬಹುದು ಎಂದಿದ್ದರಂತೆ. ಆದರೆ ದಿನ ಕಳೆದಂತೆ ಆಕೆಯಲ್ಲಿನ ವಿಲಕ್ಷಣ  ಬದಲಾವಣೆಗಳು ಹೆಚ್ಚುತ್ತಿತ್ತು, ಈ ನಡುವೆಯೇ ತಾಯಿಯನ್ನು ಕಳೆದುಕೊಂಡು, ತನ್ನ ಸಮಸ್ಯೆಗಳತ್ತ ಗಮನ ಹರಿಸುವ ಮುನ್ನ ಒಡಹುಟ್ಟಿದವರ ಸಮಸ್ಯೆಗಳನ್ನೂ ಬಗೆಹರಿಸಬೇಕಿತ್ತು, ಈ ನಡುವೆ ತಂದೆ ಮತ್ತೊಂದು ವಿವಾಹವಾದರು ಎಂದು ಅಪ್ಪುಕುಟ್ಟನ್ ಹೇಳಿದ್ದಾರೆ. 
ಇನ್ನು ಸುಕನ್ಯ ಕೃಷ್ಣ ಅವರದ್ದೂ ಇದೇ ಕಥೆಯಾಗಿದ್ದು, ಗಂಡಾಗಿ ಜನಿಸಿದರೂ ಹಾರ್ಮೋನ್ ವ್ಯತ್ಯಯ ಸಮಸ್ಯೆ ಎದುರಿಸುತ್ತಿದ್ದರು. ಪೋಷಕರು  ವೈದ್ಯರ ಬಳಿಗೆ ಕರೆದೊಯ್ದೊಡನೆಯೇ ಪುರುಷ ಹಾರ್ಮೋನ್ ಚಿಕಿತ್ಸೆಯನ್ನು ಪ್ರಾರಂಭಿಸಿದರು, ಆದರೆ ನನ್ನೊಳಗೆ ಏನಾಗುತ್ತಿದೆ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ. ನಂತರದ ದಿನಗಳಲ್ಲಿ ಲಿಂಗ ಪರಿವರ್ತನೆಗೊಂಡರು.  ಸಾಫ್ಟೇರ್ ಇಂಜಿನಿಯರ್ ಆಗಿರುವ ಸುಕನ್ಯ ಕೃಷ್ಣ ಹೆಣ್ಣಾಗಿ ಹುಟ್ಟಿದ್ದ ಅಪ್ಪುಕುಟ್ಟನ್ ಅವರನ್ನು ವಿವಾಹವಾಗಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT